ಕರ್ನಾಟಕ

karnataka

ಸ್ಥಳೀಯ ವಾಹನಗಳಿಗೂ ಟೋಲ್ ಬಿಸಿ: ನಿಗದಿತ ದರಕ್ಕಿಂತ ಹೆಚ್ಚು ಹಣ ಕಡಿತ ಆರೋಪ, ಲಾರಿ ಮಾಲೀಕರ ಜೇಬಿಗೆ ಕತ್ತರಿ - Toll for local vehicles also

By ETV Bharat Karnataka Team

Published : Jul 2, 2024, 9:53 PM IST

ದಾವಣಗೆರೆ ಜಿಲ್ಲೆಯ ಏಕೈಕ ಟೋಲ್ ಗೇಟ್​ನಲ್ಲಿ ಸ್ಥಳೀಯ ವಾಹನಗಳಿಗೂ ಟೋಲ್ ಬಿಸಿ ಮುಟ್ಟಿದೆ. ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುವ ಆರೋಪ ಕೇಳಿ ಬಂದಿದೆ. ಪರಿಣಾಮ ಲಾರಿ ಮಾಲೀಕರ ಜೇಬಿಗೆ ಕತ್ತರಿ ಬಿದ್ದಿದೆ.

DEDUCTIONS ABOVE FIXED RATE  DAVANAGERE  TOLL GATE OF DAVANAGERE DISTRICT  TOLL FOR LOCAL VEHICLES ALSO
ದಾವಣಗೆರೆ ಜಿಲ್ಲೆಯ ಏಕೈಕ ಟೋಲ್ ಗೇಟ್​ (ETV Bharat)

ಸ್ಥಳೀಯ ವಾಹನಗಳಿಗೂ ಟೋಲ್ ಬಿಸಿ: ನಿಗದಿತ ದರಕ್ಕಿಂತ ಹೆಚ್ಚು ಹಣ ಕಡಿತ ಆರೋಪ, ಲಾರಿ ಮಾಲೀಕರ ಜೇಬಿಗೆ ಕತ್ತರಿ (ETV Bharat)

ದಾವಣಗೆರೆ:ದಾವಣಗೆರೆ ಜಿಲ್ಲೆಯ ಏಕೈಕ ಟೋಲ್ ಗೇಟ್​ನಲ್ಲಿ ಈ ಹಿಂದೆ, ಸ್ಥಳೀಯ ವಾಹನಗಳಿಗೆ ಟೋಲ್ ಸಿಬ್ಬಂದಿ ಕಡಿಮೆ ಹಣ ವಸೂಲಿ ಮಾಡುತ್ತಿದ್ದರು. ಆದರೆ, ಈ ಟೋಲ್​ನ ಟೆಂಡರ್ ಬದಲಾವಣೆ ಆಗಿರುವ ಹಿನ್ನೆಲೆ ಸ್ಥಳೀಯ ವಾಹನಗಳಿಗೂ ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಹೆಚ್ಚು ಹಣ ವಸೂಲಿ ಮಾಡುತ್ತಿರುವುದಕ್ಕೆ ಸ್ಥಳೀಯ ವಾಹನ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ.

ದಾವಣಗೆರೆ ತಾಲೂಕಿನ ಹೆಬ್ಬಾಳ ಗ್ರಾಮದ ಬಳಿ ಇರುವ ಟೋಲ್ ಗೇಟ್​ನಲ್ಲಿ ಸ್ಥಳೀಯ ವಾಹನ ಹಾಗೂ ಜಿಲ್ಲೆಯ ಹೊರ ಭಾಗದ ವಾಹನಗಳಿಗೆ ಒಂದೇ ದರ ನಿಗದಿ ಮಾಡಿ ಹಣ ವಸೂಲಿ ಮಾಡಲಾಗುತ್ತಿದೆ. ಸ್ಥಳೀಯ ವಾಹನ, ಲಾರಿಗಳ ದಾಖಲೆ ಕೊಟ್ಟು ನೋಂದಣಿ ಮಾಡಿಸಿದವರಿಂದಲೂ ಹೆಚ್ಚು ಹಣ ಪಡೆಯಲಾಗುತ್ತಿದೆ. ಈ ಮೊದಲು ಟೋಲ್​ನಲ್ಲಿ ನೋಂದಣಿ ಮಾಡಿಸಿದ ಸ್ಥಳೀಯ ಲಾರಿಗಳಿಗೆ ಕಡಿಮೆ ಹಣ ಅಂದರೆ, 200 ರೂ. ಮಾತ್ರ ವಸೂಲಿ ಮಾಡಲಾಗುತ್ತಿತ್ತು. ಇದೀಗ ಟೆಂಡರ್ ಬದಲಾವಣೆ ಆಗಿದ್ದರಿಂದ ಟೆಂಡರ್​ ಪಡೆದ ಏಜೆನ್ಸಿಯವರು ಇದೀಗ ಹೆಚ್ಚು ದರ ಮಾಡಿದ್ದಾರೆಂದು ಲಾರಿ ಮಾಲೀಕರು ಆರೋಪ ಮಾಡಿದ್ದಾರೆ.

"ಟೋಲ್ ಸಿಬ್ಬಂದಿ ಹೆಚ್ಚು ಹಣ ಪಡೆಯುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ನಮ್ಮ ಸಿಬ್ಬಂದಿ ಕಳುಹಿಸಿ ಪರಿಶೀಲನೆ ನಡೆಸಲಾಗುವುದು" ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಎಂ.ವಿ ಅವರು ಈಟಿವಿ ಭಾರತಕ್ಕೆ ತಿಳಿಸಿದರು.

''ದಾವಣಗೆರೆಯಲ್ಲಿ ಒಟ್ಟು 500ರಿಂದ 1000 ಸ್ಥಳೀಯ ಎಪಿಎಂಸಿ ಲಾರಿಗಳಿದ್ದು, ಎಲ್ಲ ಲಾರಿಗಳ ದಾಖಲೆಗಳನ್ನು ಟೋಲ್ ಸಿಬ್ಬಂದಿಗೆ ಕೊಟ್ಟು ನೋಂದಣಿ ಮಾಡಿಸಲಾಗಿದೆ. ಆದ್ರೂ ಕೂಡ ಟೋಲ್ ಸಿಬ್ಬಂದಿ ಕಿರಿಕಿರಿ ಹೆಚ್ಚಾಗಿದೆ. ಲೋಕಲ್ ಬಾಡಿಗೆಗೆ 400 ರಿಂದ 500 ಟೋಲ್ ವಸೂಲಿ ಮಾಡಿದ್ರೆ ಏನು ಮಾಡಬೇಕು'' ಎಂದು ಲಾರಿ ಮಾಲೀಕರು, ಚಾಲಕರು ಆರೋಪಿಸಿದ್ದಾರೆ.

ಹೆಬ್ಬಾಳ ಟೋಲ್ ಮ್ಯಾನೇಜರ್ ಪ್ರತಿಕ್ರಿಯೆ:"ದಾವಣಗೆರೆ ಹಾಗೂ ಚಿತ್ರದುರ್ಗ ನೋಂದಣಿ ಇರುವ ಲಾರಿಗಳ ದಾಖಲೆ ನೋಡಿ ಕಡಿಮೆ ಟೋಲ್ ವಸೂಲಿ ಮಾಡಲಾಗುತ್ತಿದೆ. ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ನೋಂದಣಿ ಲಾರಿಗಳಿಗೆ ಕಡಿಮೆ ಹಣ ಪಡೆಯುತ್ತಿದ್ದು, ಇವೆರೆಡು ಜಿಲ್ಲೆ ಬಿಟ್ಟು ಹೊರಜಿಲ್ಲೆ, ಹೊರರಾಜ್ಯ ಲಾರಿಗಳನ್ನು ತಡೆ ಹಿಡಿಯಲಾಗಿದೆ" ಎಂದು ಟೋಲ್ ಮ್ಯಾನೇಜರ್ ಪವನ ಚೋದ್ರಿ ತಿಳಿಸಿದ್ದಾರೆ.

ಇದನ್ನೂ ಓದಿ:ಚಾರಣಿಗರೇ ಗಮನಿಸಿ: ಒಂದೇ ವೆಬ್​ ಸೈಟ್​ನಲ್ಲಿ ರಾಜ್ಯದ ಎಲ್ಲ ಟ್ರೆಕ್ಕಿಂಗ್​ ಟಿಕೆಟ್ ಬುಕ್ಕಿಂಗ್​ - ಸಚಿವ ಈಶ್ವರ ಖಂಡ್ರೆ - Trekking Ticket Booking

ABOUT THE AUTHOR

...view details