ಕರ್ನಾಟಕ

karnataka

ETV Bharat / state

Karnataka News Today - Live Updates: ಕರ್ನಾಟಕ Sun Oct 27 2024 ಇತ್ತೀಚಿನ ಸುದ್ದಿ

Etv Bharat
Etv Bharat (Etv Bharat)

By Karnataka Live News Desk

Published : Oct 27, 2024, 7:15 AM IST

Updated : 18 hours ago

11:02 PM, 27 Oct 2024 (IST)

ಅನ್ನದಾತರಿಗೆ ದೀಪಾವಳಿ ಗಿಫ್ಟ್ ನೀಡಿದ ಕೇಂದ್ರ ಸರ್ಕಾರ ; ಭತ್ತಕ್ಕೆ 2300 ರೂ. ಬೆಂಬಲ ಬೆಲೆ - ಸಚಿವ ಜೋಶಿ

ದೀಪಾವಳಿ ಹಬ್ಬದ ಪ್ರಯುಕ್ತ ಕೇಂದ್ರ ಸರ್ಕಾರ ಭತ್ತದ ಬೆಳೆಗಾರರಿಗೆ ಬೆಂಬಲ ಬೆಲೆಯ ಗಿಫ್ಟ್​ ನೀಡಿದೆ. | Read More

ETV Bharat Live Updates - PRALHAD JOSHI

10:36 PM, 27 Oct 2024 (IST)

ಚಾಮರಾಜನಗರ: ಸಾವಯವ ಸಂತೆ ತೆರೆದು ಮದುವೆಯಾದ ಪ್ರಗತಿಪರ ರೈತ

ವಸಂತ ಕುಮಾರ್ ಎನ್ನುವ ರೈತ ಯಾವುದೇ ಶಾಸ್ತ್ರ- ಸಂಪ್ರದಾಯಗಳಿಲ್ಲದೇ, ಸಾವಯವ ಸಂತೆ ಏರ್ಪಡಿಸಿ, ವಿಶೇಷ ವಚನ ಕಲ್ಯಾಣ ಮಹೋತ್ಸವದ ಮೂಲಕ ರಾಧಿಕಾ ಎನ್ನುವವರನ್ನು ಕೈಹಿಡಿದಿದ್ದಾರೆ. | Read More

ETV Bharat Live Updates - MARRIAGE

10:31 PM, 27 Oct 2024 (IST)

ಭರತ್ ಬೊಮ್ಮಾಯಿ ಸಿಎಂ ಆಗುವುದೇ ಬೊಮ್ಮಾಯಿ ಕುಟುಂಬದ ಶಾಶ್ವತ ಗ್ಯಾರಂಟಿ : ಯಾಸೀರ್ ​ಖಾನ್ ಪಠಾಣ್

ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ​ಖಾನ್ ಪಠಾಣ್ ಅವರು ಸಂಸದ ಬಸವರಾಜ ಬೊಮ್ಮಾಯಿ ಅವರ ಶಾಶ್ವತ ಗ್ಯಾರಂಟಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. | Read More

ETV Bharat Live Updates - YASIR KHAN PATHAN

10:28 PM, 27 Oct 2024 (IST)

ಯುವಕರಿಗೂ ಶಕ್ತಿ ಯೋಜನೆ ಟಿಕೆಟ್ ಕೊಟ್ಟ ಆರೋಪ: ನಿರ್ವಾಹಕನ ವಿರುದ್ಧ ಕ್ರಮಕ್ಕೆ ಆಗ್ರಹ

ಯುವಕರಿಂದ ಹಣ ಪಡೆದು ಅವರಿಗೆ ಶಕ್ತಿ ಯೋಜನೆಯ ಟಿಕೆಟ್​ ನೀಡುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದ್ದು, ಆ ಕಂಡಕ್ಟರ್​ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. | Read More

ETV Bharat Live Updates - TICKET

09:37 PM, 27 Oct 2024 (IST)

ಆದಷ್ಟು ಬೇಗ ದರ್ಶನ್ ಬಿಡುಗಡೆಯಾಗಲಿ ; ಹಾಸನಾಂಬೆ ದೇವಿ ಬಳಿ ತರುಣ್ ಸುಧೀರ್ ಪ್ರಾರ್ಥನೆ

ನಟ, ನಿರ್ದೇಶಕ ತರುಣ್ ಸುಧೀರ್​ ಪತ್ನಿಯೊಂದಿಗೆ ಹಾಸನಾಂಬೆ ದೇವಸ್ಥಾನಕ್ಕೆ ಆಗಮಿಸಿ, ಆದಷ್ಟು ಬೇಗ ದರ್ಶನ್ ಬಿಡುಗಡೆಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. | Read More

ETV Bharat Live Updates - THARUN SUDHIR

08:40 PM, 27 Oct 2024 (IST)

ಕೊಪ್ಪಳ : ಗ್ರಾಮ ಆಡಳಿತಾಧಿಕಾರಿ ಪರೀಕ್ಷೆಗೆ ಬಂದ ಅಭ್ಯರ್ಥಿಗಳ ತುಂಬು ತೋಳಿಗೆ ಕತ್ತರಿ

ಕೊಪ್ಪಳ ಜಿಲ್ಲೆಯಲ್ಲಿ ಗ್ರಾಮ ಆಡಳಿತಾಧಿಕಾರಿ ಪರೀಕ್ಷೆಗೆ ಬಂದ ಅಭ್ಯರ್ಥಿಗಳು ತಮ್ಮ ಶರ್ಟ್​ನ ತುಂಬು ತೋಳನ್ನ ಕತ್ತರಿಸಿದ ನಂತರ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಪಡೆದಿದ್ದಾರೆ. | Read More

ETV Bharat Live Updates - FULL SLEEVE SHIRTS CUT OFF

08:10 PM, 27 Oct 2024 (IST)

ಭಾರತ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡ ಬಿಎಂಟಿಸಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನೀಡುವ 'ಅವಾರ್ಡ್ ಆಫ್ ಎಕ್ಸೆಲೆನ್ಸ್ ಇನ್ ಅರ್ಬನ್ ಟ್ರಾನ್ಸ್​​ಪೋರ್ಟ್' ಪ್ರಶಸ್ತಿ ಪಡೆದಿದೆ. | Read More

ETV Bharat Live Updates - BMTC WON THE AWARD

08:01 PM, 27 Oct 2024 (IST)

ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ ಸುಗಮ ; ಶೇ. 80 ರಷ್ಟು ಮಂದಿ ಹಾಜರು

ಗ್ರಾಮ ಆಡಳಿತ ಅಧಿಕಾರಿಯ ಲಿಖಿತ ಪರೀಕ್ಷೆ ಸುಗಮವಾಗಿ ನಡೆದಿದ್ದು, ಪರೀಕ್ಷೆಗೆ ಶೇ. 80 ರಷ್ಟು ಮಂದಿ ಹಾಜರಾಗಿದ್ದರು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್​. ಪ್ರಸನ್ನ ತಿಳಿಸಿದ್ದಾರೆ. | Read More

ETV Bharat Live Updates - VAO EXAM

07:57 PM, 27 Oct 2024 (IST)

ದೀಪಾವಳಿ: ಬೆಂಗಳೂರಲ್ಲಿ ಖಾಸಗಿ ಬಸ್ ದರ​ ಏರಿಕೆ ದೂರು, ಸಾರಿಗೆ ಅಧಿಕಾರಿಗಳಿಂದ ಕ್ರಮ

ದೀಪಾವಳಿ ಹಬ್ಬದ ಪ್ರಯುಕ್ತ ಜನರು ನಗರಗಳಿಂದ ತಮ್ಮ ಊರುಗಳತ್ತ ಮುಖ ಮಾಡಿದ್ದು, ಖಾಸಗಿ ಬಸ್​​ಗಳ ಟಿಕೆಟ್​​ ದರ ಏರಿಕೆ ಸಂಬಂಧ ದೂರುಗಳ ಹಿನ್ನೆಲೆಯಲ್ಲಿ ಸಾರಿಗೆ ಅಧಿಕಾರಿಗಳು ಪರಿಶೀಲನೆ ಕೈಗೊಂಡಿದ್ದಾರೆ. | Read More

ETV Bharat Live Updates - BENGALURU

07:53 PM, 27 Oct 2024 (IST)

ಏನೇ ಕುತಂತ್ರ ಮಾಡಿದರೂ ಜನರು ನಿಖಿಲ್​ನನ್ನು ಗೆಲ್ಲಿಸುತ್ತಾರೆ: ಹೆಚ್​.ಡಿ. ಕುಮಾರಸ್ವಾಮಿ

ಚನ್ನಪಟ್ಟಣ ಜನರು ನಿಖಿಲ್​ಗೆ ಅಭಿಮನ್ಯು ಅಲ್ಲ, ಅರ್ಜುನನ ಪಾತ್ರ ಕೊಡ್ತಾರೆ ಎಂದು ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿ ಹೇಳಿದರು. | Read More

ETV Bharat Live Updates - NIKHIL KUMARASWAMY

07:50 PM, 27 Oct 2024 (IST)

ಗೆಜೆಟ್ ದೋಷದಿಂದಾಗಿ ಹೊನವಾಡ ಗ್ರಾಮದ ರೈತರ ಜಮೀನು ವಿಷಯದಲ್ಲಿ ಗೊಂದಲ: ಸಚಿವ ಎಂ.ಬಿ. ಪಾಟೀಲ್

ರೈತರ ಭೂಮಿಗಳ ಬಗೆಗಿನ ಈ ಗೊಂದಲಗಳ ಬಗ್ಗೆ ಕಂದಾಯ ಇಲಾಖೆ ಹಾಗೂ ವಕ್ಫ್ ಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಗೆಹರಿಸಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ್​ ತಿಳಿಸಿದರು. | Read More

ETV Bharat Live Updates - VIJAYAPURA

07:19 PM, 27 Oct 2024 (IST)

ಚನ್ನಪಟ್ಟಣ ಉಪಚುನಾವಣೆ ರದ್ದುಗೊಳಿಸಿ: ವಾಟಾಳ್ ನಾಗರಾಜ್ ಆಗ್ರಹ

ಉಪಚುನಾವಣೆಯಲ್ಲಿ ರದ್ದುಗೊಳಿಸುವ ಮೂಲಕ ಚುನಾವಣಾ ಆಯುಕ್ತರು ಚನ್ನಪಟ್ಟಣದಲ್ಲಿ ಒಂದು ವೋಟ್​ಗೆ 2,500 ರಿಂದ ಲಕ್ಷ ರೂ. ವರೆಗೆ ಹಂಚುತ್ತಿರುವ ಅವ್ಯವಹಾರವನ್ನು ತಡೆಗಟ್ಟಬೇಕು ಎಂದು ವಾಟಾಳ್​ ನಾಗರಾಜ್​ ಒತ್ತಾಯಿಸಿದರು. | Read More

ETV Bharat Live Updates - MYSURU

06:25 PM, 27 Oct 2024 (IST)

ಮಳೆ ಬಳಿಕ ಬೆಂಗಳೂರಲ್ಲಿ ಹೆಚ್ಚಿದ ಸಾಂಕ್ರಾಮಿಕ ರೋಗಗಳ ಭೀತಿ: ಮಾರ್ಗಸೂಚಿ ಪ್ರಕಟಿಸಿದ ಬಿಬಿಎಂಪಿ

ಬೆಂಗಳೂರಿನಲ್ಲಿ ಮಳೆ ನಿಂತಿದ್ದರೂ ಒಂದೆಡೆ ಶೇಖರಣೆಯಾದ ನೀರಿನಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಶುರುವಾಗಿದೆ. | Read More

ETV Bharat Live Updates - BENGALURU

05:54 PM, 27 Oct 2024 (IST)

ವಕ್ಫ್ ಬೋರ್ಡ್ ನೋಟಿಸ್ ವಿವಾದ ; ಸರ್ಕಾರಕ್ಕೆ 15 ದಿನದ ಗಡುವು ನೀಡಿದ ಬಿಜೆಪಿ

ವಿಜಯಪುರ ಜಿಲ್ಲೆಯ ರೈತರಿಗೆ ವಕ್ಫ್​​ ಆಸ್ತಿ ಎಂದು ನೀಡಿರುವ ನೋಟಿಸ್ ವಾಪಸ್ ಪಡೆದು ಪಹಣಿ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಕ್ಕೆ ಬಿಜೆಪಿ 15 ದಿನಗಳ ಗಡುವು ನೀಡಿದೆ. | Read More

ETV Bharat Live Updates - WAQF LAND DISPUTE

05:11 PM, 27 Oct 2024 (IST)

ಶಿಗ್ಗಾವಿ ಉಪಚುನಾವಣೆ ; ಭರತ್ ಬೊಮ್ಮಾಯಿ ಪರ ತಾಯಿ ಚೆನ್ನಮ್ಮ ಮತಯಾಚನೆ

ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ತಾಯಿ ಚೆನ್ನಮ್ಮ ಬೊಮ್ಮಾಯಿ ಮತಯಾಚನೆ ಪ್ರಾರಂಭಿಸಿದ್ದಾರೆ. | Read More

ETV Bharat Live Updates - CHANNAMMA BOMMAI CAMPAIGNING

05:06 PM, 27 Oct 2024 (IST)

ನಿಖಿಲ್ ಎರಡು ಬಾರಿ ಸೋತಿದ್ರು, ಆಗ ಅಭಿಮನ್ಯು ಆಗಿರಲಿಲ್ವಾ: ಹೆಚ್​ಡಿಕೆಗೆ ಸಿಎಂ ತಿರುಗೇಟು

ನಿಖಿಲ್ ಕುಮಾರಸ್ವಾಮಿ ಮಂಡ್ಯ, ರಾಮನಗರದಲ್ಲಿ ಸೋತಿದ್ದಾರೆ. ಈಗ ಇದ್ದಕ್ಕಿದ್ದಂತೆ ಅರ್ಜುನ ಆಗುತ್ತಾರಾ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. | Read More

ETV Bharat Live Updates - H D KUMARASWAMY

04:44 PM, 27 Oct 2024 (IST)

ಮಳೆಯಿಂದಾಗಿ ಜೀವಕಳೆ ಪಡೆದ ಮುತ್ಯಾಲಮಡುವು ಜಲಪಾತ; ಜಲಸಿರಿಗೆ ಮನಸೋತ ಪ್ರವಾಸಿಗರು

ಮಳೆಯಿಂದಾಗಿ ಮುತ್ಯಾಲಮಡುವು ಫಾಲ್ಸ್ ಇದೀಗ ಭೋರ್ಗರೆಯುತ್ತಿದೆ. ಹೀಗಾಗಿ ವಿವಿಧೆಡೆಯಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸಿ, ಎಂಜಾಯ್ ಮಾಡುತ್ತಿದ್ದಾರೆ. | Read More

ETV Bharat Live Updates - MUTHYALA MADUVU FALLS

04:13 PM, 27 Oct 2024 (IST)

ಹುಬ್ಬಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಸೂಕ್ತ ದಾಖಲೆಗಳಿಲ್ಲದ 264 ವಾಹನಗಳು ವಶಕ್ಕೆ

ಸೂಕ್ತ ದಾಖಲೆಗಳಿಲ್ಲದ 264 ವಾಹನಗಳನ್ನು ವಶಕ್ಕೆ ಪಡೆಯಾಗಿದೆ ಎಂದು ಹು - ಧಾ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ. | Read More

ETV Bharat Live Updates - DHARWAD

04:06 PM, 27 Oct 2024 (IST)

ಮಾಜಿ ಸಿಎಂ ಎಸ್.ಬಂಗಾರಪ್ಪ ಜನ್ಮದಿನ: ಮೂವರು ಸಾಧಕರಿಗೆ ಪ್ರಶಸ್ತಿ ಪ್ರದಾನ

ತಂದೆಯ ಜನ್ಮದಿನದ ಪ್ರಯುಕ್ತ ಸಚಿವ ಮಧು ಬಂಗಾರಪ್ಪ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ್​ ಮತ್ತು ನಟ ಹಾಗೂ ಅಳಿಯ ಶಿವರಾಜ್​ಕುಮಾರ್​ ಪತ್ನಿ ಸಮೇತ ಭಾಗವಹಿಸಿದರು. | Read More

ETV Bharat Live Updates - AWARDED TO THREE ACHIEVERS

03:21 PM, 27 Oct 2024 (IST)

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ತಾತ್ಕಾಲಿಕ: ಭರತ್ ಬೊಮ್ಮಾಯಿ

ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ನೀಡಿರುವುದು ಶಾಶ್ವತ ಗ್ಯಾರಂಟಿ. ನಾವು ಪರ್ಮನೆಂಟ್ ಕೆಲಸಗಳನ್ನೇ ಮಾಡೋದು ಎಂದು ಶಿಗ್ಗಾಂವಿ ಬಿಜೆಪಿ ಅಭ್ಯರ್ಥಿ ಭರತ್​ ಬೊಮ್ಮಾಯಿ ಹೇಳಿದರು. | Read More

ETV Bharat Live Updates - GUARANTEE SCHEMES

03:18 PM, 27 Oct 2024 (IST)

ಹಳ್ಳಿಕಾರ ಸಮುದಾಯವನ್ನು ಪ್ರವರ್ಗ 1ಕ್ಕೆ ಸೇರಿಸುವ ಬೇಡಿಕೆ ಬಗ್ಗೆ ವರದಿ ತರಿಸಿ ನಂತರ ತೀರ್ಮಾನ : ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಅವರು ಹಳ್ಳಿಕಾರ ಸಮುದಾಯದ ಕುರಿತು ಮಾತನಾಡಿದ್ದಾರೆ. ಸಮುದಾಯವನ್ನ ಪ್ರವರ್ಗ 1ಕ್ಕೆ ಸೇರಿಸಬೇಕು ಎನ್ನುವ ಬೇಡಿಕೆ ಬಗ್ಗೆ ವರದಿ ತರಿಸಿಕೊಂಡು ತೀರ್ಮಾನ ಮಾಡಲಾಗುವುದು ಎಂದು ಹೇಳಿದ್ದಾರೆ. | Read More

ETV Bharat Live Updates - HALLIKARA COMMUNITY

03:14 PM, 27 Oct 2024 (IST)

ಚಿಕ್ಕೋಡಿ: ಸಿನಿಮೀಯ ಶೈಲಿಯಲ್ಲಿ ನಸುಕಿನ ಜಾವ ಕಳ್ಳರನ್ನು ಹಿಡಿದ ಗ್ರಾಮಸ್ಥರು

ಐವರು ಕಳ್ಳರ ಪೈಕಿ ಇಬ್ಬರನ್ನು ಬಡಚಿ ಗ್ರಾಮಸ್ಥರು ಬಂಧಿಸಿ ಪೊಲೀಸರಿಗೆ ಹಸ್ತಾಂತರಿಸಿದ್ದು, ಇನ್ನುಳಿದ ಮೂವರು ಪರಾರಿಯಾಗಿದ್ದಾರೆ. | Read More

ETV Bharat Live Updates - BELAGAVI

02:14 PM, 27 Oct 2024 (IST)

ಶಾಸಕರು, ಮಂತ್ರಿಗಳೊಂದಿಗೆ ವಿಡಿಯೋ ಸಂವಾದ: ಒಗ್ಗಟ್ಟಿನಿಂದ ಕೆಲಸ ಮಾಡಿ, ಮೂರೂ ಕ್ಷೇತ್ರ ಗೆಲ್ಲುವಂತೆ ಸಿಎಂ-ಡಿಸಿಎಂ ಸೂಚನೆ

ಉಪ ಚುನಾವಣೆ ಹಿನ್ನೆಲೆಯಲ್ಲಿ ಮತ ಪ್ರಚಾರ, ಇನ್ನಿತರ ಕಾರ್ಯಗಳ ಕುರಿತಂತೆ ಶಾಸಕರು, ಮಂತ್ರಿಗಳ ಜೊತೆ ಸಿಎಂ ಹಾಗೂ ಡಿಸಿಎಂ ವಿಡಿಯೋ ಸಂವಾದ ನಡೆಸಿ ಸಲಹೆ, ಸೂಚನೆ ನೀಡಿದರು. | Read More

ETV Bharat Live Updates - BY ELECTIONS

02:08 PM, 27 Oct 2024 (IST)

ಕ್ಷೇತ್ರದ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಸ್ಪರ್ಧೆ ಮಾಡಿದ್ದೇನೆ: ನಿಖಿಲ್ ಕುಮಾರಸ್ವಾಮಿ

ಚನ್ನಪಟ್ಟಣ ಉಪಚುನಾವಣೆ ರಂಗೇರಿದೆ. ಇಂದು ಮೊದಲ ಬಾರಿಗೆ ಮಾಕಳಿ ಗ್ರಾಮದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಪ್ರಚಾರ ನಡೆಸಿದರು. | Read More

ETV Bharat Live Updates - RAMANAGARA

01:07 PM, 27 Oct 2024 (IST)

ಹಣತೆಗೆ ರಂಗು ತುಂಬುವ ವಿಶೇಷ ಚೇತನರು; ದೀಪಾವಳಿ ಹಬ್ಬಕ್ಕೆ ತಯಾರಿ

ಮಂಗಳೂರು ನಗರದಲ್ಲಿನ ಸಾನಿಧ್ಯ ವಿಶೇಷ ಮಕ್ಕಳ ಶಾಲೆಯಲ್ಲಿ 25 ವರ್ಷ ಮೇಲ್ಪಟ್ಟ ವಿಶೇಷ ಚೇತನರರು ಮಣ್ಣಿನ ಹಣತೆಗಳಿಗೆ ಹೊಸ ರಂಗು ನೀಡಿ ಶೃಂಗರಿಸುತ್ತಿದ್ದಾರೆ. ಈ ಹಣತೆಗಳಿಗೆ ಸ್ಥಳೀಯವಾಗಿ ಒಳ್ಳೆಯ ಬೇಡಿಕೆ ಇದೆ. | Read More

ETV Bharat Live Updates - MANGALURU

12:32 PM, 27 Oct 2024 (IST)

ಬಿಎಂಟಿಸಿ ಬಸ್ ಚಾಲಕ, ನಿರ್ವಾಹಕನ ಮೇಲೆ ಇಬ್ಬರಿಂದ ಹಲ್ಲೆ; ಪ್ರಕರಣ ದಾಖಲು

ಬಿಎಂಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. | Read More

ETV Bharat Live Updates - ASSAULT ON BMTC CONDUCTOR

11:58 AM, 27 Oct 2024 (IST)

ಪತ್ನಿ-ಪ್ರಿಯಕರನ ಖಾಸಗಿ ವಿಡಿಯೋ ಪ್ರಕಟಿಸುವುದಾಗಿ ಬೆದರಿಕೆ: ಪತಿ ವಿರುದ್ಧ ಎಫ್ಐಆರ್

ಪತಿಯೇ ತನ್ನ ಪತ್ನಿಯ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡುವುದಾಗಿ ಬೆದರಿಕೆ ಹಾಕಿರುವ ಪ್ರಕರಣ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. | Read More

ETV Bharat Live Updates - PRIVATE VIDEO THREAT

10:51 AM, 27 Oct 2024 (IST)

ಸ್ಕೂಟರ್‌ನಲ್ಲಿ ರಾತ್ರಿ ಸಿಟಿ ರೌಂಡ್ಸ್ ಹೊಡೆದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್

ಹುಬ್ಬಳ್ಳಿ-ಧಾರವಾಡದ ನಗರಗಳಲ್ಲಿ ಅಪರಾಧ ಪ್ರಕರಣಗಳು ಏರುತ್ತಿವೆ. ಇದಕ್ಕೆ ಕಡಿವಾಣ ಹಾಕಲೆಂದು ನಿನ್ನೆ(ಶನಿವಾರ) ರಾತ್ರಿ ಪೊಲೀಸ್​ ಕಮಿಷನರ್​ ಎನ್​. ಶಶಿಕುಮಾರ್ ಅವರು ತಮ್ಮ ಇಲಾಖೆಯ ಸಿಬ್ಬಂದಿಯೊಂದಿಗೆ​ ಬೈಕ್ ಮೂಲಕ ಸಿಟಿ ರೌಂಡ್ಸ್‌ ಮಾಡಿದರು. | Read More

ETV Bharat Live Updates - HUBBALLI

10:23 AM, 27 Oct 2024 (IST)

ಉಡುಪಿ: ಬೀಜಾಡಿ ಸಮುದ್ರದಲ್ಲಿ ಮುಳುಗಿ ಇಬ್ಬರು ಯುವಕರು ಸಾವು, ಇಬ್ಬರ ರಕ್ಷಣೆ

ಉಡುಪಿಯ ಬೀಜಾಡಿ ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಅಲೆಗಳ ಅಬ್ಬರಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. | Read More

ETV Bharat Live Updates - BEEJADI SEA

10:09 AM, 27 Oct 2024 (IST)

ಸುಪ್ರೀಂ ಕೋರ್ಟ್ ತೀರ್ಪನ್ನು ಕಾಗದದ ಹುಲಿ ಎನ್ನುವ ಜೋಶಿಗೆ ಸಚಿವರಾಗಿರಲು ಅರ್ಹತೆ ಇಲ್ಲ: ಈಶ್ವರ ಖಂಡ್ರೆ

ಪಟಾಕಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶಕ್ಕೆ ಸಚಿವ ಪ್ರಹ್ಲಾದ್​ ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಈಶ್ವರ ಖಂಡ್ರೆ, "ಕೋರ್ಟ್​ ತೀರ್ಪಿನ ಅನುಷ್ಠಾನ ಬೇಡವೆಂದಾದರೆ ಕೇಂದ್ರ ಸರ್ಕಾರದಿಂದ ಆದೇಶ ಹೊರಡಿಸಲಿ" ಎಂದಿದ್ದಾರೆ. | Read More

ETV Bharat Live Updates - ಪಟಾಕಿ

08:25 AM, 27 Oct 2024 (IST)

'ನನ್ನ ಸಿಡಿ ಇದ್ದರೆ ಧೈರ್ಯವಾಗಿ ಬಿಡುಗಡೆ ಮಾಡಿ' ಎಂದ ನಿಶಾ ಯೋಗೇಶ್ವರ್: ಡಿಕೆಶಿ ಸ್ಪಷ್ಟನೆ ಹೀಗಿದೆ

ನನ್ನ ಸಿಡಿ ಇಟ್ಟುಕೊಂಡು ನನ್ನ ತಂದೆಯನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಹೋಗಿದ್ದೀರಿ ಎಂದು ಸುದ್ದಿ ಪ್ರಸಾರವಾಗಿದೆ. ಇದಕ್ಕೆ ಡಿ.ಕೆ.ಶಿವಕುಮಾರ್​​ ಅವರು ಸ್ಪಷ್ಟನೆ ನೀಡಬೇಕು ಎಂದು ನಿಶಾ ಯೋಗೇಶ್ವರ್ ವಿಡಿಯೋ ಮೂಲಕ ಒತ್ತಾಯಿಸಿದ್ದರು. | Read More

ETV Bharat Live Updates - NISHA YOGESHWAR ALLEGATION

07:11 AM, 27 Oct 2024 (IST)

ಬೇಕರಿ, ಬಟ್ಟೆ ಅಂಗಡಿ, ಪೊಲೀಸ್ ಕಮಿಷನರ್ ಎಲ್ಲರಿಗೂ ಸೈಬರ್ ವಂಚಕರ ಉಪಟಳ!

ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಸೈಬರ್​ ವಂಚಕರ ಹಾವಳಿ ಹೆಚ್ಚಾಗುತ್ತಿದೆ. ಸಣ್ಣಪುಟ್ಟ ಅಂಗಡಿ ಮಾಲೀಕರಿಂದ ಹಿಡಿದು ನಗರ ಪೊಲೀಸ್​ ಕಮಿಷನರ್ ಅವರನ್ನೂ ಅವರು ಬಿಟ್ಟಿಲ್ಲ. | Read More

ETV Bharat Live Updates - KADABA
Last Updated : 18 hours ago

ABOUT THE AUTHOR

...view details