ಕರ್ನಾಟಕ

karnataka

ವಿಶ್ವ ಆನೆ ದಿನಾಚರಣೆ: ಸಕ್ರೆಬೈಲಿನ ಕ್ಯಾಂಪ್​​ಗೆ ಅಶ್ವಥಾಮ ಸೇರ್ಪಡೆ - new elephant

By ETV Bharat Karnataka Team

Published : Aug 13, 2024, 9:13 AM IST

ಕಳೆದ ವರ್ಷ ಸೆರೆ ಹಿಡಿದು ಪಳಗಿಸಿದ ಕಾಡಾನೆಯನ್ನು ನಿನ್ನೆ ಸಕ್ರೆಬೈಲು ಕ್ಯಾಂಪ್​ಗೆ ತಂದು ಅಶ್ವಥಾಮ ಎಂದು ನಾಮಕರಣ ಮಾಡಲಾಗಿದೆ.

ಕಾಡಾನೆಗೆ ಅಶ್ವಥಾಮ ನಾಮಕರಣ
ಕಾಡಾನೆಗೆ ಅಶ್ವಥಾಮ ನಾಮಕರಣ (ETV Bharat)

ಸಕ್ರೆಬೈಲಿನ ಕ್ಯಾಂಪ್​​ಗೆ ಅಶ್ವಥಾಮ ಸೇರ್ಪಡೆ (ETV Bharat)

ಶಿವಮೊಗ್ಗ:ರಾಜ್ಯದ ಪ್ರಸಿದ್ಧ ಆನೆ ಬಿಡಾರಗಳಲ್ಲಿ ಒಂದಾದ ತುಂಗಾ ತಟದ ಸಕ್ರೆಬೈಲು ಆನೆ ಬಿಡಾರದಲ್ಲಿ ಸೋಮವಾರ ವಿಶ್ವ ಆನೆಗಳ ದಿನಾಚರಣೆಯನ್ನು ಆಚರಿಸಲಾಯಿತು.

ವಿಶ್ವ ಆನೆಗಳ ದಿನಾಚರಣೆಯ ಅಂಗವಾಗಿ 2023ರ ನವೆಂಬರ್ 16 ರಂದು ಚಿಕ್ಕಮಗಳೂರು ಜಿಲ್ಲೆ ಮೂಡುಗೆರೆಯ ಆಲ್ದೂರು ಸಮೀಪ ಒಂದು ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು. ಈ ಆನೆಯನ್ನು ಪಳಗಿಸಿ, ನಿನ್ನೆ ಕ್ಯಾಂಪ್‌ಗೆ ಕರೆ ತರಲಾಗಿದೆ. ಆನೆಗಳ ದಿನಾಚರಣೆ ದಿನವೇ ಈ ಆನೆಗೆ ಅಶ್ವಥಾಮ ಎಂದು ನಾಮಕರಣ ಮಾಡಲಾಗಿದೆ ಎಂದು ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಎಫ್​ಒ ಪ್ರಸನ್ನ ಪಟಗಾರ ಅವರು ತಿಳಿಸಿದ್ದಾರೆ.

ಸದ್ಯ ಸಕ್ರೆಬೈಲು ಆನೆ ಬಿಡಾರದಲ್ಲಿ ಒಟ್ಟು 17 ಗಂಡು ಆನೆಗಳು ಹಾಗೂ 6 ಹೆಣ್ಣಾನೆಗಳಿವೆ. ಈ ವೇಳೆ ಸಕ್ರೆಬೈಲು ಆನೆ ಬಿಡಾರದ ವೈದ್ಯಾಧಿಕಾರಿ ವಿನಯ್ ಸೇರಿದಂತೆ ಇತರೆ ಅಧಿಕಾರಿಗಳಿದ್ದರು.

ಇದನ್ನೂ ಓದಿ:ಮಾನವ-ಆನೆ ಸಂಘರ್ಷ: ಆನೆ ತಜ್ಞೆ ಡಾ.ಮೆಕಾಲೆ ಕಾರ್ಗೆ ಹೇಳುವುದೇನು? - Elephant Human Conflict

ABOUT THE AUTHOR

...view details