ಕರ್ನಾಟಕ

karnataka

ETV Bharat / sports

ರೋಹಿತ್​, ವಿರಾಟ್​ ಮುಂದಿನ ಪಂದ್ಯಗಳಲ್ಲಿ ರನ್​ ಗಳಿಸಿದರೆ ಹಿರಿತನ ಸಾಬೀತಾಗುತ್ತದೆ: ಸಂಜಯ್​ ಮಾಂಜ್ರೇಕರ್​ - MANJREKAR INTERVIEW

ಟಿ-20 ವಿಶ್ವಕಪ್​ನಲ್ಲಿ ಭಾರತ ತಂಡ ಸೂಪರ್​-8 ಹಂತಕ್ಕೆ ತಲುಪಿದೆ. ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ಶಿವಂ ದುಬೆ ವಿಫಲರಾಗಿದ್ದಾರೆ. ಮುಂದಿನ ಮಹತ್ವದ ಪಂದ್ಯಗಳಲ್ಲಿ ಅವರ ಪ್ರದರ್ಶನದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಈ ಬಗ್ಗೆ ವೀಕ್ಷಕ ವಿವರಣೆಗಾರ ಸಂಜಯ್​ ಮಾಂಜ್ರೇಕರ್​ ಅಭಿಪ್ರಾಯ ಹೀಗಿದೆ.

ಸಂಜಯ್​ ಮಾಂಜ್ರೇಕರ್​
ಸಂಜಯ್​ ಮಾಂಜ್ರೇಕರ್​ (ETV Bharat)

By PTI

Published : Jun 16, 2024, 6:42 PM IST

ನವದೆಹಲಿ:ಟಿ-20 ವಿಶ್ವಕಪ್​ನಲ್ಲಿ ಹಿರಿಯ ಆಟಗಾರರಾದ ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮಾ ಅವರ ಪ್ರದರ್ಶನದ ಮೇಲೆ ಪ್ರಶ್ನೆಗಳು ಏಳುತ್ತಿವೆ. ಮಹತ್ವದ ಟೂರ್ನಿಯಲ್ಲಿ ಇಬ್ಬರೂ ಆಟಗಾರರು ಕೈಕೊಡುತ್ತಿರುವುದು ತಂಡಕ್ಕೆ ಹಿನ್ನಡೆ ಉಂಟು ಮಾಡುತ್ತಿದೆ. ಸೂಪರ್​-8 ಹಂತದಲ್ಲಿ ಬಲಿಷ್ಠ ತಂಡಗಳು ಎದುರಾಗಲಿವೆ. ಇದರಿಂದ ತಂಡ ಸಂಘಟಿತ ಪ್ರದರ್ಶನ ನೀಡುವುದು ಅನಿವಾರ್ಯವಾಗಿದೆ.

ಟಿ-20 ವಿಶ್ವಕಪ್​ಗೆ ವಿರಾಟ್​ ಮತ್ತು ರೋಹಿತ್​ ಆಯ್ಕೆಯನ್ನೇ ಕೆಲವರು ಪ್ರಶ್ನಿಸಿದ್ದರು. ಆದರೆ, ಇದನ್ನು ವೀಕ್ಷಕ ವಿವರಣೆಗಾರ, ಭಾರತ ತಂಡದ ಮಾಜಿ ಆಟಗಾರ ಸಂಜಯ್​ ಮಾಂಜ್ರೇಕರ್​ ಸಮರ್ಥಿಸಿಕೊಂಡಿದ್ದಾರೆ. ಹಿರಿಯ ಆಟಗಾರರು ಲೀಗ್​ನಲ್ಲಿ ರನ್​ ಗಳಿಸಲು ಸಾಧ್ಯವಾಗದೇ ಇರಬಹುದು. ಆದರೆ, ಮುಂದಿನ ಪಂದ್ಯಗಳಲ್ಲಿ ಅವರ ಅಗತ್ಯ ಹೆಚ್ಚಿದೆ. ಅಲ್ಲಿ ಅವರು ರನ್​ ಗಳಿಸಿದರೆ, ಈವರೆಗಿನ ವೈಫಲ್ಯ ಮುಚ್ಚಿ ಹೋಗಲಿದೆ ಎಂದು ಹೇಳಿದರು.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕೊಹ್ಲಿ ಮೂರು ಲೀಗ್​ ಪಂದ್ಯಗಳಲ್ಲಿ ಎರಡಂಕಿಯನ್ನೂ ತಲುಪಿಲ್ಲ. ನಾಯಕ ರೋಹಿತ್ ಶರ್ಮಾ ಐರ್ಲೆಂಡ್ ವಿರುದ್ಧ ಅರ್ಧಶತಕ ಬಾರಿಸಿದ್ದು, ಬಿಟ್ಟರೆ ಪಾಕಿಸ್ತಾನ ಮತ್ತು ಅಮೆರಿಕ ವಿರುದ್ಧ ರನ್​ ಗಳಿಸಲಿಲ್ಲ. ಆದರೆ, ಅವರಿಬ್ಬರ ಅನುಭವ ತಂಡಕ್ಕೆ ನಿಜಕ್ಕೂ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಲೀಗ್​ನಲ್ಲಿ ಆಡದಿದ್ದರೂ, ನಾಕೌಟ್​, ಸೆಮಿಫೈನಲ್​, ಫೈನಲ್​ ಪಂದ್ಯದಲ್ಲಿ ಮಿಂಚಿದರೆ, ಹಿರಿತನಕ್ಕೆ ತಕ್ಕುದಾದ ಬೆಲೆ ಸಿಗಲಿದೆ. ಅಭಿಮಾನಿಗಳ ನಿರೀಕ್ಷೆಯೂ ಇದೇ ಆಗಿರುತ್ತದೆ. 1992 ರಲ್ಲಿ ಪಾಕಿಸ್ತಾನ ಕೂಡ ಇಂಥದ್ದೇ ಲೆಕ್ಕಾಚಾರದಲ್ಲಿ ಗೆಲುವು ಸಾಧಿಸಿತ್ತು. ಕಠಿಣ ಪಂದ್ಯಗಳಲ್ಲಿ ಹಿರಿಯರ ಅನುಭವ ಕೆಲಸ ಮಾಡುತ್ತದೆ. ಹೀಗಾಗಿ ಆಯ್ಕೆ ಸಮಿತಿ ಈ ನಿರ್ಧಾರಕ್ಕೆ ಬಂದಿರುತ್ತದೆ ಎಂದು ಮಾಂಜ್ರೇಕರ್​ ಹೇಳಿದರು.

ಭವಿಷ್ಯದಲ್ಲಿ ವಿರಾಟ್​ ಮತ್ತು ರೋಹಿತ್​ ಟಿ20 ಟೂರ್ನಿಗಳಲ್ಲಿ ಆಡಲಿದ್ದಾರೆಯೇ ಎಂಬ ಪ್ರಶ್ನೆಗೆ, ಇದನ್ನು ಆಯ್ಕೆ ಸಮಿತಿ ನಿರ್ಧರಿಸುತ್ತದೆ. ಈ ಇಬ್ಬರ ಬಗ್ಗೆ ಆಯ್ಕೆ ಸಮಿತಿಯ ನಿಲುವೇನು ಎಂದು ಅವರನ್ನೇ ಕೇಳಬೇಕು. ಇಬ್ಬರ ಮೇಲೆ ಇನ್ನೂ ನಂಬಿಕೆ ಇರುವ ಕಾರಣ ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ವಿಂಡೀಸ್​ನಲ್ಲಿ ಮಿಂಚುವರೇ ದುಬೆ?:ಐಪಿಎಲ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಪರ ಮಿಂಚಿದ್ದ ಶಿವಂ ದುಬೆ, ವಿಶ್ವಕಪ್​ನಲ್ಲಿ ವಿಫಲವಾಗುತ್ತಿರುವುದು ತಂಡಕ್ಕೆ ತಲೆನೋವಾಗಿದೆ. ಕಠಿಣ ನ್ಯೂಯಾರ್ಕ್​ ಪಿಚ್​ನಲ್ಲಿ ರನ್​ ಕಲೆಹಾಕಲು ಪರದಾಡಿದ್ದರು. ಇದೀಗ ಮುಂದಿನ ಪಂದ್ಯಗಳಲ್ಲಿ ವಿಂಡೀಸ್​​ನ ನಿಧಾನಗತಿ ಪಿಚ್​​ನಲ್ಲಿ ನಡೆಯಲಿದ್ದು, ಅಲ್ಲಿಯಾದರೂ ದುಬೆ ಬ್ಯಾಟಿಂಗ್​ ಕರಾಮತ್ತು ತೋರಿಸಲಿದ್ದಾರಾ ಎಂಬುದು ಕುತೂಹಲಕಾರಿಯಾಗಿದೆ.

ಶಿವಂ ದುಬೆ ಈಗಲೂ ಹಿಟ್​ ಬ್ಯಾಟರ್​. ಐಪಿಎಲ್​ನಲ್ಲಿ ಸ್ಪಿನ್ನರ್​ ಬೆಂಡೆತ್ತಿದ ಆತ, ನ್ಯೂಯಾರ್ಕ್​ನಲ್ಲಿ ವಿಫಲನಾದರು. ವಿಂಡೀಸ್​ ನೆಲದಲ್ಲಿ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು. ಐಪಿಎಲ್​ ಪ್ರದರ್ಶನ ಇಲ್ಲಿ ಮುಂದುವರಿದರೆ, ತಂಡಕ್ಕೆ ಪ್ಲಸ್​ ಆಗಲಿದೆ ಎಂದು ಮಾಂಜ್ರೇಕರ್​ ಹೇಳಿದರು.

ಮೂರನೇ ಕ್ರಮಾಂದಲ್ಲಿ ರಿಷಭ್ ಅದ್ಭುತ ನಡೆ:ರಿಷಬ್ ಪಂತ್​​ರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸುತ್ತಿರುವುದು ಅದ್ಭುತ ನಿರ್ಧಾರವಾಗಿದೆ. ಇದನ್ನು ನಾವು ಊಹಿಸಿರಲಿಲ್ಲ. ಆದರೆ, ಎದುರಾಳಿಗಳಿಗೆ ಮಾಸ್ಟರ್​ ಸ್ಟ್ರೋಕ್ ಆಗಿದೆ. ಲೀಗ್​ ಪಂದ್ಯದಲ್ಲಿ ಪಂತ್​ ಅಬ್ಬರಿಸಿದ್ದು ನೋಡಿದರೆ, ಮುಂದಿನ ಪಂದ್ಯಗಳಲ್ಲೂ ಆತ ತಂಡಕ್ಕೆ ಅಮೋಘ ನೆರವು ನೀಡಲಿದ್ದಾನೆ ಎಂದು ವಿಧಿತವಾಗುತ್ತದೆ ಎಂದರು.

ವಿಂಡೀಸ್​ನಲ್ಲಿ ಸ್ಪಿನ್ನರ್​ ಬಳಸಬಹುದು:ಸ್ಪಿನ್ನರ್​ ಕುಲದೀಪ್​ ಯಾದವ್​ಗೆ ಈವರೆಗೆ ಅವಕಾಶ ಸಿಕ್ಕಿಲ್ಲ. ವೆಸ್ಟ್​ ಇಂಡೀಸ್​ ನೆಲದಲ್ಲಿನ ಪಿಚ್​ಗಳು ಸ್ಪಿನ್ನರ್​ಗಳಿಗೆ ನೆರವು ನೀಡಲಿವೆ. ಆಗ ಕುಲದೀಪ್​ಗೆ ಅವಕಾಶ ನೀಡಬಹುದು. ಇಲ್ಲವಾದಲ್ಲಿ ರವೀಂದ್ರ ಜಡೇಜಾ ಮತ್ತು ಅಕ್ಷರ್​ ಪಟೇಲ್​ ಜೋಡಿಯನ್ನು ಮುಂದುವರಿಸುವುದು ಉತ್ತಮ ಆಯ್ಕೆಯಾಗಿದೆ ಎಂದು ಮಾಂಜ್ರೇಕರ್​ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ಟಿ20 ವಿಶ್ವಕಪ್: ಆಸೀಸ್​ ವಿರುದ್ದ ಸೋತ ಸ್ಕಾಟ್ಲೆಂಡ್ ಔಟ್​; ಸೂಪರ್​-8ಗೆ ಇಂಗ್ಲೆಂಡ್​​ ಎಂಟ್ರಿ - Australia Defeats Scotland

ABOUT THE AUTHOR

...view details