ಕರ್ನಾಟಕ

karnataka

ETV Bharat / state

ಧಾರವಾಡ ಬಳಿ ಭೀಕರ ರಸ್ತೆ ಅಪಘಾತ ; ಕ್ರೂಸರ್​ನಲ್ಲಿದ್ದ 14 ಜನರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ - CRUISER ACCIDENT

ಧಾರವಾಡ ಜಿಲ್ಲೆಯ ಕಲಕೇರಿ ಗ್ರಾಮದ ಸಮೀಪ ಸಂಭವಿಸಿದ ರಸ್ತೆ ಅಪಘಾತದಿಂದ ಕ್ರೂಸರ್​ ವಾಹನದಲ್ಲಿದ್ದ 14 ಜನರು ಗಾಯಗೊಂಡಿದ್ದಾರೆ.

accident
ಅಪಘಾತಕ್ಕೀಡಾದ ಕ್ರೂಸರ್ (ETV Bharat)

By ETV Bharat Karnataka Team

Published : Feb 8, 2025, 9:38 PM IST

ಧಾರವಾಡ :ಅಂತ್ಯಸಂಸ್ಕಾರಕ್ಕೆ ಹೋಗುವಾಗ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಕ್ರೂಸರ್​ನಲ್ಲಿದ್ದ 14 ಜನರು ಗಾಯಗೊಂಡಿದ್ದಾರೆ. ಈ ಪೈಕಿ ನಾಲ್ವರು ಗಂಭೀರವಾಗಿ ಗಾಯವಾಗಿರುವ ಘಟನೆ ಜಿಲ್ಲೆಯ ಕಲಕೇರಿ ಗ್ರಾಮದ ಸಮೀಪ ನಡೆದಿದೆ.

ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯ ಕ್ಯಾರಕೊಪ್ಪ-ಕಲಕೇರಿ ಮಧ್ಯೆ ಅಪಘಾತ ನಡೆದಿದೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ನಾಲ್ವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ 10 ಜನ ಗಾಯಾಳುಗಳನ್ನ ಹುಬ್ಬಳ್ಳಿ ಕಿಮ್ಸ್‌ಗೆ ರವಾನೆ ಮಾಡಲಾಗಿದೆ.

ಸ್ಥಳೀಯರಾದ ಯಲ್ಲಪ್ಪ ಮಾತನಾಡಿದರು (ETV Bharat)

ಕಲಕೇರಿಯಲ್ಲಿ ಗದಿಗೆವ್ವ ಹುಲಮನಿ ಎಂಬುವರ ಅಂತ್ಯಸಂಸ್ಕಾರಕ್ಕೆ ಹೊರಟಿದ್ದಾಗ ಕಲಕೇರಿ ಗ್ರಾಮದ ಸಮೀಪ ಈ ಅವಘಡ ಜರುಗಿದೆ. ಗಾಯಾಳುಗಳೆಲ್ಲ ಧಾರವಾಡ ಹೊಸಯಲ್ಲಾಪುರ ಕೋಳಿಕೇರಿ ನಿವಾಸಿಗಳು ಎಂದು ತಿಳಿದುಬಂದಿದೆ.

ಈ ಬಗ್ಗೆ ಯಲ್ಲಪ್ಪ ಎಂಬುವವರು ಮಾತನಾಡಿ, ಕಲಕೇರಿಗೆ ಮಣ್ಣು ಕೊಡಲು ಹೋಗುವಾಗ ಈ ಘಟನೆ ನಡೆದಿದೆ. ಆಕಸ್ಮಿಕವಾಗಿ ಈ ಘಟನೆ ಜರುಗಿದೆ. 16 ಜನರಿಗೆ ಗಾಯವಾಗಿದೆ. ಇಬ್ಬರು ಗಂಭೀರವಾಗಿದ್ದಾರೆ. ಮುಂದೆ ವಾಹನ ಬಂದಾಗ ಸೈಡ್​ ತೆಗೆದುಕೊಂಡ ಎಂದು ಪೇಷಂಟ್ ಹೇಳಿದ್ದಾರೆ. ಬ್ಯಾಲೆನ್ಸ್​ ತಪ್ಪಿದೆ ಎಂದು ಹೇಳಿದ್ರು. ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ವಾಹನದಲ್ಲಿದ್ದ ಎಲ್ಲರಿಗೂ ಗಾಯವಾಗಿದೆ. ಕೆಲವರಿಗೆ ತಲೆಗೆ ಪೆಟ್ಟಾಗಿದೆ ಎಂದಿದ್ದಾರೆ.

ಇದನ್ನೂ ಓದಿ :ಪ್ರಯಾಗ್​​ರಾಜ್​ನಿಂದ ಹಿಂತಿರುಗುತ್ತಿದ್ದ ಬೆಳಗಾವಿಯ ನಾಲ್ವರ ಸಾವು: ಮೃತದೇಹ ಸ್ಥಳಾಂತರಿಸಲು ಒತ್ತಾಯ - FOUR FROM BELAGAVI DIED IN ACCIDENT

ABOUT THE AUTHOR

...view details