ಕರ್ನಾಟಕ

karnataka

ರೇಣುಕಾಸ್ವಾಮಿ ಕೊಲೆ ಪ್ರಕರಣ: ಮೈಸೂರಿನ ಹೋಟೆಲ್​ಗೆ ಇಬ್ಬರು ಆರೋಪಿಗಳನ್ನು ಕರೆತಂದು ಮಹಜರು - Renukaswamy murder case

By ETV Bharat Karnataka Team

Published : Jun 18, 2024, 4:22 PM IST

Updated : Jun 18, 2024, 6:27 PM IST

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಆಪ್ತರಾದ ಪ್ರಕರಣದ 11ನೇ ಆರೋಪಿ ನಾಗರಾಜ್ ಹಾಗೂ 12ನೇ ಆರೋಪಿ ಲಕ್ಷ್ಮಣ್ ನನ್ನು ಪೊಲೀಸರು ಮಂಗಳವಾರ ನಗರದ ಖಾಸಗಿ ಹೋಟೆಲ್​ಗೆ ಕರೆತಂದು ಮಹಜರು ನಡೆಸಿದರು. ಹೋಟೆಲ್ ಬಳಿ ಅಭಿಮಾನಿಗಳು ಜಮಾಯಿಸುವ ಹಿನ್ನೆಲೆ ನಟ ದರ್ಶನ್​ ಅವರನ್ನು ಸ್ಥಳ ಮಹಜರಿಗೆ ಕರೆತರಲಾಗಿರಲಿಲ್ಲ.

ಮೈಸೂರಿನ ಹೋಟೆಲ್​ಗೆ ದರ್ಶನ್​ ಬಿಟ್ಟು, ಇಬ್ಬರು ಆರೋಪಿಗಳನ್ನು ಕರೆತಂದು ಮಹಜರು
ಮೈಸೂರಿನ ಹೋಟೆಲ್​ಗೆ ದರ್ಶನ್​ ಬಿಟ್ಟು, ಇಬ್ಬರು ಆರೋಪಿಗಳನ್ನು ಕರೆತಂದು ಮಹಜರು (ETV Bharat)

ಮೈಸೂರಿನ ಹೋಟೆಲ್​ಗೆ ಇಬ್ಬರು ಆರೋಪಿಗಳನ್ನು ಕರೆತಂದು ಮಹಜರು (ETV Bharat)

ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಇಂದು 11ನೇ ಆರೋಪಿ ನಾಗರಾಜ್ ಹಾಗೂ 12ನೇ ಆರೋಪಿ ಲಕ್ಷ್ಮಣ್ ನನ್ನು ಪೊಲೀಸರು ನಗರದ ಖಾಸಗಿ ಹೋಟೆಲ್​ಗೆ ಕರೆದುಕೊಂಡು ಬಂದು ಮಹಜರು ನಡೆಸಿದರು. ಲಕ್ಷ್ಮಣ್, ದರ್ಶನ್ ಕಾರ್ ಡ್ರೈವರ್ ಆಗಿದ್ದಾರೆ. ನಾಗರಾಜ್, ದರ್ಶನ್ ಆಪ್ತ ಕಾರ್ಯದರ್ಶಿ ಆಗಿದ್ದಾರೆ.

ಪೊಲೀಸರು ಎರಡು ಗಂಟೆಗೂ ಹೆಚ್ಚು ಕಾಲ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಮಾಹಿತಿ ಕಲೆ ಹಾಕಿ ನಂತರ ಆರೋಪಿಗಳಾದ ನಾಗರಾಜ್ ಮತ್ತು ಲಕ್ಷ್ಮಣ್ ಅವರನ್ನ ಬೆಂಗಳೂರಿಗೆ ಕರೆದೊಯ್ದರು. ಪೊಲೀಸರು ಇಂದು ಖಾಸಗಿ ಹೋಟೆಲ್​ನಲ್ಲಿ ಸ್ಥಳ ಮಹಜರು ನಡೆಸಲು ದರ್ಶನ್​ ಅವರನ್ನು ಸಹ ಕರೆತರುತ್ತಾರೆ ಎಂಬ ಮಾಹಿತಿ ಇತ್ತು. ಇದರಿಂದ ಅಭಿಮಾನಿಗಳ ದಂಡೇ ಹೋಟೆಲ್ ಬಳಿ ಜಮಾಯಿಸುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ನಟ ದರ್ಶನ್​ ಅವರನ್ನು ಬಿಟ್ಟು ಇಬ್ಬರು ಆರೋಪಿಗಳನ್ನು ಮಾತ್ರ ಪೊಲೀಸರು ಹೋಟೆಲ್​ಗೆ ಕರೆತಂದು ಸ್ಥಳ ಮಹಜರು ನಡೆಸಿದರು.

ಇನ್ನು ರೇಣುಕಾಸ್ವಾಮಿ ಕೊಲೆ ಸಂಬಂಧ ಬೆಂಗಳೂರು ಪೊಲೀಸರು ಜೂನ್ 10 ರಂದು ನಗರದ ಖಾಸಗಿ ಹೋಟೆಲ್​ನಲ್ಲಿ ನಟ ದರ್ಶನ್​ರನ್ನು ವಶಕ್ಕೆ ಪಡೆದಿದ್ದರು. ಬಳಿಕ ಅವರನ್ನು ಬೆಂಗಳೂರಿಗೆ ಕರೆದೊಯ್ದಿದ್ದರು.

ಇದನ್ನೂ ಓದಿ:ರೇಣುಕಾಸ್ವಾಮಿ ಹತ್ಯೆ ಕೇಸ್​: ಪೊಲೀಸರು ಸ್ವಲ್ಪ ಎಚ್ಚರ ತಪ್ಪಿದ್ದರೂ ಪ್ರಕರಣ ದಾರಿ ತಪ್ಪುತ್ತಿತ್ತು ಎಂದ ಪೊಲೀಸ್ ಆಯುಕ್ತರು - Renukaswamy murder case

Last Updated : Jun 18, 2024, 6:27 PM IST

ABOUT THE AUTHOR

...view details