ಕರ್ನಾಟಕ

karnataka

ETV Bharat / state

ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು ಆರೋಪ; ವಿಮ್ಸ್ ಎದುರು ಪೋಷಕರ ಪ್ರತಿಭಟನೆ - CHILD DEATH

ಜನಿಸಿದ ಮಗು ಕೆಲ ಸಮಯದಲ್ಲೇ ಮೃತಪಟ್ಟಿದೆ ಎಂದು ಆರೋಪಿಸಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆ ಎದುರು ಪೋಷಕರು ಪ್ರತಿಭಟನೆ ನಡೆಸಿದರು.

protest-in-front-of-vims-hospital-regarding-child-death
ವಿಮ್ಸ್ ಆಸ್ಪತ್ರೆಯೆದುರು ಮಗುವಿನ ಸಂಬಂಧಿಕರು (ETV Bharat)

By ETV Bharat Karnataka Team

Published : Dec 5, 2024, 9:52 PM IST

Updated : Dec 5, 2024, 10:24 PM IST

ಬಳ್ಳಾರಿ:ವೈದ್ಯರ ನಿರ್ಲಕ್ಷ್ಯದಿಂದ ಹುಟ್ಟಿದ ಕೆಲವೇ ಹೊತ್ತಲ್ಲಿ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿದ ಪೋಷಕರು, ವಿಮ್ಸ್ ಆಸ್ಪತ್ರೆಯೆದುರು ಇಂದು ಪ್ರತಿಭಟನೆ ನಡೆಸಿದರು.

ಸಿರಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ಬಾಣಂತಿ ಗಂಗೋತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಯ ಬಳಿಕ ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದರು. ನಂತರ ಮಗು ಸಾವನ್ನಪ್ಪಿದೆ ಎಂದು ಹೇಳಿದರು ಎಂದು ಪೋಷಕರು ಆರೋಪಿಸಿದ್ದಾರೆ.

ಪೋಷಕರು ಹೇಳುವುದೇನು?: ಮೊದಲು ನಾರ್ಮಲ್ ಹೆರಿಗೆ ಎಂದಿದ್ರು. ಕೊನೆಯ ಕ್ಷಣದಲ್ಲಿ ಸಿಜೇರಿಯನ್ ಹೆರಿಗೆ ಮಾಡಲಾಗಿದೆ. ಸಿಜೇರಿಯನ್ ಬಳಿಕ ಮಗು ಸಾವಾಗಿದೆ. ವೈದ್ಯರ ನಿರ್ಲಕ್ಷ್ಯದಿಂದಲೇ ಘಟನೆ ನಡೆದಿದೆ ಎಂಬುದು ಪೋಷಕರ ಆಕ್ರೋಶ.

ವೈದ್ಯರ ಸ್ಪಷ್ಟನೆ: ಗರ್ಭದಲ್ಲಿ ಮಲ ತಿಂದು ಶ್ವಾಸಕೋಶದ ತೊಂದರೆಯಿಂದ ಮಗು ಸಾವನ್ನಪ್ಪಿದೆ. ನಾರ್ಮಲ್ ಹೆರಿಗೆಯಾಗಲಿ, ಸಿಜೇರಿಯನ್ ಮಾಡುವುದು ಬೇಡ ಎಂದು ಕುಟುಂಬಸ್ಥರು ತಡೆದಿದ್ದರು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ:ಲಸಿಕೆ ಓವರ್ ಡೋಸ್​ನಿಂದ ಮಗು ಸಾವು ಆರೋಪ: ಕಿಮ್ಸ್​​ ವೈದ್ಯರ ಸ್ಪಷ್ಟನೆ

Last Updated : Dec 5, 2024, 10:24 PM IST

ABOUT THE AUTHOR

...view details