ಕರ್ನಾಟಕ

karnataka

ETV Bharat / state

ನಟ ಶಿವಣ್ಣ ವಿಶ್ವದ ಬೆಸ್ಟ್ ಡಾಕ್ಟರ್ ಬಳಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅಭಿಮಾನಿಗಳು ಭಯಪಡಬೇಕಿಲ್ಲ : ಮಧು ಬಂಗಾರಪ್ಪ - MADHU BANGARAPPA

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನಟ ಶಿವರಾಜ್​ಕುಮಾರ್ ಚಿಕಿತ್ಸೆಯ ಕುರಿತು ಮಾತನಾಡಿದ್ದಾರೆ.

education-minister-madhu-bangarappa
ಶಿಕ್ಷಣ ಸಚಿವ ಮಧು ಬಂಗಾರಪ್ಪ (ETV Bharat)

By ETV Bharat Karnataka Team

Published : Dec 21, 2024, 8:59 PM IST

ಶಿವಮೊಗ್ಗ:ನಟ ಶಿವರಾಜ್ ಕುಮಾರ್ ಅವರು ವಿಶ್ವದ ಬೆಸ್ಟ್ ಡಾಕ್ಟರ್ ಬಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಅಭಿಮಾನಿಗಳು ಭಯಪಡುವ ಅಗತ್ಯವಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಈ ಕುರಿತು ಜಿಲ್ಲೆಯ ಕುಬಟೂರಿನಲ್ಲಿ‌ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವರಾಜ್ ಕುಮಾರ್ ಈಗಾಗಲೇ ಅಮೆರಿಕದ ಮಿಯಾಮಿಯನ್ನು ತಲುಪಿದ್ದಾರೆ. ಡಿಸೆಂಬರ್ 24 ರಂದು ಅವರಿಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ. ನಾನು ನಾಳೆ (ಭಾನುವಾರ) ಸಂಜೆ ಮಿಯಾಮಿಗೆ ತೆರಳಿ ಶಸ್ತ್ರ ಚಿಕಿತ್ಸೆ ವೇಳೆ ಅವರ ಜೊತೆಗೆ ಇರಲಿದ್ದೇನೆ. ಆಸ್ಪತ್ರೆಯಲ್ಲಿ ಅವರು 10 ದಿನಗಳ ಕಾಲ ಇರಲಿದ್ದಾರೆ. ಶಿವಣ್ಣ ಒಂದು ತಿಂಗಳ ಕಾಲ ಮಿಯಾಮಿನಲ್ಲಿಯೇ ಇರುತ್ತಾರೆ. ಸುಮಾರು ಒಂದೂವರೆ ತಿಂಗಳ ನಂತರ ಶಿವಣ್ಣ ಬೆಂಗಳೂರಿಗೆ ಬರುತ್ತಾರೆ. ಅಭಿಮಾನಿಗಳ ಆಶೀರ್ವಾದವೇ ಅವರಿಗೆ ಶ್ರೀ ರಕ್ಷೆ ಎಂದು ಹೇಳಿದರು.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿದರು (ETV Bharat)

ಬಿಜೆಪಿಯವರ ಬಗ್ಗೆ ಟೀಕೆ; ಬಿಜೆಪಿಯವರ ಹಣೆಬರಹ ರಾಜ್ಯದ ಜನತೆಗೆ ಗೊತ್ತಾಗಿದೆ. ಈ ರಾಜ್ಯದಲ್ಲಿ ಕಾನೂನು ಇದೆ, ಅದಕ್ಕೆ‌ ಸಿ. ಟಿ‌ ರವಿ ಬಂಧನವಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಪೊಲೀಸರು ಕ್ರಮವನ್ನು ಸಮರ್ಥಿಸಿಕೊಂಡರು.

ಅಂಬೇಡ್ಕರ್ ಅವರ ಬಗ್ಗೆ ಚರ್ಚೆ ಆಗಬಾರದು ಎಂದು ಸಿ. ಟಿ ರವಿ ಆ ರೀತಿ ವರ್ತನೆ ಮಾಡಿದ್ದಾರೆ. ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವೆ, ನಮಗೆಲ್ಲ ಬಾಬಾಸಾಹೇಬ ಅಂಬೇಡ್ಕರ್ ಅವರೇ ದೇವರು ಎಂದರು.

ಮೊದಲಿನಿಂದಲೂ ಈ ರೀತಿ ಹೇಳಿಕೆ ನೀಡುವ ಕೆಟ್ಟ ಚಾಳಿ ಸಿ. ಟಿ ರವಿ ಅವರಿಗೆ ಇದೆ. ಬಿಜೆಪಿ ನಾಯಕರು ಸಂವಿಧಾನ ಮತ್ತು ಮಹಿಳೆಯ ಮೇಲೆ ಅಶ್ಲೀಲ ಪದಬಳಕೆ ಮಾಡಿದ್ದಾರೆ. ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಮಾಡಿ ಇವರು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಬಂಗಾರಪ್ಪ ಬಿಜೆಪಿಗೆ ಹೋಗಲಿಲ್ಲ ಎಂದ್ರೆ ಬಿಜೆಪಿಯವರು ಎಂದಿಗೂ ಅಧಿಕಾರಕ್ಕೆ ಬರುತ್ತಿರಲಿಲ್ಲ. ಬಿಜೆಪಿಯವರು ಕ್ರಿಮಿನಲ್ ಚಿಂತನೆವುಳ್ಳವರು. ಇವರದ್ದು ಒಡೆದಾಳುವ ನೀತಿ ಎಂದು ಸಚಿವ ಮಧು ಬಂಗಾರಪ್ಪ ದೂರಿದರು.

ಸದನದಲ್ಲಿ ನಡೆದ ಘಟನೆಗೆ ಸಿ. ಟಿ ರವಿ ಅವರಿಗೆ ಕಠಿಣ ಶಿಕ್ಷೆ ಕೊಡಬೇಕು ಎಂದು ಶಿಕ್ಷಣ ಸಚಿವರು ಒತ್ತಾಯಿಸಿದರು.

ಮಹಾತ್ಮ ಗಾಂಧಿ, ಅಂಬೇಡ್ಕರ್ ಇಬ್ಬರೂ ದೇಶದ ಎರಡು ಕಣ್ಣುಗಳು. ಗಾಂಧಿಯವರನ್ನು ಕೊಂದವರು ಅವರಿಗೆ ದೇವರ ಸಮಾನವಾಗಿದ್ದಾರೆ ಎಂದು ಹರಿಹಾಯ್ದರು.

ಇದನ್ನೂ ಓದಿ :Watch: ಅಮೆರಿಕ ತಲುಪಿದ ಶಿವರಾಜ್​ಕುಮಾರ್​​, ಮಂಗಳವಾರ ಶಸ್ತ್ರಚಿಕಿತ್ಸೆ - SHIVARAJKUMAR REACHED AMERICA

ABOUT THE AUTHOR

...view details