ಕರ್ನಾಟಕ

karnataka

ದೇವೇಗೌಡರ ಕುಟುಂಬದ ವಿರುದ್ಧ ಭೂ ಕಬಳಿಕೆ ಫ್ಲೆಕ್ಸ್​ ವಿರೋಧಿಸಿ ಪ್ರತಿಭಟನೆ: ಸಾ.ರಾ.ಮಹೇಶ್ ಜತೆ ಬೆಂಬಲಿಗರು ವಶಕ್ಕೆ - JDS protest

By ETV Bharat Karnataka Team

Published : Aug 9, 2024, 12:48 PM IST

ಕಾಂಗ್ರೆಸ್​ ಪಕ್ಷ ಜನಾಂದೋಲನ ದ್ವಾರದ ಸರ್ಕಲ್​ಗಳಲ್ಲಿ 'ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬ ಮೈಸೂರಿನಲ್ಲಿ ಭೂ ಕಬಳಿಕೆ ಪಕ್ಷಿನೋಟ' ಎಂದು ಹಾಕಿರುವ ಫ್ಲೆಕ್ಸ್ ವಿರುದ್ಧ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಸೇರಿ ಪ್ರತಿಭಟನೆ ನಡೆಸಿದರು.

ಫ್ಲೆಕ್ಸ್​ ವಿರೋಧಿಸಿ ಪ್ರತಿಭಟನೆ: ಸಾ.ರಾ.ಮಹೇಶ್ ಜತೆ ಬೆಂಬಲಿಗರು ವಶಕ್ಕೆ
ಫ್ಲೆಕ್ಸ್​ ವಿರೋಧಿಸಿ ಪ್ರತಿಭಟನೆ: ಸಾ.ರಾ.ಮಹೇಶ್ ಜತೆ ಬೆಂಬಲಿಗರು ವಶಕ್ಕೆ (ETV Bharat)

ದೇವೇಗೌಡರ ಕುಟುಂಬದ ವಿರುದ್ಧ ಭೂ ಕಬಳಿಕೆ ಫ್ಲೆಕ್ಸ್​ ವಿರೋಧಿಸಿ ಪ್ರತಿಭಟನೆ (ETV Bharat)

ಮೈಸೂರು: "ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬ ಮೈಸೂರಿನಲ್ಲಿ ಭೂ ಕಬಳಿಕೆ ಪಕ್ಷಿನೋಟ" ಎಂಬ ಫ್ಲೆಕ್ಸ್​ ಹಾಕಿರುವುದನ್ನು ಖಂಡಿಸಿ ಜೆಡಿಎಸ್​ ಕಾರ್ಯಕರ್ತರು ಮಾಜಿ ಸಚಿವ ಸಾ.ರಾ. ಮಹೇಶ್​​ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಮುಂಜಾಗ್ರತೆಯಾಗಿ ಪೊಲೀಸರು ಸಾ.ರಾ. ಮಹೇಶ್‌ ಹಾಗೂ ಇತರ ಬೆಂಬಲಿಗರನ್ನು ವಶಕ್ಕೆ ಪಡೆದರು.

ಇಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್‌ ಪಕ್ಷದ ಬೃಹತ್‌ ಜನಾಂದೋಲನ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಯಕ್ರಮದ ಸುತ್ತ ಪ್ರಮುಖ ರಸ್ತೆಗಳಲ್ಲಿ ಹಾಗೂ ವೃತ್ತಗಳಲ್ಲಿ ಕಾಂಗ್ರೆಸ್​​ ಪಕ್ಷದ ಪ್ರಮುಖ ನಾಯಕರ ಫ್ಲೆಕ್ಸ್​ಗಳನ್ನು ಹಾಕಲಾಗಿದೆ.

ಇದರ ಜತೆಗೆ ಪ್ರಮುಖ ಸರ್ಕಲ್​ಗಳಲ್ಲಿ 2023 ರ ಫೆಬ್ರವರಿ ತಿಂಗಳಿನಲ್ಲಿ ಬಿಜೆಪಿ ನೀಡಿರುವ ಜಾಹೀರಾತು ಎಂಬ ಅಡಿ ಬರಹದ ಕೆಳಗೆ "ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬದ ಭೂ ಕಬಳಿಕೆಯ ಪಕ್ಷಿ ನೋಟ" ಎಂಬ ಫ್ಲೆಕ್ಸ್​ ಹಾಕಲಾಗಿದೆ. ಅದರಲ್ಲಿ ದೇವೇಗೌಡರ ಕುಟುಂಬದ ಬಗ್ಗೆ ಹಾಗೂ ಆ ಕುಟುಂಬದ ಸದಸ್ಯರ ಭೂ ಕಬಳಿಕೆ ವಿವರಗಳನ್ನು ಹಾಕಲಾಗಿದೆ.

ಈ ಬಗ್ಗೆ ಜೆಡಿಎಸ್‌ ಮೈಸೂರು ಘಟಕ ಹಾಗೂ ಮಾಜಿ ಸಚಿವ, ಜೆಡಿಎಸ್​ ಮುಖಂಡ ಸಾ.ರಾ.ಮಹೇಶ್​ ನೇತೃತ್ವದಲ್ಲಿ ಫ್ಲೆಕ್ಸ್​ಗಳನ್ನು ಹಾಕಿರುವ ಕಡೆ ಆಗಮಿಸಿ ವಿರೋಧ ವ್ಯಕ್ತಪಡಿಸಿದರು. ಈ ವೇಳೆ, ಪೊಲೀಸರ ಜತೆ ಮಾತಿನ ಚಕಮಕಿ ನಡೆದಿದ್ದರಿಂದ ಸಾ.ರಾ. ಮಹೇಶ್​​​ ಹಾಗೂ ಇತರ ಮೈಸೂರು ನಗರದ ಜೆಡಿಎಸ್​ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಸದ್ಯ ಎಲ್ಲರನ್ನು ನಗರದ ಸಿಆರ್​ ಗ್ರೌಂಡ್​ನಲ್ಲಿ ಇಟ್ಟಿದ್ದು, ಅಲ್ಲಿಯೂ ಸಹ ಪ್ರತಿಭಟನೆ ನಡೆಸುತ್ತಿದ್ದಾರೆ. ಹೆಚ್ಚಿನ ಜೆಡಿಎಸ್‌ ಕಾರ್ಯಕರ್ತರು ಆಗಮಿಸುತ್ತಿದ್ದು, ಫ್ಲೆಕ್ಸ್​ಗಳನ್ನು ಹಾಕಿರುವ ಕಡೆ ಹೆಚ್ಚುವರಿ ಪೊಲೀಸ್​ ಬಂದೋಬಸ್ತ್‌ ಮಾಡಲಾಗಿದೆ.

ಇದನ್ನೂ ಓದಿ:2014ರಲ್ಲಿ ನಾನು ಸಿಎಂ ಆಗಿದ್ದಾಗಲೇ ಪತ್ನಿ ಮುಡಾ ಸೈಟ್​ಗೆ ಅರ್ಜಿ ಕೊಟ್ಟಿದ್ದರು: ಸಿದ್ದರಾಮಯ್ಯ - CM Siddaramaiah

ABOUT THE AUTHOR

...view details