ಕರ್ನಾಟಕ

karnataka

₹25 ಮರಳಿ ನೀಡದ ಬಿಎಂಟಿಸಿ ಕಂಡಕ್ಟರ್: ಪ್ರಯಾಣಿಕ ಹಣ ಪಡೆದುಕೊಂಡಿದ್ದು ಹೇಗೆ ಕೇಳಿ - BMTC RETURNS MONEY

By ETV Bharat Karnataka Team

Published : Jun 29, 2024, 4:53 PM IST

Updated : Jun 29, 2024, 6:12 PM IST

ಬಿಎಂಟಿಸಿ ಬಸ್ ಕಂಡಕ್ಟರ್ 25 ರೂಪಾಯಿ ಚಿಲ್ಲರೆ ಹಿಂತಿರುಗಿಸದ ಕಾರಣ ಪ್ರಯಾಣಿಕರೊಬ್ಬರು ಬಿಎಂಟಿಸಿ ಅಧಿಕೃತ ವೆಬ್ ಸೈಟ್​ನಲ್ಲಿ ದೂರು ನೀಡಿದ್ದರು. ಇದಕ್ಕೆ ಸ್ಪಂದಿಸಿದ ಬಿಎಂಟಿಸಿ ಪ್ರಯಾಣಿಕನಿಗೆ 25 ರೂಪಾಯಿ ಚಿಲ್ಲರೆಯನ್ನು ನೀಡಿದೆ.

BMTC RETURNS MONEY
ಬಿಎಂಟಿಸಿಯಿಂದ ಹಣ ಪಡೆದ ಪ್ರಯಾಣಿಕ (Etv Bharat)

₹25 ಮರಳಿ ನೀಡದ ಕಂಡಕ್ಟರ್: ಬಿಎಂಟಿಸಿಯಿಂದ ಹಣ ಪಡೆದ ಬಗ್ಗೆ ಪ್ರಯಾಣಿಕ ಹೇಳಿದ್ದು ಹೀಗೆ.. (ETV Bharat)

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ):ಚಿಲ್ಲರೆ ನೀಡದ ಕಂಡಕ್ಟರ್​ ವಿರುದ್ಧ ಪ್ರಯಾಣಿಕನೊಬ್ಬ ಬಿಎಂಟಿಸಿ ಅಧಿಕೃತ ವೆಬ್ ಸೈಟ್ ನಲ್ಲಿ ದೂರು ನೀಡಿ 25 ರೂಪಾಯಿ ಚಿಲ್ಲರೆಯನ್ನು ಹಿಂಪಡೆದಿದ್ದಾರೆ. ಹೌದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಬಸ್ ಕಂಡಕ್ಟರ್ 25 ರೂಪಾಯಿ ಚಿಲ್ಲರೆ ಹಿಂದಿರುಗಿಸದ ಕಾರಣ ದೊಡ್ಡಬಳ್ಳಾಪುರದ ನಿವಾಸಿಯಾಗಿರುವ ಗಿರೀಶ್ ಅಧಿಕೃತ ವೆಬ್ ಸೈಟ್​ನಲ್ಲಿ ನಡೆದ ಘಟನೆ ಕುರಿತು ದೂರು ನೀಡಿದ್ದರು.

ಪ್ರಯಾಣಿಕ ಗಿರೀಶ್ ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಬಿಎಂಟಿಸಿಯ ಒಂದು ದಿನದ ಪಾಸ್ ಹಾಗೂ ಟೋಲ್ ದರ ಸೇರಿ 75 ರೂ. ಆಗಿದ್ದರೆ, ಕಂಡಕ್ಟರ್​ಗೆ 100 ಪಾವತಿಸಿ 25 ರೂಪಾಯಿ ಚಿಲ್ಲರೆ ಕೇಳಿದ್ದರು. ಆದಾಗ್ಯೂ, ಅವರು ತಮ್ಮ ಬಾಕಿ ಮೊತ್ತವನ್ನು ಹಿಂದಿರುಗಿಸದ ಕಂಡಕ್ಟರ್ ವಿರುದ್ಧ ಪ್ರಯಾಣಿಕ ಗಿರೀಶ್ ಬಿಎಂಟಿಸಿ ಸಂಸ್ಥೆಗೆ ದೂರು ಸಲ್ಲಿಸಿ ತಮಗೆ ಬರಬೇಕಿದ್ದ ರೂ. 25 ಹಣವನ್ನು ಹಿಂಪಡೆದಿದ್ದಾರೆ. ಬಿಎಂಟಿಸಿ ಸಂಸ್ಥೆಯ ಸ್ಪಂದನೆಗೆ ಪ್ರಯಾಣಿಕ ಗಿರೀಶ್ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಕುರಿತು ಮಾತನಾಡಿದ ಗಿರೀಶ್​, ಬಸ್​ನಲ್ಲಿ ಪ್ರಯಾಣಿಸುವಾಗ ಚಿಲ್ಲರೆ ಹಣ ತೆಗೆದುಕೊಂಡು ಹೋಗುವುದು ಪ್ರಯಾಣಿಕನ ಕರ್ತವ್ಯ. ಹಾಗೆಯೇ ಕಂಡಕ್ಟರ್ ಬಳಿ ಚಿಲ್ಲರೆ ಹಣ ಇದ್ದಲ್ಲಿ ಪ್ರಯಾಣಿಕರಿಗೆ ಚಿಲ್ಲರೆ ಹಣ ಕೊಡುವುದು ಅವರ ಕರ್ತವ್ಯ. ಅವರ ಬಳಿ ಚಿಲ್ಲರೆ ಹಣ ಇದ್ದರು ಸಹ ಕೊಡದೆ ಉದಾಸೀನ ವರ್ತನೆ ತೋರಿದ ಹಿನ್ನೆಲೆ ಮತ್ತು 25 ರೂಪಾಯಿ ತಮ್ಮ ದುಡಿಮೆ ಹಣ, ಅದನ್ನು ಕೇಳಿ ಪಡೆಯುವುದು ನಮ್ಮ ಹಕ್ಕು ಸಹ ಆಗಿದೆ ಎಂದರು.

ಇದನ್ನೂ ಓದಿ:ದೊಡ್ಡಬಳ್ಳಾಪುರ ಪೊಲೀಸರಿಂದ ಅಟ್ಟಿಕಾ ಬಾಬು ಬಂಧನ - ATTICA BABU ARRESTED

Last Updated : Jun 29, 2024, 6:12 PM IST

ABOUT THE AUTHOR

...view details