ಕರ್ನಾಟಕ

karnataka

ಸತತ ಮಳೆಯಿಂದ ರಾಜ್ಯದ ಜಲಾಶಯಗಳು ಭರ್ತಿ: ತುಂಗಾ ಅಣೆಕಟ್ಟೆ ಸುತ್ತಮುತ್ತ ನಿಷೇಧಾಜ್ಞೆ - Dam Water Level

By ETV Bharat Karnataka Team

Published : Aug 3, 2024, 1:24 PM IST

ಉತ್ತಮ ಮಳೆಯಿಂದ ರಾಜ್ಯದ ಪ್ರಮುಖ ಜಲಾಶಯಗಳ ನೀರಿನಮಟ್ಟದಲ್ಲಿ ನಿರಂತರ ಏರಿಕೆಯಾಗುತ್ತಿದೆ. ಕೆಆರ್‌ಎಸ್, ಕಬಿನಿ, ತುಂಗಾ, ಭದ್ರಾ, ಆಲಮಟ್ಟಿ, ನಾರಾಯಣಪುರ, ಜಲಾಶಯಗಳು ಭಾಗಶಃ ಭರ್ತಿಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅಪಾರ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಯಾವ ಯಾವ ಜಲಾಶಯಗಳು ಎಷ್ಟು ಪ್ರಮಾಣದ ನೀರಿನ ಸಾಮರ್ಥ್ಯ ಹೊಂದಿವೆ, ಯಾವ ಜಲಾಶಯಗಳು ಎಷ್ಟು ಪ್ರಮಾಣದ ಒಳ ಮತ್ತು ಹೊರ ಹರಿವು ಇದೆ ಎಂಬ ಮಾಹಿತಿ ಇಲ್ಲಿದೆ.

DAM WATER LEVEL
ತುಂಗಾ ಅಣೆಕಟ್ಟೆ (ETV Bharat)

ಬೆಂಗಳೂರು: ಕರಾವಳಿ, ಮಲೆನಾಡು ಹಾಗೂ ಮಡಿಕೇರಿ ಸೇರಿದಂತೆ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಕೆಆರ್‌ಎಸ್ ಸಂಪೂರ್ಣ ಭರ್ತಿಯಾಗಿದ್ದು, ಅಪಾರ ಪ್ರಮಾಣದ ನೀರು ಹೊರ ಬಿಡಲಾಗುತ್ತಿದೆ. ತುಂಗಾ ಮತ್ತು ಭದ್ರಾ ಜಲಾಶಯ ಕೂಡ ಭರ್ತಿಯಾಗಿದ್ದು ಅವುಗಳಿಂದಲೂ ಅಪಾರ ಪ್ರಮಾಣದ ನೀರು ಹೊರಬಿಡುತ್ತಿರುವುದರಿಂದ ಜಲಾಶಯದ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಆದೇಶ ಪ್ರತಿ (ETV Bharat)
ಆದೇಶ ಪ್ರತಿ (ETV Bharat)

ಕೆಆರ್​ಎಸ್​ ಜಲಾಶಯ:

  • ಗರಿಷ್ಠ ಮಟ್ಟ : 124 ಅಡಿ (ft)
  • ಇಂದಿನ ಮಟ್ಟ : 123.24 ಅಡಿ (ft)
  • ಇಂದಿನ‌ ಒಳ ಹರಿವು : 73,500 ಕ್ಯೂಸೆಕ್​​
  • ಇಂದಿನ‌ ಹೊರ ಹರಿವು : 58,667 ಕ್ಯೂಸೆಕ್​​

ಕಬಿನಿ ಜಲಾಶಯ:

  • ಗರಿಷ್ಠ ಮಟ್ಟ : 2284 ಅಡಿ (ft)
  • ಇಂದಿನ ಮಟ್ಟ : 2280.61 ಅಡಿ (ft)
  • ಇಂದಿನ‌ ಒಳ ಹರಿವು : 32,559 ಕ್ಯೂಸೆಕ್​​
  • ಇಂದಿನ‌ ಹೊರ ಹರಿವು : 33,771 ಕ್ಯೂಸೆಕ್​​

ಮಲಪ್ರಭಾ ನದಿ, ರೇಣುಕಾ ಸಾಗರ(ನವೀಲು ತೀರ್ಥ) ಜಲಾಶಯ

  • ಗರಿಷ್ಠ ಮಟ್ಟ : 2079.50 ಅಡಿ
  • ಒಟ್ಟು ಸಾಮರ್ಥ್ಯ : 37.731 ಟಿಎಂಸಿ
  • ಇಂದಿನ ನೀರಿ‌ನ ಮಟ್ಟ : 33.122 ಟಿಎಂಸಿ (2076.10 ಅಡಿ)
  • ಇಂದಿನ‌ ಒಳ ಹರಿವು : 17,397 ಕ್ಯೂಸೆಕ್
  • ಇಂದಿನ‌ ಹೊರ ಹರಿವು : 11,594 ಸಾವಿರ ಕ್ಯೂಸೆಕ್

ಘಟಪ್ರಭಾ ನದಿ, ರಾಜಾಲಖಮಗೌಡ (ಹಿಡಕಲ್) ಜಲಾಶಯ

  • ಗರಿಷ್ಠ ಮಟ್ಟ : 2175 ಅಡಿ (ft)
  • ಒಟ್ಟು ಸಾಮರ್ಥ್ಯ : 51 ಟಿಎಂಸಿ
  • ಇಂದಿನ ನೀರಿ‌ನ ಮಟ್ಟ : 47.595 ಟಿಎಂಸಿ (2170.633 ಅಡಿ)
  • ಇಂದಿನ‌ ಒಳಹರಿವು : 34,387 ಕ್ಯೂಸೆಕ್
  • ಇಂದಿನ‌ ಹೊರ ಹರಿವು: 34,387 ಕ್ಯೂಸೆಕ್

ತುಂಗಾ ಜಲಾಶಯ:

  • ಒಟ್ಟು ಎತ್ತರ : 588.24 ಮೀಟರ್
  • ಇಂದಿನ ನೀರಿನ ಮಟ್ಟ : 587.96 ಮೀಟರ್
  • ಇಂದಿನ‌ ಒಳ ಹರಿವು : 11,486.0 ಕ್ಯೂಸೆಕ್
  • ಇಂದಿನ‌ ಹೊರ ಹರಿವು : 10,659.00 ಕ್ಯೂಸೆಕ್

ಭದ್ರಾ ಜಲಾಶಯ:

  • ಒಟ್ಟು ಎತ್ತರ : 186 ಅಡಿ (ft)
  • ಇಂದಿನ ನೀರಿನ ಮಟ್ಟ : 182 ಅಡಿ (ft)
  • ಇಂದಿನ‌ ಒಳ ಹರಿವು : 30,350 ಕ್ಯೂಸೆಕ್
  • ಇಂದಿನ‌ ಹೊರ ಹರಿವು : 56,032 ಕ್ಯೂಸೆಕ್

ಲಿಂಗನಮಕ್ಕಿ ಜಲಾಶಯ:

  • ಒಟ್ಟು ಎತ್ತರ : 1819
  • ಇಂದಿನ ನೀರಿನ ಮಟ್ಟ : 1815.35 ಅಡಿ
  • ಇಂದಿನ‌ ಒಳ ಹರಿವು : 61,835.00 ಕ್ಯೂಸೆಕ್
  • ಇಂದಿನ‌ ಹೊರ ಹರಿವು : 3,590.00 ಕ್ಯೂಸೆಕ್

ಆಲಮಟ್ಟಿ ಜಲಾಶಯ:

  • ಒಟ್ಟು ಎತ್ತರ : 519.60 ಮೀಟರ್​
  • ಇಂದಿನ ನೀರಿನ ಪ್ರಮಾಣ : 515.65 ಮೀಟರ್​
  • ಇಂದಿನ ನೀರಿನ ಒಳಹರಿವು : 3,19,916 ಕ್ಯೂಸೆಕ್
  • ಇಂದಿನ‌ ನೀರಿನ ಹೊರ ಹರಿವು : 3,02,555 ಕ್ಯೂಸೆಕ್
    ತುಂಗಾ ಅಣೆಕಟ್ಟೆ (ETV Bharat)

ತುಂಗಾ ಜಲಾಶಯ ಸುತ್ತ ನಿಷೇಧಾಜ್ಞೆ: ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆಯಲ್ಲಿ ಸತತ ಮಳೆಯಿಂದ ತುಂಬಿ ಹರಿಯುತ್ತಿರುವ ತುಂಗಾ ಜಲಾಶಯ ಸುತ್ತ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು 30 ದಿನ ನಿಷೇಧಾಜ್ಞೆ ಹೊರಡಿಸಿ ಆದೇಶ ನೀಡಿದ್ದಾರೆ. ಈಗಾಗಲೇ ಡ್ಯಾಂ ತುಂಬಿ ಹರಿಯುತ್ತಿರುವುದರಿಂದ ಅಣೆಕಟ್ಟೆಯ ಭದ್ರತಾ ದೃಷ್ಟಿಯಿಂದ ಹಾಗೂ ಡ್ಯಾಂ ವೀಕ್ಷಿಸಲು ಸಾಕಷ್ಟು ಜನ ಆಗಮಿಸುತ್ತಿದ್ದಾರೆ. ಅಲ್ಲದೇ ರೈತರು ಬಾಗಿನ ಅರ್ಪಿಸಲು ಆಗಮಿಸುತ್ತಿದ್ದಾರೆ. ಇದರಿಂದ ಅಣೆಕಟ್ಟೆಯ ಹಿತದೃಷ್ಟಿಯಿಂದ ಸುರಕ್ಷೆ ವಹಿಸುವುದು ಕಷ್ಟಕರ. ಹಾಗಾಗಿ ಅಣೆಕಟ್ಟೆಯ ಸುತ್ತ 144 ಸಕ್ಷನ್ ಜಾರಿ ಮಾಡುವಂತೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.

ಮನವಿ ಪುರಸ್ಕರಿಸುವ ಜಿಲ್ಲಾಧಿಕಾರಿಗಳು, ಈಗಾಗಲೇ ಮಳೆಯ ಕುರಿತು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಜಲಾಶಯದ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಆಗಸ್ಟ್ 3 ರಿಂದ ಸೆಪ್ಟಂಬರ್ 2ರ ವರೆಗೂ ತುಂಗಾ ಜಲಾಶಯದ ಪ್ರದೇಶದ ಸುತ್ತಮುತ್ತು 500 ಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023 ಕಲಂ 165 ರಂತೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಮಾಡಿದ್ದಾರೆ.

ಅದರಂತೆ, ಅಣೆಕಟ್ಟೆಯ ಸುತ್ತ 5 ಜನಕ್ಕಿಂತ ಹೆಚ್ಚಿನ ಜನ ಗುಂಪು ಸೇರುವಂತಿಲ್ಲ, ಭದ್ರಾ ನದಿಯ ಎಡ ಮತ್ತು ಬಲ ದಂಡೆಯಲ್ಲಿ ನೀರಿಗೆ ಇಳಿದು ಪೋಟೊ ತೆಗೆದುಕೊಳ್ಳುವಂತಿಲ್ಲ, ಅಣೆಕಟ್ಟೆಯ ಗೇಟ್​ನಲ್ಲಿ ಗುಂಪುಗೂಡುವುದು, ಡ್ಯಾಂ ಮೇಲೆ ಹೋಗುವುದು ನಿಷೇಧಿಸಿದೆ. ಅಣೆಕಟ್ಟೆಯ ಸೆಕ್ಯೂರಿಟಿ, ಸಿಬ್ಬಂದಿಗೆ ಯಾವುದೇ ತೊಂದರೆ ಕೊಡುವಂತಿಲ್ಲ, ಬಾಗಿನ ನೀಡಲು ಬರುವವರು ನೀರಿನಲ್ಲಿ ಇಳಿಯುವಂತಿಲ್ಲ, ಈಜುವಂತಿಲ್ಲ, ನಿಷೇಧಾಜ್ಞೆ ಸಯಮದಲ್ಲಿ ಆಯುಧ, ಶಸ್ತ್ತಾಸ್ತ್ರ ಹಾಗೂ ಮಾರಾಕಾಸ್ತ್ರ ಹಿಡಿದು ಓಡಾಡುವಂತಿಲ್ಲ, ಸಾರ್ವಜನಿಕರ ಅಸ್ತಿ ಪಾಸ್ತಿಗೆ ಹಾನಿಯನ್ನುಂಟು ಮಾಡುವಂತಿಲ್ಲ, ಕಾನೂನು ಸುವಸ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯ ಮಾಡುವಂತಿಲ್ಲ ಎಂದು ಆದೇಶ ನೀಡಿದ್ದಾರೆ.

ಇದನ್ನೂ ಓದಿ:ಸುಳ್ಯದ ಅರಣ್ಯದೊಳಗಿದೆ ಒಂದು ವಿಸ್ಮಯಕಾರಿ ಬಾವಿ: ಏನಿದರ ವಿಶೇಷತೆ? - An amazing well in Sulya

ABOUT THE AUTHOR

...view details