ಕರ್ನಾಟಕ

karnataka

ಗುರುವಾರದ ರಾಶಿ ಭವಿಷ್ಯ: ನೀವು ಬೆಟ್ಟದಂತಹ ಸವಾಲುಗಳನ್ನು ಬೆಣ್ಣೆಯಂತೆ ಕರಗಿಸುವಿರಿ! - Daily Horoscope

By ETV Bharat Karnataka Team

Published : Jun 27, 2024, 5:00 AM IST

ಗುರುವಾರದ ದಿನ ಭವಿಷ್ಯ ಹೀಗಿದೆ.

daily-horoscope-of-thursday
ಗುರುವಾರದ ರಾಶಿ ಭವಿಷ್ಯ (ETV Bharat)

ಇಂದಿನ ಪಂಚಾಂಗ

27-06-2024, ಗುರುವಾರ

ಸಂವತ್ಸರ : ಕ್ರೋಧಿ ನಾಮ ಸಂವತ್ಸರ

ಆಯನ : ದಕ್ಷಿಣಾಯಣ

ಮಾಸ : ಜ್ಯೇಷ್ಠ

ಪಕ್ಷ :ಕೃಷ್ಣ

ತಿಥಿ:ಷಷ್ಠಿ

ನಕ್ಷತ್ರ:ಶತಭಿಷ

ಸೂರ್ಯೋದಯ :ಮುಂಜಾನೆ 05:53 ಗಂಟೆಗೆ

ಅಮೃತಕಾಲ : ಬೆಳಗ್ಗೆ 09:07 ರಿಂದ 10:44 ಗಂಟೆವರೆಗೆ

ರಾಹುಕಾಲ :ಮಧ್ಯಾಹ್ನ1:58 ರಿಂದ 3:35 ಗಂಟೆವರೆಗೆ

ದುರ್ಮುಹೂರ್ತಂ :ಬೆಳಗ್ಗೆ9:53 ರಿಂದ 10:41 ಗಂಟೆವರೆಗೆ ಮತ್ತುಮಧ್ಯಾಹ್ನ 2:41 ರಿಂದ 3:29 ಗಂಟೆತನಕ

ವರ್ಜ್ಯಂ : ಸಂಜೆ 06:15 ರಿಂದ 07:50 ಗಂಟೆಯ ತನಕ

ಸೂರ್ಯಾಸ್ತ : ಸಂಜೆ 06 : 48 ಗಂಟೆಗೆ

ಮೇಷ :ಇಂದು ನೀವು ಪರಿಸರ ಸ್ನೇಹಿ ಕೆಲಸಗಳನ್ನು ಮಾಡುತ್ತೀರಿ. ನೀವು ಗಿಡ ನೆಡಬಹುದು. ನೆರೆಹೊರೆಯನ್ನು ಸ್ವಚ್ಛವಾಗಿರಿಸಲು ಬೀದಿಯಲ್ಲಿನ ಕಸ ತೆಗೆಯಬಹುದು. ಪರಿಸರಕ್ಕೆ ಒಳ್ಳೆಯ ಹೆಚ್ಚು ಚಟುವಟಿಕೆಗಳನ್ನು ಮಾಡಲು ಬಯಸಿದ್ದೀರಿ. ಆದ್ದರಿಂದ ಒಂದು ಸಲಕ್ಕೆ ಒಂದು ಕೆಲಸ ಮಾಡಿ.

ವೃಷಭ : ನಿಮ್ಮ ಸಿಹಿಮಾತುಗಳು ಸುಲಭವಾಗಿ ವ್ಯಾಪಾರ ವ್ಯವಹಾರಗಳನ್ನು ಮುಗಿಸುತ್ತವೆ. ದಿನ ಮುಂದುವರಿದಂತೆ ಕಾರ್ಯ ಮತ್ತು ಚಟುವಟಿಕೆ ನಿಧಾನಗೊಳ್ಳುತ್ತವೆ. ಭಾವುಕ ಅಥವಾ ಭಾವನಾತ್ಮಕತೆ ಹೊಂದದೇ ಇರಲು ಪ್ರಯತ್ನಿಸಿ. ಏಕೆಂದರೆ ಅದು ಸಂಘರ್ಷಗಳಿಗೆ ಎಡೆ ಮಾಡಿಕೊಟ್ಟು ಮುಂದಿನ ದಿನಗಳಲ್ಲಿ ಸುಲಭವಾಗಿ ಮರೆಯದಂತೆ ಮಾಡುತ್ತದೆ.

ಮಿಥುನ : ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಪ್ರವಾಸಕ್ಕೆ ಹೊರಡಬಹುದು ಮತ್ತು ಅದಕ್ಕೆ ಪ್ರೋತ್ಸಾಹ ಪಡೆಯುತ್ತೀರಿ ಮತ್ತು ನೀವು ನಿಮ್ಮ ಕಾರ್ಯಕ್ರಮ ಯೋಜಿಸುತ್ತೀರಿ. ಇದು ಪ್ರವಾಸಕ್ಕೆ ಒಳ್ಳೆಯ ಸಮಯ ಮತ್ತು ನೀವು ನಿಮ್ಮ ಬಜೆಟ್​ನಲ್ಲಿ ಅತ್ಯಂತ ಸಂತೋಷವಾಗಿ ಪ್ರವಾಸ ಪೂರೈಸುತ್ತೀರಿ.

ಕರ್ಕಾಟಕ : ನೀವು ಎಲ್ಲದಕ್ಕಿಂತ ನಿಮ್ಮ ಉದ್ಯೋಗಕ್ಕೆ ಆದ್ಯತೆ ನೀಡಬೇಕು. ನೀವು ನಿಮಗೆ ನೀಡಲಾದ ಕೆಲಸವನ್ನು ವೇಗವಾಗಿ ಅತ್ಯಂತ ಏಕಾಗ್ರತೆ ಮತ್ತು ಬದ್ಧತೆಯಿಂದ ಮುಗಿಸುತ್ತೀರಿ. ಕೆಲಸದಲ್ಲಿ ನಿಮ್ಮ ಶಕ್ತಿ ಅತ್ಯಂತ ಹೆಚ್ಚಾಗಿರುತ್ತದೆ. ನೀವು ನಿಮ್ಮ ಮಿತ್ರರಿಗೆ ಮಹತ್ತರ ಪ್ರಾಮುಖ್ಯತೆ ನೀಡುತ್ತೀರಿ.

ಸಿಂಹ : ನೀವು ಪ್ರತಿ ಕಷ್ಟ ಹಾಗೂ ಅಡೆತಡೆಯನ್ನೂ ಸಮರ್ಥವಾಗಿ ಎದುರಿಸುತ್ತೀರಿ. ನಿಮ್ಮ ನಿರ್ದಿಷ್ಟ ಗುರಿ ಏನೇಯಾದರೂ ಯಶಸ್ವಿಯಾಗುವುದು. ವ್ಯಾಪಾರ ಅಥವಾ ಉದ್ಯಮದಲ್ಲಿ ಯಶಸ್ಸಿನ ಸಾಧ್ಯತೆ ಇದೆ. ವೈಯಕ್ತಿಕ ಜೀವನ ಸಮಸ್ಯೆಗಳಿಲ್ಲದೆ ಮುಂದುವರೆಯುತ್ತದೆ.

ಕನ್ಯಾ : ನಿಮ್ಮ ಹೊಂದಿಕೆ ಮತ್ತು ಕಲಾತ್ಮಕ ಕೌಶಲ್ಯಗಳು ಅತ್ಯುತ್ತಮ ಆಯುಧಗಳು. ನೀವು ಜೀವನದ ಸಕರಾತ್ಮಕತೆಯಿಂದ ಅತಿಯಾಗಿ ತುಂಬಿದ್ದೀರಿ ಮತ್ತು ಉತ್ಸಾಹ ಹರಡುತ್ತೀರಿ. ಆದರೆ ನಿಮ್ಮ ಕಲ್ಪನಾಶಕ್ತಿ ಯಾವುದೇ ಒತ್ತಡ ಅಥವಾ ಆಯಾಸ ಇಲ್ಲದಾಗ ಮಾತ್ರ ಅರಳುತ್ತದೆ.

ತುಲಾ : ನಿಮ್ಮ ಮಿತ್ರರಲ್ಲೊಬ್ಬರು ಆತ/ಆಕೆಯ ಜಾಲ ಸದೃಢವಾಗಿದ್ದು, ನಿಮಗೆ ನೆರವಾಗುತ್ತಾರೆ. ಯಾವುದೇ ಕಷ್ಟಗಳಿಲ್ಲದೆ ನೀವು ಮತ್ತೊಂದು ಜಂಟಿ ಯೋಜನೆ ಪ್ರಾರಂಭಿಸುತ್ತೀರಿ. ನಿಮ್ಮ ಉತ್ಪಾದಕತೆ ಮತ್ತು ಶ್ರದ್ಧೆ ಮೌಲ್ಯ ಪಡೆಯುತ್ತವೆ.

ವೃಶ್ಚಿಕ : ನೀವು ಇಂದು ಬಾಸ್ ದುರಾಗ್ರಹಕ್ಕೆ ಪಾತ್ರರಾಗಬೇಕು. ನಿಮ್ಮ ಸಹೋದ್ಯೋಗಿಗಳು ಅರೆಮನಸ್ಸಿನಿಂದ ಬೆಂಬಲಿಸುತ್ತಾರೆ. ಉದ್ಯೋಗದ ಅವಕಾಶ ಎದುರು ನೋಡುತ್ತಿರುವ ಹೊಸಬರು ಸಂದರ್ಶನಗಳಲ್ಲಿ ಯಶಸ್ಸು ಕಾಣುತ್ತಾರೆ.

ಧನು : ಹಣ ಇಂದು ಸುಲಭವಾಗಿ ಕೈಜಾರಿ ಹೋಗುತ್ತದೆ. ಅನಗತ್ಯ ವೆಚ್ಚ ನಿವಾರಿಸಲು ಯತ್ನಿಸಿ. ಇಡೀ ದಿನ ಹಣ ನಿರ್ವಹಣೆಗೆ ಹೋಗುತ್ತದೆ. ಸಂಜೆ ಅದರೊಂದಿಗೆ ಸಾಕಷ್ಟು ಸಕರಾತ್ಮಕ ಶಕ್ತಿ ತರುತ್ತದೆ. ನೀವು ಕುಳಿತು ನಿರಾಳರಾಗಲು ಬಯಸುತ್ತೀರಿ.

ಮಕರ : ನಿಮ್ಮ ಕೆಲಸವಾಗಲು ಅತ್ತಿಂದ ಇತ್ತ ಓಡಾಡಿದ ನಂತರ ನೀವು ಕುಳಿತು ಭವಿಷ್ಯದ ಕಾರ್ಯಯೋಜನೆ ರೂಪಿಸಲು ದಿನವನ್ನು ಕಳೆಯುತ್ತೀರಿ. ದಿಢೀರ್ ಮತ್ತು ಅನಿರೀಕ್ಷಿತ ಲಾಭಗಳು ಬರಲಿವೆ. ಆದರೆ ಅದನ್ನು ಎಷ್ಟು ಚೆನ್ನಾಗಿ ಬಳಸಿಕೊಳ್ಳುತ್ತೀರಿ ಎಂದು ತಿಳಿದಿರಬೇಕು.

ಕುಂಭ : ಕೆಲ ದಿನಗಳು ನೀವು ಪ್ರತಿಯೊಂದನ್ನೂ ತಿಳಿಯಲು ಪ್ರಯತ್ನಿಸುತ್ತೀರಿ. ಇದೂ ಅಂತಹ ಒಂದು ದಿನ. ಪ್ರತಿದಿನವೂ ಹೊಸ ವಿಚಾರಗಳನ್ನು ತಿಳಿಯಿರಿ.

ಮೀನ : ನೀವು ಜೀವನದಲ್ಲಿ ನಿಮ್ಮ ಹಣಕಾಸುಗಳನ್ನು ಯೋಜಿಸುವುದು ಅಗತ್ಯ ಮತ್ತು ನೀವು ಇಂದು ನಿಮ್ಮ ಶಕ್ತಿಗಳನ್ನು ಅದಕ್ಕಾಗಿ ವ್ಯಯಿಸುತ್ತೀರಿ. ಹಣದ ವಿಷಯದಲ್ಲಿ ನೀವು ದಿಢೀರ್ ಎಂದು ಜಿಪುಣರಾಗಿದ್ದೀರಿ. ಕುಟುಂಬದಲ್ಲಿ ಅನಿರೀಕ್ಷಿತ ರೋಗ ರುಜಿನ ನಿಮಗೆ ಆತಂಕ ತರುತ್ತದೆ. ಆದಾಗ್ಯೂ, ನೀವು ಬಿಕ್ಕಟ್ಟಿನಲ್ಲಿದ್ದು, ಅದು ಸದ್ಯದಲ್ಲೇ ಸಿಡಿಯುತ್ತದೆ. ಒತ್ತಡಕ್ಕೆ ಅವಕಾಶ ನೀಡಬೇಡಿ.

ABOUT THE AUTHOR

...view details