ಕರ್ನಾಟಕ

karnataka

ನಿರ್ಲಕ್ಷ್ಯ ಮಾಡಿದರೆ ಗಲ್ಲಿ ಗಲ್ಲಿಗಳಲ್ಲಿ ಬಿಜೆಪಿ ಇಬ್ಭಾಗ: ಈಶ್ವರಪ್ಪ - K S Eshwarappa

By ETV Bharat Karnataka Team

Published : Aug 12, 2024, 3:03 PM IST

Updated : Aug 12, 2024, 5:15 PM IST

ಬಿಜೆಪಿ ನಾಯಕರು ಬೆಳಗಾವಿಯಲ್ಲಿ ಸಭೆ ನಡೆಸಿರುವ ಕುರಿತಾಗಿ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ

Shivamogga  KS Eshwarappa  BJP
ಕೆ.ಎಸ್.ಈಶ್ವರಪ್ಪ (ETV Bharat)

ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿ (ETV Bharat)

ಶಿವಮೊಗ್ಗ:''ನಿನ್ನೆ ಬಿಜೆಪಿಯ 12 ನಾಯಕರು ಬೆಳಗಾವಿಯಲ್ಲಿ ಸಭೆ ನಡೆಸಿದ್ದು, ನನಗೆ ಅಘಾತ ಉಂಟುಮಾಡಿದೆ'' ಎಂದು ಮಾಜಿ ಡಿಸಿಎಂ ಹಾಗೂ ರಾಷ್ಟ್ರಭಕ್ತರ ಬಳಗದ ಮುಖಂಡ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಗಲ್ಲಿ ಗಲ್ಲಿಗಳಲ್ಲಿ ಪಾರ್ಟಿ ಇಬ್ಭಾಗ: ಶಿವಮೊಗ್ಗ ಪ್ರೆಸ್ ಟ್ರಸ್ಟ್​ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ನಿನ್ನೆ ಸಭೆ ನಡೆಸಿದವರು ಸಂಘಟನೆಯಲ್ಲಿದ್ದು, ಪಕ್ಷ ಕಟ್ಟಿದವರು. ಇವರು ಏನೇನು ನೋವು ಅನುಭವಿಸುದ್ದಾರೆ ಎಂಬುದನ್ನು ಹೇಳಿಲ್ಲ. ಪಾದಯಾತ್ರೆ ನಡೆಸುವುದಾಗಿ ಹೇಳಿದ್ದಾರೆ. ಸಭೆ ನಡೆಸಿದವರು ಕೇವಲ ಹನ್ನೆರಡು ಜನ ಮಾತ್ರ ಅಂತ ಕೇಂದ್ರದ ನಾಯಕರು ತಾತ್ಸಾರ ಮಾಡಬಾರದು. ಅವರು ಪಾದಯಾತ್ರೆ ನಡೆಸಿದರೆ ಗಲ್ಲಿ ಗಲ್ಲಿಗಳಲ್ಲಿ ಪಾರ್ಟಿ ಎರಡಾಗುತ್ತದೆ'' ಎಂದರು.

''ಲೋಕಸಭೆ ಚುನಾವಣೆಯ ವೇಳೆಗೆ ವಿಜಯೇಂದ್ರರನ್ನು ಪಕ್ಷದ ಅಧ್ಯಕ್ಷರಾಗಿ ಮಾಡಿದ್ದು, ಎಲ್ಲರಿಗೂ ಅಚ್ಚರಿ ಉಂಟುಮಾಡಿತ್ತು. ಯಡಿಯೂರಪ್ಪ ಕುಟುಂಬದ ಕೈಗೆ ಅಧಿಕಾರ ನೀಡಿದ್ದಕ್ಕೆ ಲೋಕಸಭೆ ಚುನಾವಣೆಯಲ್ಲಿ ಬಜೆಪಿ 25 ಸೀಟಿನಿಂದ 17 ಸೀಟಿಗೆ ಇಳಿದಿದೆ" ಎಂದು ಟೀಕಿಸಿದರು.

''ಈ ಹಿಂದೆ ನಮ್ಮ ಪಕ್ಷದಲ್ಲಿ ಸಾಮೂಹಿಕ ನಾಯಕತ್ವ ಇತ್ತು. ಸಾಮೂಹಿಕ ನಾಯಕತ್ವದಲ್ಲಿಯೇ ಕೋರ್ ಕಮಿಟಿಯಲ್ಲಿ ಚರ್ಚೆ ನಡೆಯುತ್ತಿತ್ತು. ಯಡಿಯೂರಪ್ಪ‌ ಸ್ವಜನ ಪಕ್ಷಪಾತ ಮಾಡಿದ್ದಾರೆ. ಬಿಜೆಪಿಯಲ್ಲಿ ಹಿಂದೂತ್ವವೇ ಹೊರಟು ಹೋಗಿದೆ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಾಂಗ್ಲಾದೇಶದ ಹಿಂದೂಗಳಿಗೆ ರಕ್ಷಣೆ ನೀಡಿ:''ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುತ್ತಿದೆ. ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಬೇಕು'' ಎಂದು ಆಗ್ರಹಿಸಿದರು.

"ಸಲ್ಮಾನ್ ಖುರ್ಷಿದ್ ದೇಶದ್ರೋಹದ ಹೇಳಿಕೆ ನೀಡಿದ್ದಾರೆ. ಅವರನ್ನು ತಕ್ಷಣವೇ ಬಂಧಿಸಬೇಕು. ಬಾಂಗ್ಲಾದಂತೆ ಭಾರತದಲ್ಲಿ ಅಲ್ಪಸಂಖ್ಯಾಂತರು ಪ್ರತಿಭಟನೆ ನಡೆಸುತ್ತಾರೆ, ನರಮೇಧ ಮಾಡುತ್ತಾರೆ ಎಂದು ಹೇಳಿದ್ದಾರೆ ಇದು ಖಂಡನೀಯ'' ಎಂದರು.

ಈ ವೇಳೆ ರಾಷ್ಟ್ರ ಭಕ್ತರ ಬಳಗದ ಮುಖಂಡರು ಹಾಜರಿದ್ದರು.

ಇದನ್ನೂ ಓದಿ:ಮಾನವ-ಆನೆ ಸಂಘರ್ಷ ರಾಜ್ಯವೊಂದರ ಸಮಸ್ಯೆಯಲ್ಲ, ಜಾಗತಿಕ ಸಮಸ್ಯೆ: ಸಚಿವ ಈಶ್ವರ್ ಖಂಡ್ರೆ - Minister Ishwar Khandre

Last Updated : Aug 12, 2024, 5:15 PM IST

For All Latest Updates

ABOUT THE AUTHOR

...view details