ಕರ್ನಾಟಕ

karnataka

ಹೇಮಾವತಿ ಲಿಂಕ್ ಎಕ್ಸ್​ಪ್ರೆಸ್ ಕಾಮಗಾರಿ ನಿಲ್ಲಿಸಲು ಇಂಜಿನಿಯರ್​ಗೆ ಶಾಸಕ ಕೃಷ್ಣಪ್ಪ ಸೂಚನೆ - MLA M T Krishnappa

By ETV Bharat Karnataka Team

Published : May 10, 2024, 5:41 PM IST

ಹೇಮಾವತಿ ಲಿಂಕ್ ಎಕ್ಸ್​ಪ್ರೆಸ್ ಕೆನಾಲ್ ಕಾಮಗಾರಿ ನಿಲ್ಲಿಸುವಂತೆ ಇಂಜಿನಿಯರ್​ಗೆ ಶಾಸಕ ಎಂ.ಟಿ. ಕೃಷ್ಣಪ್ಪ ಸೂಚಿಸಿದ್ದಾರೆ.

mla krishnappa
ಶಾಸಕ ಕೃಷ್ಣಪ್ಪ ಹಾಗೂ ಇತರ ನಾಯಕರು (ETV Bharat)

ಇಂಜಿನಿಯರ್​ ಜೊತೆ ಶಾಸಕ ಕೃಷ್ಣಪ್ಪ ಮಾತು (ETV Bharat)

ತುಮಕೂರು:ಹೇಮಾವತಿ ನದಿ ನೀರನ್ನು ಮಾಗಡಿ ತಾಲೂಕಿಗೆ ಹಂಚಿಕೆ ಮಾಡುವ ಹೇಮಾವತಿ ಲಿಂಕ್ ಎಕ್ಸ್​ಪ್ರೆಸ್ ಕೆನಾಲ್ ಕಾಮಗಾರಿಯನ್ನು ತಕ್ಷಣ ನಿಲ್ಲಿಸುವಂತೆ ಸಂಬಂಧಪಟ್ಟ ಇಂಜಿನಿಯರ್​ಗೆ ಶಾಸಕ ಎಂ.ಟಿ. ಕೃಷ್ಣಪ್ಪ ಖಡಕ್​ ಸೂಚನೆ ನೀಡಿದ್ದಾರೆ. ಈ ಬಗ್ಗೆ ಫೋನ್​ ಕರೆಯಲ್ಲಿ ಮಾತನಾಡಿದ ಅವರು, ಮಾಗಡಿ ತಾಲೂಕಿಗೆ ನಡೆಯುತ್ತಿರುವ ಕಾಮಗಾರಿ ಬಗ್ಗೆ ಇಂಜಿನಿಯರ್​ ಜೊತೆ ತುರುವೇಕೆರೆಯಲ್ಲಿ ಮಾತನಾಡಿದರು.

ಕೆನಾಲ್ ಕಾಮಗಾರಿ ವಿರೋಧಿಸಿ ಕರೆದಿದ್ದ ಪತ್ರಿಕಾಗೋಷ್ಠಿಯ ವೇಳೆ ಶಾಸಕರು ಹಾಗೂ ಇಂಜಿನಿಯರ್ ನಡುವೆ ಈ ಫೋನ್​ ಸಂಭಾಷಣೆ ನಡೆದಿದೆ. ಎಕ್ಸ್​ಪ್ರೆಸ್ ಕೆನಾಲ್ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು ಎಂದು ಹೇಮಾವತಿ ಜಲಾನಯನ ಅಭಿವೃದ್ಧಿ ಇಲಾಖೆ ಇಂಜಿನಿಯರ್​ಗೆ ಶಾಸಕರು ಸೂಚಿಸಿದರು. ಇದೇ ವೇಳೆ, ತಮ್ಮ ವಿರುದ್ಧ ಪ್ರಕರಣ ದಾಖಲಿಸುವಂತೆಯೂ ಸವಾಲು ಹಾಕಿದರು.

ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸಿ.ಎಸ್.ಪುರ ಗ್ರಾಮದ ಬಳಿ ಕೆಲಸ ಮಾಡದಂತೆ ಇಂಜಿನಿಯರ್​ಗೆ​​ ತಿಳಿಸಿದರು. ಇಲಾಖೆಯ ಎಂಡಿಗೆ ನಿನ್ನೆ ದೂರವಾಣಿ ಮೂಲಕ ಕೆಲಸ ನಿಲ್ಲಿಸುವಂತೆ ಹೇಳಿದ್ದೇನೆ ಎಂದು ಇಂಜಿನಿಯರ್​ಗೆ ಫೋನ್​ ಕರೆಯಲ್ಲೇ ಮಾಹಿತಿ ನೀಡಿದರು.

ತಕ್ಷಣ ಕೆಲಸ ನಿಲ್ಲಿಸಿ, ಇಲ್ಲದಿದ್ದರೆ ನಾನೇ ಬಂದು ಕೆಲಸ ನಿಲ್ಲಿಸುತ್ತೇನೆ. ಇಂಜಿನಿಯರ್ ರವಿ ಅವರೇ ತಕ್ಷಣ ಕಾಮಗಾರಿ ನಿಲ್ಲಿಸಬೇಕು, ಇಲ್ಲದಿದ್ದರೆ 16ನೇ ತಾರೀಖಿನಿಂದ ನಾವು ಎಲ್ಲವನ್ನೂ ಮುಚ್ಚುತ್ತೇವೆ ಎಂದು ಖಡಕ್​ ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ಕುಡಿವ ನೀರು ನಿರ್ವಹಣೆ ಸಭೆ ನಡೆಸಲು ನೀತಿ ಸಂಹಿತೆ ವಿನಾಯಿತಿ ಕೋರಿದ ಪ್ರಿಯಾಂಕ್ ಖರ್ಗೆ - Minister Priyank Kharge

ABOUT THE AUTHOR

...view details