ಕರ್ನಾಟಕ

karnataka

ಶನಿವಾರದ ಪಂಚಾಂಗ, ಭವಿಷ್ಯ: ನಿಮಗಿಂದು ಹಣಕಾಸಿನ ಕೊರತೆ ಸಾಧ್ಯತೆ, ಎಚ್ಚರಿಕೆಯಿಂದ ನಿಭಾಯಿಸಿ - Saturday Horoscope

By ETV Bharat Karnataka Team

Published : Sep 14, 2024, 5:49 AM IST

ಇಂದಿನ ಪಂಚಾಂಗ ಹಾಗೂ ರಾಶಿ ಭವಿಷ್ಯ ಹೀಗಿದೆ.

Horoscope
ರಾಶಿ ಭವಿಷ್ಯ (ETV Bharat)

ಪಂಚಾಂಗ:

14-09-2024, ಶನಿವಾರ

ಸಂವತ್ಸರ: ಕ್ರೋಧಿ ನಾಮ ಸಂವತ್ಸರ

ಆಯನ: ದಕ್ಷಿಣಾಯಣ

ಮಾಸ: ಭಾದ್ರಪದ

ಪಕ್ಷ: ಶುಕ್ಲ

ತಿಥಿ: ಏಕಾದಶಿ

ನಕ್ಷತ್ರ: ಉತ್ತರಾಷಾಢ

ಸೂರ್ಯೋದಯ: ಮುಂಜಾನೆ 06:06 ಗಂಟೆಗೆ

ಅಮೃತಕಾಲ: ಮುಂಜಾನೆ 06:06 ರಿಂದ 07:38 ಗಂಟೆವರೆಗೆ

ವರ್ಜ್ಯಂ: ಸಂಜೆ 06.15ರಿಂದ ರಾತ್ರಿ 07.50 ಗಂಟೆ ತನಕ

ದುರ್ಮುಹೂರ್ತಂ: ಬೆಳಗ್ಗೆ 7:42 ರಿಂದ 8:30 ಗಂಟೆ ವರೆಗೆ

ರಾಹುಕಾಲ: ಬೆಳಗ್ಗೆ 09:10 ರಿಂದ 10:41 ಗಂಟೆ ತನಕ

ಸೂರ್ಯಾಸ್ತ: ಸಂಜೆ 06:19 ಗಂಟೆಗೆ

ರಾಶಿಫಲ:

ಮೇಷ :ಕೆಲವೊಮ್ಮೆ ನೀವು ಒತ್ತಡದಲ್ಲಿರುವುದು ಒಳ್ಳೆಯದು ಏಕೆಂದರೆ ಇದು ನಿಮ್ಮ ಸಾಮರ್ಥ್ಯವನ್ನು ಪೂರ್ಣವಾಗಿ ಹೊರತರುತ್ತದೆ. ನೀವು ನಿಮ್ಮ ಕೆಲಸದಲ್ಲಿ ಎಲ್ಲ ನಿಮ್ಮ ಸಹೋದ್ಯೋಗಿಗಳನ್ನೂ ಮೀರುತ್ತೀರಿ. ಆದರೆ, ಫಲಿತಾಂಶಗಳು ನಿಮ್ಮ ನಿರೀಕ್ಷೆಗಳಿಗೆ ಹೊಂದಿಕೊಳ್ಳುವುದಿಲ್ಲ. ಫಲಿತಾಂಶಗಳು ರಾತ್ರೋರಾತ್ರಿ ಬರುವುದಿಲ್ಲವಾದ್ದರಿಂದ ನೀವು ತಾಳ್ಮೆಯಿಂದ ಇರಬೇಕು.

ವೃಷಭ :ಇಂದು ನಿಮ್ಮ ಗೋಜಲುಗಳಿಂದ ಬಿಡಿಸಿಕೊಂಡು ಹೊರಹೋಗುವ ದಿನ. ನೀವು ಇತರರ ಕೆಲಸಕ್ಕೆ ಆಕ್ಷೇಪಣೆಗೆ ಒಳಗಾಗುತ್ತೀರಿ. ಮಧ್ಯಾಹ್ನದ ವೇಳೆಗೆ ವಿಷಯಗಳು ಆಶಾಭಂಗ ತರಬಹುದು, ಮತ್ತು ನಿಮ್ಮ ವಿಶ್ವಾಸದ ಮಟ್ಟ ಕುಸಿಯಬಹುದು. ನಿಮ್ಮ ಶಕ್ತಿಯ ಮೇಲೆ ಕೆಲಸ ಮಾಡಿ ನಿಮ್ಮ ದೌರ್ಬಲ್ಯವನ್ನು ನಿವಾರಿಸಿ.

ಮಿಥುನ :ನೀವು ನಿಮ್ಮ ಸಮಯವನ್ನು ಇಂದು ಇತರರು ಮತ್ತು ಅವರ ಪ್ರೇರಣೆಗಳನ್ನು ಕಂಡುಕೊಳ್ಳುವಲ್ಲಿ ಕಳೆಯುತ್ತೀರಿ. ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಭದ್ರತೆ ಮತ್ತು ಹಣಕಾಸಿನ ವಿಷಯಗಳನ್ನು ಚರ್ಚಿಸುತ್ತಾ ಕಾಲ ಕಳೆಯುತ್ತೀರಿ. ನೀವು ನಿಮ್ಮ ಆರೈಕೆಯ ಸ್ವಭಾವದಿಂದಾಗಿ ನೀವು ಜನರ ಪ್ರೀತಿ ಮತ್ತು ಶ್ಲಾಘನೆ ಪಡೆಯುತ್ತೀರಿ.

ಕರ್ಕಾಟಕ :ಆತ್ಮೀಯ ಮಿತ್ರರು ನಿಮ್ಮ ಪ್ರವೃತ್ತಿಯಿಂದ ಸಂತೋಷಪಡುತ್ತಾರೆ. ನೀವು ಅವರನ್ನು ಸಂತೋಷವಾಗಿರಿಸಲು ಮತ್ತು ಅವರೊಂದಿಗೆ ಸಂತೋಷದ ಸಂಜೆ ಕಳೆಯಲು ಪ್ರಯತ್ನಿಸುತ್ತೀರಿ. ಪ್ರೀತಿ ಮತ್ತು ಸೌಹಾರ್ದ ಬಂಧಗಳು ದೀರ್ಘವಾಗಿರುತ್ತವೆ ಮತ್ತು ಫಲದಾಯಕವಾಗುತ್ತವೆ.

ಸಿಂಹ :ನಿಮ್ಮ ದಿನ ಸಂಪೂರ್ಣ ಮಿಶ್ರ ಫಲಿತಾಂಶಗಳು. ಒಂದು ಕಡೆ ನಿಮ್ಮ ಸಂಗಾತಿ ಅಥವಾ ವ್ಯಾಪಾರ ಪಾಲುದಾರರಿಂದ ಅಸಂತೃಪ್ತಿ ಹೊಂದಿದ್ದೀರಿ, ಇನ್ನೊಂದೆಡೆ ನೀವು ಸಟ್ಟಾ ಉದ್ಯಮದಲ್ಲಿ ಅದ್ಭುತ ಗಳಿಕೆ ಪಡೆಯುತ್ತೀರಿ. ನೀವು ಕೆಲ ಮಿತ್ರರ ಸಲಹೆಯ ಮೇರೆಗೆ ಸಮತೋಲನ ಕಾಪಾಡಿಕೊಳ್ಳುತ್ತೀರಿ.

ಕನ್ಯಾ :ನೀವು ಇಂದು ಐಡಿಯಾಗಳ ಅತಿಯಾದ ಹರಿವನ್ನು ಕಾಣುತ್ತೀರಿ. ನಿಮಗೆ ಗುಣಪಡಿಸುವ ಸ್ಪರ್ಶವಿದೆ, ಹೀಲರ್ ಕೈಗಳಿವೆ ಮತ್ತು ಹಲವು ಜನರಿಗೆ ನೆರವಾಗಲು ಸಮರ್ಥರಾಗುತ್ತೀರಿ. ನೀವು ಬಹಳ ವಿವೇಚನೆಯುಳ್ಳವರು, ನಿಮ್ಮ ಮನಸ್ಸು ಓದುವ ಸಾಮರ್ಥ್ಯಗಳು ನಿಮಗೆ ಹಾಗೂ ನಿಮ್ಮ ಪ್ರೀತಿಪಾತ್ರರಿಗೆ ಅದ್ಭುತಗಳನ್ನು ಮಾಡುತ್ತವೆ.

ತುಲಾ :ಉತ್ಕಂಠಿತ ದಿನ ನಿಮ್ಮ ಮುಂದಿದೆ. ಈ ದಿನ, `ಬೇಸಿಗೆಯ ದಿನ ನಾವು ಪಟಗಳನ್ನು ಹಾರಿಸಿದೆವು’ ಎಂಬಂತೆ ಉತ್ತಮ ಭವಿಷ್ಯ ಬಯಸಿದಾಗ ಅದೇ ಮಾನದಂಡವಾಗುತ್ತದೆ. ನಿಮ್ಮ ಹೊರನೋಟದಲ್ಲಿ ಬದಲಾವಣೆಯ ಶರಧಿಯನ್ನೇ ನಿರೀಕ್ಷಿಸಿ, ಅದಕ್ಕೆ ನಿಮ್ಮ ಪ್ರಿಯತಮೆಯ ಸೂಚನೆಯೇ ಕಾರಣ.

ವೃಶ್ಚಿಕ :ನೀವು ಹೊಸ ವ್ಯಾಪಾರೋದ್ಯಮ ಪ್ರಾರಂಭಿಸಲು ಯೋಜಿಸುತ್ತಿರುವುದರಿಂದ ನಿಮ್ಮ ಶಕ್ತಿಯ ಮಟ್ಟ ಎಲ್ಲಕ್ಕಿಂತ ಇಂದು ಹೆಚ್ಚಾಗಿದೆ. ನೀವು ನಿಮ್ಮ ಅತ್ಯುತ್ತಮವಾದುದನ್ನು ನೀಡಲು ನಿರ್ಧರಿಸಿದ್ದೀರಿ ಮತ್ತು ನಿಮ್ಮ ಯೋಜನೆಗಳಲ್ಲಿ ಯಶಸ್ವಿಯಾಗಲು ಶ್ರಮ ಪಡುತ್ತೀರಿ. ಈ ದಿನ ನಿಮ್ಮ ಸಹವರ್ತಿಗಳಿಂದ ಅಭಿನಂದನೆಗಳು ಮತ್ತು ಸಕಾರಾತ್ಮಕ ಅಭಿಪ್ರಾಯ ಪಡೆದ ನಂತರ ಫಲದಾಯ ಮತ್ತು ಮೌಲಿಕ ಎನಿಸುತ್ತದೆ.

ಧನು :ನಿಮ್ಮ ಕೋಪ ಬೆಂಕಿಯುಂಡೆಯಷ್ಟು ಬಿಸಿಯಾಗಿದೆ. ಕೋಪ ವಿಶ್ವವನ್ನು ನಾಶ ಮಾಡುತ್ತದೆ ಎಂದು ಅಷ್ಟಲ್ಲದೆ ಹೇಳಿಲ್ಲ. ನೀವು ನಿಮ್ಮ ಆಕ್ರಮಣಕಾರಿ ವರ್ತನೆಯಿಂದ ನಿಮ್ಮದೇ ಕಾಲಿಗೆ ಏಟು ಮಾಡಿಕೊಳ್ಳುತ್ತೀರಿ. ಶಾಂತವಾಗಿರಿ ಮತ್ತು ಕೆಲಸ ಮಾಡುವ ಮುನ್ನ ಚಿಂತಿಸಿ. ನೀವು ಹಣಕಾಸಿನ ಕೊರತೆ ಎದುರಿಸುವ ಸಾಧ್ಯತೆಗಳಿವೆ, ಅದನ್ನು ಎಚ್ಚರಿಕೆಯಿಂದ ನಿಭಾಯಿಸಿ.

ಮಕರ :ಇಂದು ನೀವು ನಿಮ್ಮ ಗುರಿಗಳನ್ನು ಸಾಧಿಸಲು ನ್ಯಾಯ ಮತ್ತು ಅನ್ಯಾಯದ ದಾರಿಗಳಲ್ಲಿ ಪವರ್ ಗೇಮ್ ಆಡುತ್ತೀರಿ. ಬೌದ್ಧಿಕ ಪ್ರಗತಿ ಮುಖ್ಯವಾಗಿದೆ; ನಿಮ್ಮ ಸಾಕ್ಷಾತ್ಕಾರಗಳೂ ಸಮಾನವಾಗಿ ಒಳ್ಳೆಯದು. ನಿಮ್ಮ ಕೆಚ್ಚು ಇಂದು ನೀವು ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳಿಗೆ ಮಾರ್ಗದರ್ಶನ ನೀಡುತ್ತವೆ ಮತ್ತು ಉಳಿದಿದ್ದು ನಿಶ್ಚಿತ, ಯಾವುದೂ ನಿಮ್ಮನ್ನು ತೊಂದರೆಗೆ ಈಡು ಮಾಡುವುದಿಲ್ಲ.

ಕುಂಭ : ಅನಿರೀಕ್ಷಿತವಾದುದನ್ನು ಇಂದು ನಿರೀಕ್ಷಿಸಿ! ಯಶಸ್ಸು, ಹಣ, ಪ್ರೀತಿ ಯಾವುದರ ಕುರಿತು ನೀವು ದಿಢೀರ್ ಎಂದು ಭರವಸೆ ಕಳೆದುಕೊಳ್ಳುತ್ತೀರೋ ಅದು ನಿಮ್ಮ ದಾರಿಯಲ್ಲಿ ಬರುತ್ತದೆ. ಸಂಜೆಯಲ್ಲಿ, ಓದು, ಸಂಶೋಧನೆ, ಚರ್ಚೆ ಅಥವಾ ಅಂತಹ ಚಟುವಟಿಕೆಯ್ನು ನಡೆಸುತ್ತೀರಿ.

ಮೀನ :ಈ ದಿನ ನೀವು ಮನೆಯಲ್ಲಿ ಹಾಗೂ ಕೆಲಸದ ಸ್ಥಳದಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುತ್ತೀರಿ. ಮನೆ ನವೀಕರಣ ಯೋಜನೆಗಳಲ್ಲಿ ತೊಡಗಿಕೊಳ್ಳುವುದನ್ನು ನಿರೀಕ್ಷಿಸಿ, ಅಲ್ಲಿ ವೆಚ್ಚಗಳು ಏರುತ್ತವೆ. ಕಠಿಣ ದಿನದ ಕೆಲಸದ ನಂತರ ಪ್ರಶಂಸೆ ಮತ್ತು ಕೃತಜ್ಞತೆ ನಿಮ್ಮ ದಾರಿಯಲ್ಲಿ ಬರುತ್ತವೆ.

ABOUT THE AUTHOR

...view details