ಕರ್ನಾಟಕ

karnataka

ರೈಲ್ವೆ ಬ್ಯಾರಿಕೇಡ್​ನಲ್ಲಿ ಸಿಲುಕಿದ ಸಲಗ: ಒದ್ದಾಡುತ್ತಿದ್ದ ಆನೆ ಕೊನೆಗೂ ಬಚಾವ್​- ವಿಡಿಯೋ - elephant rescue

By ETV Bharat Karnataka Team

Published : Sep 1, 2024, 8:20 PM IST

Updated : Sep 1, 2024, 9:11 PM IST

ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವನ್ಯಜೀವಿ ವಲಯದ ಮಾವಿನಹಳ್ಳ ಎಂಬಲ್ಲಿ ಕಾಡಿನಿಂದ ಆಹಾರ ಅರಸಿ ಬಂದು ರೈಲ್ವೆ ಬ್ಯಾರಿಕೇಡ್​ನಲ್ಲಿ ಸಿಲುಕಿದ್ದ ಆನೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿದರು.

Elephant rescued by forest officials in chamarajanagar
ರೈಲ್ವೆ ಬ್ಯಾರಿಕೇಡ್​ನಲ್ಲಿ ಸಿಲುಕಿದ ಸಲಗ (ETV Bharat)

ರೈಲ್ವೆ ಬ್ಯಾರಿಕೇಡ್​ನಲ್ಲಿ ಸಿಲುಕಿದ ಸಲಗ (ETV Bharat)

ಚಾಮರಾಜನಗರ :ರೈಲ್ವೆ ಬ್ಯಾರಿಕೇಡ್​ನಲ್ಲಿ ಸಿಲುಕಿದ ಗಜರಾಜನನ್ನು ಅರಣ್ಯಾಧಿಕಾರಿಗಳು ರಕ್ಷಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವನ್ಯಜೀವಿ ವಲಯದ ಮಾವಿನಹಳ್ಳ ಎಂಬಲ್ಲಿ ನಡೆದಿದೆ.

ಅಂದಾಜು 45 ವರ್ಷದ ಗಂಡಾನೆ ಇದಾಗಿದೆ. ಎರಡು ಆನೆಗಳು ಆಹಾರಕ್ಕಾಗಿ ರೈಲ್ವೆ ಬ್ಯಾರಿಕೇಡ್ ದಾಟುವಾಗ ಒಂದಾನೆ ಸರಾಗವಾಗಿ ದಾಟಿದರೆ, ಮತ್ತೊಂದು ಆನೆ ಬ್ಯಾರಿಕೇಡ್ ಅಡಿ ಸಿಲುಕಿತ್ತು.

ಆನೆ ಸಿಲುಕಿದ ಮಾಹಿತಿ ಅರಿತ ಮದ್ದೂರು ಆರ್​ಎಫ್​ಒ ಪುನೀತ್ ಹಾಗೂ ತಂಡ ಅರ್ಧ ತಾಸು ಕಾರ್ಯಾಚರಣೆ ನಡೆಸಿ ರೈಲ್ವೆ ಬ್ಯಾರಿಕೇಡ್​ನ್ನು ಸಡಿಲಗೊಳಿಸಿ ಆನೆಯು ಹೊರಬರುವಂತೆ ಮಾಡಿ ಬಚಾವ್ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, 'ವನ್ಯಜೀವಿಗಳ ರಕ್ಷಣೆ ಮತ್ತು ಉಳಿಸುವುದು ನಮ್ಮ ಜವಾಬ್ದಾರಿ, ಬದ್ಧತೆ'ಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ :ಚಾಮರಾಜನಗರ: ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮತ್ತೊಂದು ಆನೆ ಸಾವು, ಒಂದೇ ವಾರದಲ್ಲಿ ಮೂರು ಕಳೇಬರ ಪತ್ತೆ! - Elephant Carcass

Last Updated : Sep 1, 2024, 9:11 PM IST

ABOUT THE AUTHOR

...view details