ಕರ್ನಾಟಕ

karnataka

By ETV Bharat Karnataka Team

Published : Jun 4, 2024, 4:11 PM IST

Updated : Jun 4, 2024, 5:53 PM IST

ETV Bharat / state

ದ.ಕ.ಜಿಲ್ಲೆಯನ್ನು ನವಪಥದಲ್ಲಿ ಅಭಿವೃದ್ಧಿಯತ್ತ ಕೊಂಡೊಯ್ಯುವೆ: ಬ್ರಜೇಶ್ ಚೌಟ - Captain Brijesh Chowta

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಭಾರೀ ಅಂತರದ ಗೆಲುವು ದಾಖಲಿಸಿರುವ ಕ್ಯಾ.ಬ್ರಜೇಶ್ ಚೌಟ, ಕ್ಷೇತ್ರವನ್ನು ನವಪಥದಲ್ಲಿ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದಾರೆ.

ವಿಜೇತ ಬ್ರಜೇಶ್ ಚೌಟ
ವಿಜೇತ ಬ್ರಜೇಶ್ ಚೌಟ (ETV Bharat)

ಕ್ಯಾ.ಬ್ರಜೇಶ್ ಚೌಟ ಗೆಲುವಿಗೆ ಸಂಭ್ರಮಾಚರಣೆ (ETV Bharat)

ಮಂಗಳೂರು: "ನವಯುಗ ನವಪಥದ ಆಧಾರದಲ್ಲಿ, ಹಿಂದುತ್ವದ ಬದ್ಧತೆಯಲ್ಲಿ, ಅಭಿವೃದ್ಧಿಯನ್ನು ಆದ್ಯತೆಯಾಗಿಸಿ ಜಿಲ್ಲೆಯಲ್ಲಿ ಅಭಿವೃದ್ಧಿಪಡಿಸುತ್ತೇನೆ" ಎಂದು ದ.ಕ.ಜಿಲ್ಲೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಬ್ರಜೇಶ್ ಚೌಟ ಹೇಳಿದರು.

ಸುರತ್ಕಲ್​ನ‌ ಮತ ಎಣಿಕಾ ಕೇಂದ್ರದಲ್ಲಿ ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇದು ಜಿಲ್ಲೆಯ ಬಿಜೆಪಿಯ ಗೆಲುವು, ಮೋದಿಯವರ, ಹಿಂದುತ್ವದ, ಸಂಘಟನೆಯ ಕಾರ್ಯಕರ್ತರ, ಜಿಲ್ಲಾಧ್ಯಕ್ಷರ ಗೆಲುವು. ಸತ್ಯ, ಧರ್ಮ, ನ್ಯಾಯ, ಹಿಂದುತ್ವದ ಆಧಾರದಲ್ಲಿ ನಾವು ಜಿಲ್ಲೆಯಲ್ಲಿ ಸ್ಪರ್ಧಿಸಿದ್ದೆವು. ತುಳುನಾಡಿನ ದೈವ, ದೇವರ ಆಶೀರ್ವಾದದ ಬಲದಿಂದ, ಕಾರ್ಯಕರ್ತರ ಪರಿಶ್ರಮ, ಸಂಘಟನೆಯ ಹಿರಿಯರ ಮಾರ್ಗದರ್ಶನದಿಂದ, ರಾಜ್ಯ ಹಾಗೂ ಕೇಂದ್ರದ ನಾಯಕರ ಬೆಂಬಲದೊಂದಿಗೆ ಈ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಿದ್ದೇವೆ' ಎಂದರು.

ಇದನ್ನೂ ಓದಿ:ದಕ್ಷಿಣ ಕನ್ನಡ ಫಲಿತಾಂಶ: ಮೊದಲ ಚುನಾವಣೆಯಲ್ಲೇ ಕಮಾಲ್​ ಮಾಡಿದ ಕ್ಯಾಪ್ಟನ್‌ ಬ್ರಜೇಶ್ ಚೌಟ - CAPTAIN BRIJESH CHOWTA WON

Last Updated : Jun 4, 2024, 5:53 PM IST

ABOUT THE AUTHOR

...view details