ಕರ್ನಾಟಕ

karnataka

By ETV Bharat Karnataka Team

Published : 19 hours ago

ETV Bharat / state

ಮೈಸೂರು ದಸರಾ: ಸಿಎಂ ಸಿದ್ದರಾಮಯ್ಯಗೆ ಮೈಸೂರು ಜಿಲ್ಲಾಡಳಿತದಿಂದ ಆಹ್ವಾನ - Invitation to CM for Dasara

ಅ.3-12 ವರೆಗೆ ನಡೆಯಲಿರುವ ಈ ಬಾರಿಯ ದಸರಾ ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಮೈಸೂರು ಜಿಲ್ಲಾಧಿಕಾರಿಗಳು ಆಹ್ವಾನಿಸಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಮೈಸೂರು ದಸರಾಕ್ಕೆ ಆಹ್ವಾನ
ಸಿಎಂ ಸಿದ್ದರಾಮಯ್ಯಗೆ ಮೈಸೂರು ದಸರಾಕ್ಕೆ ಆಹ್ವಾನ (ETV Bharat)

ಬೆಂಗಳೂರು:ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್​. ಸಿ. ಮಹದೇವಪ್ಪ ನೇತೃತ್ವದಲ್ಲಿ ಮೈಸೂರು ಜಿಲ್ಲಾಧಿಕಾರಿಗಳು ಇಂದು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಾಡ ಹಬ್ಬ ದಸರಾಗೆ ಆಹ್ವಾನಿಸಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮತ್ತು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಶಾಸಕರುಗಳು, ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಬಾರಿ ನಾಡ ಹಬ್ಬ ದಸರಾ ಮಹೋತ್ಸವವನ್ನು ಸಾಹಿತಿ ಹಂಪ ನಾಗರಾಜಯ್ಯ ಅವರು ಉದ್ಘಾಟಿಸಲಿದ್ದಾರೆ. ಮೈಸೂರು ದಸರಾ ಉತ್ಸವ ಅ.3-12ರ ವರೆಗೆ ನಡೆಯಲಿದೆ. ಈ ಬಾರಿ ದಸರಾವನ್ನು ವಿಜೃಂಭಣೆಯಿಂದ, ಆಕರ್ಷಣೀಯವಾಗಿ ಹಾಗೂ ಅರ್ಥಪೂರ್ಣವಾಗಿ ಮಾಡಲು ತೀರ್ಮಾನಿಸಲಾಗಿದೆ.

ದಸರಾ ಉದ್ಘಾಟನೆಯ ದಿನದಂದೇ ಸಾಂಸ್ಕೃತಿಕ ಕಾರ್ಯಕ್ರಮ, ದೀಪಾಲಂಕಾರ, ವಸ್ತು ಪ್ರದರ್ಶನ, ಕುಸ್ತಿಗೆ ಚಾಲನೆ ದೊರಯಲಿದೆ. ಯುವ ದಸರಾ, ಕ್ರೀಡೆಗಳು ಅಂದೇ ಉದ್ಘಾಟನೆಯಾಗಲಿವೆ. ದೀಪಾಲಂಕಾರವನ್ನು ಈ ಬಾರಿ 21 ದಿನಗಳ ಕಾಲ ನಡೆಸಲು ತೀರ್ಮಾನಿಸಲಾಗಿದೆ. ಹೆಚ್ಚು ಆಕರ್ಷಣೀಯ ದೀಪಾಲಂಕಾರ ಮಾಡುವಂತೆ ಸೂಚನೆ ನೀಡಲಾಗಿದೆ.

ಅ.3 ರಂದು ದಸರಾ ಉದ್ಘಾಟನೆಯಾಗಲಿದೆ. ಅಂದು ಚಾಮುಂಡಿ ಬೆಟ್ಟದಲ್ಲಿ ನಾಡದೇವಿಗೆ ಬೆಳಗ್ಗೆ 9.15-9.45 ಗಂಟೆಗೆ ಪೂಜೆ ನಡೆಯಲಿದೆ. ಅ.11ರಂದು ಆಯುಧ ಪೂಜೆ ನೆರವೇರಲಿದೆ. ಅ.12ಗೆ ಜಂಬೂ ಸವಾರಿ ನಡೆಯಲಿದೆ. ಅಂದು ನಂದಿಧ್ವಜ ಪೂಜೆ ಮಧ್ಯಾಹ್ನ 1.41-2.10 ಗಂಟೆಗೆ ನೆರವೇರಲಿದೆ. ಜಂಬೂ ಸವಾರಿಗೆ ಪುಷ್ಪಾರ್ಚನೆ ಸಂಜೆ 4- 4.30 ಗಂಟೆಗೆ ನೆರವೇರಲಿದೆ.

ಇದನ್ನೂ ಓದಿ: ಯುವ ದಸರಾ: ದಿಗ್ಗಜ ಕಲಾವಿದರಿಂದ ಸಂಗೀತ ಸುಧೆ; ಹಾಲು ಕರೆಯುವ ಸ್ಪರ್ಧೆ ಗೆದ್ದವರಿಗೆ ₹1 ಲಕ್ಷ ಬಹುಮಾನ! - Yuva Dasara 2024

ABOUT THE AUTHOR

...view details