ಬೆಂಗಳೂರು:ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ಏರುಗತಿ ಕಾಣುತ್ತಿರುವುದರಿಂದ ರಕ್ತ ನಿಧಿಗಳಲ್ಲಿ ಬಿಳಿರಕ್ತಕಣಗಳ (ಪ್ಲೇಟ್ಲೆಟ್ಸ್) ಬೇಡಿಕೆ ಹೆಚ್ಚಾಗಿದೆ. ರಕ್ತ ನಿಧಿಗಳಲ್ಲಿ ಬಿಳಿರಕ್ತ ಕಣಗಳನ್ನು ಶೇಖರಣೆ ಮಾಡಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಬೆಂಗಳೂರು ನಗರ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿ ಇದುವರೆಗೆ 5,374 ಡೆಂಘೀ ಪಾಸಿಟಿವ್ ಹಾಗೂ 5 ಮರಣ ಪ್ರಕರಣಗಳು ವರದಿಯಾಗಿವೆ. ಪಾಸಿಟಿವ್ ಪ್ರಕರಣ ಪತ್ತೆ ನಿಧನವಾಗುತ್ತಿರುವುದರಿಂದ ರೋಗ ಉಲ್ಭಣಗೊಂಡು, ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವೂ ಹೆಚ್ಚಾಗಿದೆ. ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವ ಕಡೆಯಲ್ಲಿ ಬಿಳಿರಕ್ತಕಣಗಳ ಬೇಡಿಕೆ ಹೆಚ್ಚಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಕ್ತನಿಧಿಗಳಲ್ಲಿ ತುರ್ತು ಅಗತ್ಯವಿರುವ ಬಿಳಿ ರಕ್ತಕಣಗಳನ್ನು ಶೇಖರಣೆ ಮಾಡಲು ಸೂಚಿಸಲಾಗಿದೆ.
ಸಾಮಾನ್ಯವಾಗಿ ಬಿಳಿರಕ್ತಕಣಗಳ ಸಂಖ್ಯೆ 10,000 ಕ್ಕಿಂತ ಕಡಿಮೆಯಾದವರಿಗೆ ಮಾತ್ರ ನೀಡಲಾಗುತ್ತದೆ. ಒಂದುವೇಳೆ ನಿಗದಿತ ಸಂಖ್ಯೆಗಿಂತ ಬಿಳಿರಕ್ತಕಣ ಕಡಿಮೆಯಾದರೆ ದೇಹದ ವಿವಿಧ ಅಂಗಗಳ ಒಳಪದರಗಳಿಂದ ರಕ್ತಸ್ರಾವ ಪ್ರಾರಂಭವಾಗುತ್ತದೆ. ಬಾಯಿಯ ಒಳಪದರ, ಒಸಡುಗಳು ಮತ್ತು ಮೂಗಿನ ಒಳಪದರದಿಂದ ರಕ್ತಸ್ರಾವ ಸಂಭವಿಸಬಹುದಾಗಿದೆ.