ಕರ್ನಾಟಕ

karnataka

ಶುಕ್ರವಾರದ ಪಂಚಾಂಗ, ರಾಶಿ ಭವಿಷ್ಯ: ನಿಮ್ಮ ಮನೆಯಲ್ಲಿಂದು ಸಂಭ್ರಮವೋ ಸಂಭ್ರಮ!

By ETV Bharat Karnataka Team

Published : Feb 2, 2024, 4:47 AM IST

ಇಂದಿನ ಪಂಚಾಂಗ ಹಾಗೂ ರಾಶಿ ಭವಿಷ್ಯ ಹೀಗಿದೆ..

Etv BharatEtv bharat horoscope today
ಶುಕ್ರವಾರದ ಪಂಚಾಂಗ, ರಾಶಿ ಭವಿಷ್ಯ: ನಿಮ್ಮ ಮನೆಯಲ್ಲಿಂದು ಸಂಭ್ರಮ!

ಇಂದಿನ ಪಂಚಾಂಗ:

2-02-2024, ಶುಕ್ರವಾರ

ಸಂವತ್ಸರ: ಶುಭಕೃತ್

ಆಯನ: ಉತ್ತರಾಯಣ

ಮಾಸ: ಪುಷ್ಯ

ಪಕ್ಷ: ಕೃಷ್ಣ

ತಿಥಿ: ಸಪ್ತಮಿ

ನಕ್ಷತ್ರ: ಸ್ವಾತಿ

ಸೂರ್ಯೋದಯ: ಮುಂಜಾನೆ 06:45 ಗಂಟೆಗೆ

ಅಮೃತಕಾಲ: ಬೆಳಗ್ಗೆ 08:11 ರಿಂದ 09:38 ಗಂಟೆವರೆಗೆ

ವರ್ಜ್ಯಂ: ಸಂಜೆ 6:15 ರಿಂದ ರಾತ್ರಿ 7:50 ಗಂಟೆ ತನಕ

ದುರ್ಮುಹೂರ್ತಂ: ಬೆಳಗ್ಗೆ 9:9 ರಿಂದ 9:57 ಹಾಗೂ ಮಧ್ಯಾಹ್ನ 3:33 ರಿಂದ 4:21 ಗಂಟೆವರೆಗೆ

ರಾಹುಕಾಲ: ಬೆಳಗ್ಗೆ 11:05 ರಿಂದ 12:31 ಗಂಟೆ ತನಕ

ಸೂರ್ಯಾಸ್ತ: ಸಂಜೆ 06:18 ಗಂಟೆಗೆ

ರಾಶಿ ಭವಿಷ್ಯ :

ಮೇಷ :ಇಂದು ನೀವು ನಿಮ್ಮ ಪ್ರೀತಿಪಾತ್ರರನ್ನು ಸಂತೋಷಗೊಳಿಸಲು ಪ್ರಯತ್ನಿಸಬಹದು, ಮತ್ತು ಹೊಸ ರೀತಿಯಲ್ಲಿ ವ್ಯಕ್ತಿಯನ್ನು ಮನ ಒಲಿಸಲೂ ಬಯಸಬಹುದು. ನಿಮ್ಮ ಮಿತ್ರರು ಮತ್ತು ಬಂಧುಗಳಿಂದ ನೀವು ಅತ್ಯಂತ ಸಂತೋಷಗೊಳ್ಳದೇ ಇರಬಹುದು, ಆದರೆ ನೀವು ಸಂಜೆ ಪಾರ್ಟಿಗೆ ಹೋಗುವ ಮೂಲಕ ಹೊಸ ಮಿತ್ರರನ್ನು ಮಾಡಿಕೊಳ್ಳುತ್ತೀರಿ.

ವೃಷಭ :ಇಂದು, ನಿಮ್ಮ ಭಾವನೆಗಳು ಮತ್ತು ಅಭಿಪ್ರಾಯಗಳು ಉನ್ನತ ಮಟ್ಟದಲ್ಲಿರುತ್ತವೆ. ನಿಮಗೆ ಹತ್ತಿರದಲ್ಲಿರುವವರೊಂದಿಗೆ ಭಾವನಾತ್ಮಕ ಭೇಟಿಯ ಬಲವಾದ ಸಾಧ್ಯತೆ ಇದೆ. ನೀವು ಈ ಸಭೆಯಲ್ಲಿ ಇತರರಿಂದ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಇದೆ. ಯಾವುದೇ ಬಗೆಯ ವಿವಾದ ಅಥವಾ ಬಿಕ್ಕಟ್ಟಿಗೆ ಸಿಲುಕಿಕೊಳ್ಳುವುದನ್ನು ತಪ್ಪಿಸಿ.

ಮಿಥುನ :ನೀವು ನಿಮ್ಮ ಹೃದಯಕ್ಕೆ ಹತ್ತಿರವಿರುವ ಕೆಲಸಗಳನ್ನು ಮಾಡಲು ಬಯಸುತ್ತೀರಿ. ಜನರ ಕಷ್ಟಗಳಲ್ಲಿ ನೆರವಾಗುವುದನ್ನು ಇಷ್ಟಪಡುತ್ತೀರಿ ಮತ್ತು ಈ ಪ್ರಕ್ರಿಯೆಯಲ್ಲಿ ಸ್ವಾತಂತ್ರ್ಯ ಅನುಭವಿಸುತ್ತೀರಿ. ನಿಮ್ಮ ಮನಸ್ಸಿನ ಸೇವಾಸಕ್ತಿ ಎತ್ತರಿಸಿದ ಸಾಮಾಜಿಕ ಸ್ಥಾನಮಾನ ಮತ್ತು ಸುಧಾರಿತ ವಿಶ್ವಾಸ ನೀಡುತ್ತದೆ.

ಕರ್ಕಾಟಕ :ನೀವು ಅನಗತ್ಯ ಘಟನೆಗಳು ಮತ್ತು ಸನ್ನಿವೇಶಗಳನ್ನು ಎದುರಿಸಬಹುದು. ಇದರ ಫಲಿತಾಂಶದಿಂದ, ನೀವು ದುಃಖಿತರಾಗುತ್ತೀರಿ. ಆದರೂ ನೀವು ನಿಮ್ಮ ಸಾಮರ್ಥ್ಯದಿಂದ ಅದರಿಂದ ಹೊರಬರುತ್ತೀರಿ. ಅಧ್ಯಯನಕ್ಕೆ ಪ್ರಯತ್ನಗಳನ್ನು ಹಾಕಿರಿ. ಯಶಸ್ಸಿನಲ್ಲಿ ವಿಧಿಯ ಪಾತ್ರ ಶೇಕಡಾ ಒಂದರಷ್ಟು ಮತ್ತು ಪ್ರಯತ್ನ ಶೇ.99ರಷ್ಟು ಎಂದು ನೆನಪಿಟ್ಟುಕೊಳ್ಳಿ.

ಸಿಂಹ :ಹಳೆಯ ಪರಿಚಯಗಳನ್ನು ನವೀಕರಿಸಲು ಮತ್ತು ಹೊಸ ಬಾಂಧವ್ಯಗಳನ್ನು ಮಾಡಿಕೊಳ್ಳಲು ಇದು ಒಳ್ಳೆಯ ದಿನವಾಗಿದೆ. ನಿಮ್ಮ ಮಿತ್ರರು ಹಾಗೂ ಬಂಧುಗಳು ಬಹುಶಃ ಇಂದು ನಿಮ್ಮನ್ನು ಭೇಟಿ ಮಾಡುತ್ತಾರೆ. ನಿಮ್ಮ ಮನೆಯನ್ನು ಆನಂದದ ಭಾವನೆ ತುಂಬಿರುತ್ತದೆ. ನಿಮ್ಮ ಅತಿಥಿಗಳಿಗೆ ನೀವು ಅದ್ಧೂರಿ ಕಾರ್ಯಕ್ರಮ ನೀಡುತ್ತೀರಿ.

ಕನ್ಯಾ :ತರ್ಕ ಹಾಗೂ ಭಾವನೆಗಳು, ನಿಮ್ಮ ಬಾಂಧವ್ಯದಲ್ಲಿ ಇಂದು ಪ್ರಭಾವ ಬೀರುತ್ತವೆ. ಭಾವನಾತ್ಮಕವಾಗಿ ನೀವು ಕೊಂಚ ಅನುಮಾನದ ಭಾವನೆ ಅನುಭವಿಸುತ್ತೀರಿ ಮತ್ತು ಇದು ನಿಮ್ಮ ಭಾವನೆಗಳು ಹಾಗೂ ನೀವು ವಾಸ್ತವವಾಗಿ ಏನನ್ನು ನಿರೀಕ್ಷಿಸಿದ್ದರೋ ಅದರ ನಡುವೆ ಓಲಾಡುತ್ತದೆ. ಆದಾಗ್ಯೂ, ನೀವು ಇತರರ ದೃಷ್ಟಿಕೋನಗಳ ಮೇಲೆ ಆಧಾರಪಡುವುದಕ್ಕಿಂತ ನಿಮ್ಮ ಆಂತರಿಕ ಧ್ವನಿಯ ಮೇಲೆ ಆಧಾರಪಡುತ್ತೀರಿ.

ತುಲಾ :ನಿಮ್ಮಲ್ಲಿನ ಭಾವಾತಿರೇಕ ಮುಂಬದಿಗೆ ಬರುತ್ತದೆ. ನೀವು ಇಂದು ಮಾಡುವ ಕೆಲಸದಲ್ಲಿ ನಿಷ್ಠೆ ಅಥವಾ ಕುಟುಂಬಕ್ಕೆ ಬದ್ಧತೆ ಎಲ್ಲದರಲ್ಲೂ ನೀವು ಕಾಣಪಡಿಸುತ್ತೀರಿ. ವ್ಯಾಪಾರದಲ್ಲಿ ನೀವು ಶ್ರೇಷ್ಠವಾದುದನ್ನು ನೀಡುವ ಮೂಲಕ ಸ್ಪರ್ಧೆ ಒಡ್ಡುತ್ತೀರಿ ಹಾಗೂ ನೀವು ಮಾಡುವುದರಲ್ಲಿ ಶ್ರೇಷ್ಠರಾಗಿರುತ್ತೀರಿ.

ವೃಶ್ಚಿಕ :ನಿಮ್ಮ ತಾರೆಗಳು ಇಂದು ಹಣದ ಅತಿಯಾದ ಖರ್ಚು ಸೂಚಿಸುತ್ತಿವೆ. ಅದನ್ನು ನೀವು ನಿಮ್ಮ ಪ್ರೀತಿಪಾತ್ರರಿಗೆ ಮಾಡುತ್ತೀರಿ. ಹಣ ಪ್ರೀತಿಪಾತ್ರರಿಗಿಂತ ಹೆಚ್ಚೇ? ಹೊರಗಡೆ ಟ್ರಿಪ್ ಮತ್ತು ಸುತ್ತಾಟಕ್ಕೆ ಕರೆದೊಯ್ಯುವ ಮೂಲಕ ಅವರನ್ನು ಆಶ್ಚರ್ಯಗೊಳಿಸಲು ವಿಶೇಷ ಪ್ರಯತ್ನ ಮಾಡುತ್ತೀರಿ.

ಧನು :ನೀವು ಬಾಲ್ಯದ ನೆನಪುಗಳಲ್ಲಿ ಮುಳುಗಿ ಹೋಗುತ್ತೀರಿ. ನೀವು ದಿಢೀರ್ ರಜೆ ಪೆದುಕೊಂಡು ನಗರದ ಹೊರವಲಯಕ್ಕೆ ಟ್ರಿಪ್ ಮಾಡಬಹುದು. ಅಲ್ಲದೆ ಹಳೆಯ ಮಿತ್ರರ ಬಳಿಗೆ ಹೋಗುವುದು ನಿಮ್ಮ ಅನುಭವ ಉತ್ತಮಪಡಿಸುತ್ತದೆ.

ಮಕರ :ಕೆಲಸದಲ್ಲಿ ಪುರಸ್ಕಾರಗಳು ನಿಮಗಾಗಿ ಕಾದಿವೆ ಮತ್ತು ಬಹಳಷ್ಟು ಸಲದಂತೆ ಅಲ್ಲದೆ ನಿಮ್ಮ ಕೆಲಸಗಾರರು ನಿಮ್ಮ ಸಂಪತ್ತಿನ ಕುರಿತು ಅಸಮಾಧಾನ ಅಥವಾ ಈರ್ಷ್ಯೆ ಪಡುವುದಿಲ್ಲ. ಅವರು ಪೂರ್ಣವಾಗಿ ಬೆಂಬಲಿಸುತ್ತಾರೆ. ವೃತ್ತಿ ಬದಲಾವಣೆಯನ್ನು ಬಯಸಿರುವವರು ಕೊಂಚ ಸಮಯ ಕಾಯಿರಿ, ಇದು ಸೂಕ್ತ ಸಮಯವಲ್ಲದೇ ಇರಬಹುದು.

ಕುಂಭ :ಸರ್ವಶಕ್ತ ನಿಮಗೆ ನೋವಿನೊಂದಿಗೆ ಹೊರೆ ಕೊಟ್ಟರೆ, ಆತ ನಿಮಗೆ ಆನಂದದ ಅನುಕೂಲವನ್ನೂ ನೀಡುತ್ತಾನೆ. ನೀವು ಇಂದು ಮಾಡಬೇಕಾಗಿರುವ ಕೆಲಸಗಳ ಪಟ್ಟಿಯಿಂದ ದಿನವನ್ನು ಪ್ರಾರಂಭಿಸುತ್ತೀರಿ, ಆದರೆ ಅದೃಷ್ಟವಶಾತ್ ನೀವು ಅವುಗಳನ್ನು ಒಂದರ ನಂತರ ಒಂದರಂತೆ ಪೂರೈಸುತ್ತೀರಿ.

ಮೀನ :ನೀವು ನಿಮ್ಮ ದೈನಂದಿನ ದಿನಚರಿಯನ್ನು ಸಂಘಟಿಸಲು ಕಠಿಣ ಪರಿಶ್ರಮ ಪಡುತ್ತೀರಿ, ನಿಮ್ಮ ಗ್ರಹಗಳ ಕೆಟ್ಟ ಜೋಡಣೆಯಿಂದ ಇಂದು ನೀವು ವಿಷಯಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಲು ಸಾಧ್ಯವಿಲ್ಲ. ನೀವು ತಾಳ್ಮೆಯಿಂದ ಇರಲು ಮತ್ತು ವಿಷಯಗಳು ಅವು ಹೇಗಿರುತ್ತವೋ ಹಾಗೆಯೇ ಇರುವಂತೆ ಮಾಡಲು ಅಲ್ಲದೆ ಬದಲಾವಣೆಯ ಭಾವನೆಗಳಿಗೆ ಕೊಂಚ ತಡೆ ಹೇರುವುದು ಸೂಕ್ತ.

ABOUT THE AUTHOR

...view details