ಕರ್ನಾಟಕ

karnataka

By ETV Bharat Karnataka Team

Published : May 25, 2024, 4:18 PM IST

ETV Bharat / state

ಎಂಎಲ್ಎ ಅಂತ ಬಂಧಿಸದೇ ಬಿಡೋಕೆ ಆಗುತ್ತಾ: ಹರೀಶ್ ಪೂಂಜ ವಿರುದ್ದ ಸಿಎಂ ಆಕ್ರೋಶ - CM Siddaramaiah

ಶಾಸಕ ಎಂಬ ಕಾರಣಕ್ಕೆ ಹರೀಶ್​ ಪೂಂಜರನ್ನು ಸುಮ್ಮನೆ ಬಿಡಲಿಕ್ಕೆ ಆಗುತ್ತಾ ಎಂದು ಸಿಎಂ ಸಿದ್ದರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ (ETV Bharat)

ಮಂಗಳೂರು:ತಪ್ಪು ಮಾಡಿದವರನ್ನು‌ ಎಂಎಲ್​ಎ ಎಂದು ಬಂಧಿಸದೇ ಬಿಡೋಕೆ ಆಗುತ್ತಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರೀಶ್ ಪೂಂಜ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರಕರಣದಲ್ಲಿ ಪೊಲೀಸ್​ ಅಧಿಕಾರಿಗಳ ಮೇಲೆ ಸರ್ಕಾರದಿಂದ ಒತ್ತಡ ಹೆಚ್ಚಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾನೂನು ಎಲ್ಲರಿಗೂ ಒಂದೇ. ಹರೀಶ್ ಪೂಂಜ ವಿರುದ್ದ ಸೆಕ್ಷನ್​ 353 ಅಡಿ ಪ್ರಕರಣ ದಾಖಲಾಗಿದೆ. ಇದು ಜಾಮೀನು ರಹಿತ ಅಪರಾಧವಾಗಿದೆ.

ಈ ಪ್ರಕರಣದಲ್ಲಿ ಏಳು ವರ್ಷ ಜೈಲುವಾಸ ಇದೆ. ಎಂಎಲ್​ಎ ಅಂತಾ ಅವರನ್ನು ಬಿಟ್ಟು ಬಿಡೋಕೆ ಆಗುತ್ತಾ? ಎಂಎಲ್​ಎ ಆದ್ರೆ ಪೊಲೀಸ್​ ಠಾಣೆಯಲ್ಲಿ ಗಲಾಟೆ ಮಾಡಬಹುದಾ. ಶಾಸಕ ಪೂಂಜ ವಿರುದ್ದ ಎರಡು ಎಫ್​ಐಆರ್ ದಾಖಲಾಗಿವೆ ಎಂದು ತಿಳಿಸಿ ಹೊರಟು ಹೋದರು.

ಏನಿದು ಪ್ರಕರಣ?:ಇತ್ತೀಚೆಗೆ ಅಕ್ರಮ ಕಲ್ಲಿನ ಕ್ವಾರಿ ನಡೆಸುತ್ತಿರುವ ಆರೋಪದಡಿ ಬೆಳ್ತಂಗಡಿ ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದರು. ಇದನ್ನು ಖಂಡಿಸಿ ಯುವ ಮೋರ್ಚಾ ಕಾರ್ಯಕರ್ತರು ಬೆಳ್ತಂಗಡಿ ಪೊಲೀಸ್ ಠಾಣೆ ಎದುರು ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ್ದ ಶಾಸಕ ಹರೀಶ್ ಪೂಂಜ ಠಾಣೆಗೆ ತೆರಳಿ ಇನ್ಸ್​ಪೆಕ್ಟರ್, ಸಬ್ ಇನ್ಸ್​ಪೆಕ್ಟರ್ ಸಮೇತ ಪೊಲೀಸರಿಗೆ ಅವಾಜ್ ಹಾಕಿದ್ದರು. ಜಾಸ್ತಿ ಮಾಡಿದ್ರೆ ಜಾಗ್ರತೆ. ಸ್ಟೇಷನ್ ಎಂದರೆ ನಿಮ್ಮ ಅಪ್ಪಂದು ಎಂದು ತಿಳಿದುಕೊಂಡಿದ್ದೀರಾ.. ಹೀಗೆ ಅವಾಜ್ ಹಾಕಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿತ್ತು. ನಂತರ ಹರೀಶ್​ ಪೂಂಜಾ ವಿರುದ್ದ ಸೆಕ್ಷನ್​ 353ರ ಅಡಿ ಪ್ರಕರಣ ದಾಖಲಿಸಲಾಗಿತ್ತು.

ಇದನ್ನೂ ಓದಿ:ಬೆಳ್ತಂಗಡಿ ಪೊಲೀಸರಿಗೆ ಅವಾಜ್ ಹಾಕಿರುವ ವಿಡಿಯೋ ವೈರಲ್: ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್​ಐಆರ್ - FIR Against MLA Harish Poonja

ABOUT THE AUTHOR

...view details