ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ: ಹೆಚ್.ಡಿ. ಕುಮಾರಸ್ವಾಮಿ

ನಿನ್ನೆ ನಮ್ಮ ಪಕ್ಷದ ಅಧ್ಯಕ್ಷನಿಗೆ ನೋಟಿಸ್ ಕೊಟ್ಟಿದ್ದಾರೆ. ಚನ್ನಪಟ್ಟಣದಲ್ಲಿ ಯಾವ ಚುನಾವಣಾ ನಡೆಸೋಕೆ ಹೊರಟಿದ್ದಾರೆ ಎಂದು ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿ ಕಾಂಗ್ರೆಸ್​ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ
ಹೆಚ್.ಡಿ.ಕುಮಾರಸ್ವಾಮಿ (ETV Bharat)

By ETV Bharat Karnataka Team

Published : 4 hours ago

ಬೆಂಗಳೂರು:"ನಿನ್ನೆ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ನೀವೇ ನೋಡಿದೀರಿ. ನಮ್ಮ ನಾಯಕರು, ಬಿಜೆಪಿ ನಾಯಕರು ಬಂದು ಶಕ್ತಿ ತುಂಬಿದ್ದಾರೆ.‌ ಈ ಸರ್ಕಾರ ದಬ್ಬಾಳಿಕೆ ಮಾಡ್ತಿದೆ. ಜನ ಶುಕ್ರವಾರ ಕಾರ್ಯಕ್ರಮಕ್ಕೆ ಬರಬಾರದಾ?. ನಿನ್ನೆಯೂ ಒಂದು ಕೇಸ್ ಹಾಕಿದ್ದಾರೆ. ಚನ್ನಪಟ್ಟಣದಲ್ಲಿ ಯಾವ ಚುನಾವಣಾ ನಡೆಸೋಕೆ ಹೊರಟಿದ್ದಾರೆ. ನಿನ್ನೆ ನಮ್ಮ ಪಕ್ಷದ ಅಧ್ಯಕ್ಷನಿಗೆ ನೋಟಿಸ್ ಕೊಟ್ಟಿದ್ದಾರೆ. ಅಲ್ಲಿ ಚುನಾವಣೆ ‌ಯಾವ ರೀತಿ ನಡೆಸಬಹುದು ಅಂತ ಊಹಿಸಬಹುದು" ಎಂದು ಕೇಂದ್ರ ಸಚಿವ ಹೆಚ್​. ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಪದ್ಮನಾಭನಗರದ ಹೆಚ್.ಡಿ‌.ದೇವೇಗೌಡರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಉಪಚುನಾವಣೆ ಸಿದ್ಧತೆ ವಿಚಾರವಾಗಿ ಪ್ರತಿಕ್ರಿಯಿಸಿದರು. "ಬಹುಶಃ ನಿನ್ನೆ ನೀವು ಎಲ್ಲಾ ನೋಡಿದ್ದೀರಾ. ಕೊನೆ ಹಂತದವರೆಗೆ ರಾಜಕೀಯ ಬೆಳವಣಿಗೆ ನಡೆಯಿತು. ಕೊನೆ ಗಳಿಗೆಯಲ್ಲಿ ನಿಖಿಲ್ ಕುಮಾರಸ್ವಾಮಿ ನಿಲ್ಲಿಸುವ ಪರಿಸ್ಥಿತಿಗೆ ಕಾಂಗ್ರೆಸ್ ನಾಯಕರೇ ದೂಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಚುನಾವಣೆಗೆ ನಿಲ್ಲಬಾರದು ಅಂತ ಇದ್ದರು. ಮೊನ್ನೆ ಸಂಜೆ ತೀರ್ಮಾನ ಆಗಿದ್ದು" ಎಂದು ಹೇಳಿದರು.

"ಇವತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ನೇತೃತ್ವದಲ್ಲಿ ಸಮನ್ವಯ ಸಮಿತಿ ಸಭೆ ಇದೆ. ಬಿಜೆಪಿ ಕಚೇರಿಯಲ್ಲಿ ಚನ್ನಪಟ್ಟಣ ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ. ಎರಡೂ ಪಕ್ಷದ ಕಾರ್ಯಕರ್ತರು ಮೂರು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಿಸುವ ಹೋರಾಟ ಮಾಡುತ್ತೇವೆ. ಈಗಾಗಲೇ ನಿಖಿಲ್ ಕುಮಾರಸ್ವಾಮಿ ಶಿಗ್ಗಾಂವಿ, ಸಂಡೂರಿಗೆ‌ ಹೋಗಿ‌‌ ಬಂದಿದ್ದಾರೆ" ಎಂದು ಹೇಳಿದರು.

ಚನ್ನಪಟ್ಟಣ ಗೆದ್ದಿದ್ದೇವೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ ಹೆಚ್​ಡಿಕೆ, "ಮುಖ್ಯಮಂತ್ರಿಗಳು ಹೇಳಿದ್ದಾರೆ.‌ ಈಗಾಗಲೇ ಚುನಾವಣೆ ಗೆದ್ದಿದ್ದೇವೆ ಅಂತ.‌ ಕುಮಾರಸ್ವಾಮಿ ಭಾವನಾತ್ಮಕ ಮಾತು ಅಂತ ಹೇಳಿದ್ದಾರೆ. ಕುಮಾರಸ್ವಾಮಿ ಭಾವನಾತ್ಮಕ ಮತ್ತು ಕಣ್ಣೀರು ಜನಕ್ಕೆ ಬೇಸರ ಆಗಿದೆ ಅಂತ ಹೇಳಿದ್ದಾರೆ.‌ ಪಾಪ‌ ಇವರು ಯಾವತ್ತೂ ಜನರ ಮುಂದೆ ಕಣ್ಣೀರು ಹಾಕಿಲ್ಲ. ಹೌದು, ನಾನು ಜನರ‌ ಕಷ್ಟ ನೋಡಿ‌‌ ಬಹಳ ಕಣ್ಣೀರು ಹಾಕುತ್ತಿದ್ದೆ. ಇವತ್ತು ಅವರ ನಡವಳಿಕೆಗಳು ಯಾವ ರೀತಿ ಅಂತ ನೋಡಿ ಕಣ್ಣೀರು ಬರದೇ ಇರೋ ಸ್ಥಿತಿ ಇದೆ" ಎಂದು ಲೇವಡಿ ಮಾಡಿದರು.

"ಈ ಚುನಾವಣೆ ಅವರು ಎಷ್ಟೇ ಹಣ, ಅಧಿಕಾರ ದುರುಪಯೋಗದ‌ ಮುಖಾಂತರ ಗೆದ್ದಾಗಿದೆ ಅಂತ ಹೊರಟಿದ್ದಾರೆ. ಅಭ್ಯರ್ಥಿ ಆಯ್ಕೆಗೆ ನಾಲ್ಕು‌ ತಿಂಗಳು ಹೋರಾಟ ಮಾಡಿದ್ರಾ, ಇವತ್ತು ಆ ಪಕ್ಷದಲ್ಲಿ ಅಭ್ಯರ್ಥಿ ಇಲ್ಲದೆ ಹೈಜಾಕ್ ಮಾಡ್ಕೊಂಡು ಹೋಗಿರೋದು. ಜೊತೆಗೆ ಇಲ್ಲಿ ಕುತಂತ್ರ ಬೇರೆ. ಇವೆಲ್ಲವನ್ನು ಜನ ಗಮನಿಸ್ತಾರೆ. ಯಾರ ಬಗ್ಗೆಯೂ ನಾನು ಟೀಕೆ ಮಾಡಲ್ಲ‌, ನಾನು ಅಭಿವೃದ್ಧಿ ಕೆಲಸ ಮಾಡಿದ್ದೀನಿ. ಚನ್ನಪಟ್ಟಣ ಜನತೆ ಹತ್ತಿರ ಮತ ಕೇಳುತ್ತೇನೆ" ಎಂದರು.

ಇದನ್ನೂ ಓದಿ:ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಿವಾಸಕ್ಕೆ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಭೇಟಿ

ABOUT THE AUTHOR

...view details