ಕರ್ನಾಟಕ

karnataka

ETV Bharat / state

ಬೇರೆಯವರನ್ನು ಬಿಟ್ಟು ನನ್ನೊಬ್ಬನನ್ನೇ ಏಕೆ ಅರೆಸ್ಟ್​ ಮಾಡಿದ್ದಾರೆ?: ಡ್ರೋನ್ ಪ್ರತಾಪ್ - DRONE PRATHAP

ಇಂದು ಜೈಲಿನಿಂದ ಹೊರಬಂದ ಡ್ರೋನ್ ಪ್ರತಾಪ್, ನನ್ನೊಬ್ಬನನ್ನೇ ಏಕೆ ಅರೆಸ್ಟ್​ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

drone-prathap
ಡ್ರೋನ್ ಪ್ರತಾಪ್ (ETV Bharat)

By ETV Bharat Karnataka Team

Published : Dec 24, 2024, 10:48 PM IST

ತುಮಕೂರು:ಸೋಡಿಯಂ ಮೆಟಲ್ ಸ್ಫೋಟ ಪ್ರಕರಣದಲ್ಲಿ ಬಂಧಿತನಾಗಿದ್ದ ಡ್ರೋನ್‌ ಪ್ರತಾಪ್​ಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ಇಂದು ಜೈಲಿನಿಂದ ರಿಲೀಸ್ ಆದರು. ಜೈಲಿನಿಂದ ಹೊರಬಂದು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಬೇರೆಯವರನ್ನು ಬಿಟ್ಟು ನನ್ನೊಬ್ಬನನ್ನೇ ಏಕೆ ಅರೆಸ್ಟ್​ ಮಾಡಿದ್ದಾರೆ ಎಂದರು.

ದೇಶಾದ್ಯಂತ ನೂರಾರು ಎಕ್ಸ್‌ಪರಿಮೆಂಟ್ ಪೋಸ್ಟ್ ಮಾಡಿದ್ದಾರೆ‌‌. ಮೊಬೈಲ್ ಕೊಟ್ಟರೆ ತೋರಿಸುತ್ತೇನೆ. ಅವ್ರನ್ನೆಲ್ಲಾ ಯಾಕೆ ಅರೆಸ್ಟ್ ಮಾಡಿಲ್ಲ?. ನನ್ನೊಬ್ಬನನ್ನೇ ಏಕೆ ಅರೆಸ್ಟ್ ಮಾಡಿದ್ದಾರೆ? ಎಂದು ಕೇಳಿದರು.

ಹೊರದೇಶದಲ್ಲಿರಬಹುದು, ನಮ್ಮ ದೇಶದಲ್ಲಿರಬಹುದು. ಐಪಿಸಿ ದೇಶದಲ್ಲಿ ಎಲ್ಲರಿಗೂ ಒಂದೇ. ಕಾನೂನು ಎಲ್ಲರಿಗೂ ಒಂದೇ. ಕೆ.ಜಿಗಟ್ಟಲೆ ಸೋಡಿಯಂ ಉಪಯೋಗಿಸಿ‌ ಬೇರೆಯವರೆಲ್ಲಾ ಸೈನ್ಸ್ ಎಕ್ಸ್‌ಪರಿಮೆಂಟ್ ಮಾಡಿದ್ದಾರೆ ಎಂದ ಹೇಳಿದರು.

ಯಾರ ಮೇಲೂ‌ ಕೇಸ್ ಆಗದೇ ಇರೋದು, ಪ್ರಶ್ನೆ ಮಾಡದೇ ಇರೋದು, ನನ್ನ ಮೇಲೆ ಕೇಳುತ್ತಾರೆ ಅಂದ್ರೆ ಏನು?. ನಾನು ಮಾಡಿರೋದು ಸೈನ್ಸ್ ಆ್ಯಂಡ್ ಎಜುಕೇಷನ್ ಪರ್ಪಸ್ ಅಂತ ಮೊದಲೇ ಡಿಸ್ಲ್ಕೈಮರ್ ಹಾಕಿ ಮಾಡಿದ್ದೇನೆ. ಸಿಂಪಲ್ ಸೈನ್ಸ್ ಎಕ್ಸ್‌ಪೆರಿಮೆಂಟ್ ಇದು. 8ನೇ ಕ್ಲಾಸ್ ಆಗಿರಬಹುದು ಹಾಗೂ ಹೈಸ್ಕೂಲ್​ನ ಎಲ್ಲಾ ಪಠ್ಯಪುಸ್ತಕಗಳಲ್ಲಿಯೂ ಆ ಎಕ್ಸ್​ಪರಿಮೆಂಟ್​ ಇದೆ. ಅದೇ ರೀತಿ ಕಾಲೇಜು, ಸ್ಕೂಲ್​ಗಳಲ್ಲಿ ಸೋಡಿಯಂ ಸುಲಭವಾಗಿ ಲಭ್ಯವಿದೆ ಎಂದರು.

ಅದಕ್ಕೆ ಎಕ್ಸ್‌‌ಪ್ಲೋಸಿವ್ ಅದು ಇದು ಅಂತಾ ತೋರಿಸಿ ಮಾಡೋದು ಅಗತ್ಯ ಇರಲಿಲ್ಲ. ನನ್ನ ಮೇಲೆ ಆಗಿರೋದು, ಅವರ ಮೇಲೆ, ಬೇರೆಯವರ ಮೇಲೆ ಏಕೆ ಆಗಿಲ್ಲ?. ನನಗಿಂತ ಮೊದಲೇ ಅವ್ರೆಲ್ಲಾ ಮಾಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ:ಡ್ರೋನ್ ಪ್ರತಾಪ್‌ಗೆ ಜಾಮೀನು ಮಂಜೂರು - DRONE PRATHAP

ABOUT THE AUTHOR

...view details