ಕರ್ನಾಟಕ

karnataka

ETV Bharat / spiritual

ಭಾನುವಾರದ ದಿನ ಭವಿಷ್ಯ: ಈ ರಾಶಿಯವರಿಂದು ಹಣಕಾಸು ವಿಚಾರದಲ್ಲಿ ಎಚ್ಚರ ವಹಿಸಿ!

ಭಾನುವಾರದ ರಾಶಿ ಭವಿಷ್ಯ ಹೀಗಿದೆ.

By ETV Bharat Karnataka Team

Published : 5 hours ago

ಭಾನುವಾರದ ದಿನ ಭವಿಷ್ಯ
ಭಾನುವಾರದ ದಿನ ಭವಿಷ್ಯ (ETV Bharat)

ಇಂದಿನ ಪಂಚಾಂಗ

13-10-2024, ಭಾನುವಾರ

ಸಂವತ್ಸರ: ಕ್ರೋಧಿ ನಾಮ ಸಂವತ್ಸರ

ಆಯನ: ದಕ್ಷಿಣಾಯಣ

ಮಾಸ: ಆಶ್ವಯುಜ

ಪಕ್ಷ:ಶುಕ್ಲ

ತಿಥಿ:ದಶಮಿ

ನಕ್ಷತ್ರ: ಧನಿಷ್ಠಾ

ಸೂರ್ಯೋದಯ : ಬೆಳಗ್ಗೆ 06:21 ಗಂಟೆಗೆ

ಅಮೃತಕಾಲ : ಮಧ್ಯಾಹ್ನ 03:00 ರಿಂದ 04:26 ಗಂಟೆವರೆಗೆ

ರಾಹುಕಾಲ :ಸಂಜೆ 04:45 ರಿಂದ 05:33 ಗಂಟೆವರೆಗೆ

ದುರ್ಮುಹೂರ್ತಂ : ಸಂಜೆ 4:26 ರಿಂದ 5:52 ಗಂಟೆವರೆಗೆ

ಸೂರ್ಯಾಸ್ತ:ಸಂಜೆ 05:52 ಗಂಟೆಗೆ

ವರ್ಜ್ಯಂ :ಸಂಜೆ 06 :15 ರಿಂದ ರಾತ್ರಿ 07:50 ಗಂಟೆಯತನಕ

ಮೇಷ: ಭವಿಷ್ಯದ ಕುರಿತು ನಿರ್ಧಾರಗಳ್ನು ತೆಗೆದುಕೊಳ್ಳುವಾಹ ಸಾಮಾನ್ಯ ಜ್ಞಾನ ಇರುವುದು ಒಳ್ಳೆಯದು. ನಿಮ್ಮ ಲೆಕ್ಕಾಚಾರಗಳನ್ನು ಮಾಡಿ, ಮಾರ್ಗದರ್ಶನ ಪಡೆದುಕೊಳ್ಳಿ, ಜ್ಯೋತಿಷ್ಯದ ನಕ್ಷೆಗಳನ್ನು ತೆಗೆದುಕೊಳ್ಳಿ, ಆದರೆ ಅಂತಿಮವಾಗಿ ನಿಮ್ಮ ಸಾಮಾನ್ಯ ಜ್ಞಾನ ಮಾತ್ರ ಉಳಿಯುತ್ತದೆ.

ವೃಷಭ: ಈ ದಿನ ವಾದವಿವಾದಗಳು ಮತ್ತು ಆಕ್ರಮಣಕಾರಿ ವರ್ತನೆಯ ಛಾಯೆಗಳು ದಿನದ ಬಹುತೇಕ ಭಾಗ ಇರುತ್ತವೆ. ನೀವು ಮಧ್ಯಾಹ್ನ ಮಿತ್ರರೊಂದಿಗೆ ದೀರ್ಘ ಚರ್ಚೆಗಳಲ್ಲಿ ಕಳೆಯಬಹುದು. ಸಂಜೆಯ ವೇಳೆಗೆ ವಿಷಯಗಳು ಬದಲಾಗುತ್ತವೆ ನಿಮ್ಮ ಆತ್ಮಸಂಗಾತಿಯಿಂದ ವಿಶೇಷ ಆತಿಥ್ಯ ದೊರೆಯಬಹುದು.

ಮಿಥುನ: ಇಂದು ನೀವು ಇತರರ ಭಾವನೆಗಳಿಗೆ ಘಾಸಿಯುಂಟು ಮಾಡುವುದರ ವಿರುದ್ಧ ಎಚ್ಚರಿಕೆ ವಹಿಸಬೇಕು. ನೀವು ಜನರು ವಿಶ್ವಾಸವಿರಿಸಿರುವುದರ ಕುರಿತು ಎಚ್ಚರಿಕೆಯಿಂದ ಕೇಳಬೇಕು ಮತ್ತು ವಿಷಯದ ಮೇಲೆ ನಿಮಗಿರುವ ಅಭಿಪ್ರಾಯ ಹೇಳಿ ಅವರ ಸಮಸ್ಯೆಗಳಲ್ಲಿ ನೆರವಾಗಬೇಕು. ನೀವು ಸಂಜೆ ಧಾರ್ಮಿಕ ಮತ್ತು ಬೌದ್ಧಿಕ ಅನ್ವೇಷಣೆಗಳಲ್ಲಿ ತೊಡಗಿಕೊಳ್ಳುತ್ತೀರಿ.

ಕರ್ಕಾಟಕ: ಇಂದು, ನಿಮಗೆ ಅತ್ಯಂತ ಸವಾಲಿನ ಮತ್ತು ಸಂಕೀರ್ಣ ದಿನವಾಗುವ ಸಾಧ್ಯತೆ ಇದೆ. ನೀವು ವಿಶ್ವಾಸದಲ್ಲಿ ಕೊರತೆ ಅನುಭವಿಸಲಿದ್ದೀರಿ; ಅದು ಅಥವಾ ನಿಮ್ಮನ್ನು ನಿಗ್ರಹಿಸಿದ ಭಾವನೆ ಹೊಂದುತ್ತೀರಿ. ಕೆಲವೊಮ್ಮೆ ಅಗತ್ಯವಿರುವಂತೆ ನೀವು ಸಮರ್ಥನೀಯವಾಗಿರುವುದಿಲ್ಲ. ವೈಯಕ್ತಿಕವಾಗಿ, ನೀವು ನಿಮ್ಮ ಬಾಂಧವ್ಯಗಳಲ್ಲಿ ಸಂತೋಷ ಕಂಡುಕೊಳ್ಳುವ ದಾರಿಗಳನ್ನು ಕಂಡುಕೊಳ್ಳಲು ಸಾಕಷ್ಟು ಸಮಯ ಕಳೆಯಬಹುದು.

ಸಿಂಹ: ನಿಮ್ಮ ಪಾಲುದಾರರು ಅಥವಾ ಸಂಗಾತಿಯಿಂದ ನಿಮ್ಮ ನಿರೀಕ್ಷೆಗಳು ಈಡೇರುವ ಸಾಧ್ಯತೆ ಇಲ್ಲ, ಆದ್ದರಿಂದ ಅವುಗಳಿಗೆ ಆದ್ಯತೆ ಕಡಿಮೆ ಮಾಡಿ. ವ್ಯಾಪಾರಿಗಳು ಮತ್ತು ಕಮಿಷನ್ ಏಜೆಂಟರಿಗೆ ಇದು ಕಠಿಣ ದಿನ, ಮತ್ತು ಆದ್ದರಿಂದ ಅವರು ಹಣಕಾಸಿನ ತಲೆಕೆಳಗಾಗುವುದರ ಕುರಿತು ಜಾಗರೂಕರಾಗಿರಬೇಕು. ಪ್ರಮುಖ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರವೇ ಸಹಿ ಹಾಕಬೇಕು.

ಕನ್ಯಾ: ನೀವು ನಿಮ್ಮ ಮಾನದಂಡ ಎತ್ತರಿಸಿಕೊಳ್ಳುತ್ತೀರಿ. ನೀವು ನಿಮಗೆ ಉನ್ನತ ಗುರಿಗಳನ್ನು ನಿಗದಿಪಡಿಸಿಕೊಳ್ಳುತ್ತೀರಿ ಮತ್ತು ಪ್ರಸ್ತುತದ ಅಡೆತಡೆಗಳನ್ನು ನಿವಾರಿಸಲು ಬಯಸುತ್ತೀರಿ. ನೀವು ಮಧ್ಯಾಹ್ನ ನಿಮ್ಮ ಹಣಕಾಸಿನ ಕುರಿತು ಬಹಳ ಆತಂಕ ಪಡುತ್ತೀರಿ. ಸಣ್ಣ ವಿಷಯಗಳು ನಿಮ್ಮ ಉತ್ಸಾಹ ಕುಂದಿಸುತ್ತವೆ. ಆದರೆ, ಸಂಜೆಯಲ್ಲಿ ಆಧ್ಯಾತ್ಮಿಕ ಅನ್ವೇಷಣೆಗಳ ಮೂಲಕ ಇನ್ನೊಂದು ಮೆಟ್ಟಿಲು ಹತ್ತುವುದು ಸೂಕ್ತ.

ತುಲಾ: ಸರ್ಕಾರಕ್ಕೆ ಸಂಬಂಧಿಸಿದ ಕೆಲಸ ನಿಮಗೆ ಇಂದು ಅನುಕೂಲಕರ. ನಿಮ್ಮ ಒಡಹುಟ್ಟಿದವರೊಂದಿಗೆ ನಿಮ್ಮ ಬಾಂಧವ್ಯಗಳು ಸುಧಾರಿಸುತ್ತವೆ. ನೀವು ನಿಮ್ಮ ಆತ್ಮೀಯ ಮಿತ್ರರೊಂದಿಗೆ ಸಂತೋಷದ ಸಮಯ ಕಳೆಯುತ್ತೀರಿ.

ವೃಶ್ಚಿಕ: ನಿಮ್ಮ ದಿನ ನಿಮ್ಮ ಪ್ರೀತಿಪಾತ್ರರು ಮತ್ತು ನಿಮ್ಮ ಜವಾಬ್ದಾರಿಗಳ ನಡುವೆ ಸಮಾನವಾಗಿ ವಿಂಗಡಿಸಲ್ಪಟ್ಟಿದೆ. ನೀವು ಸಂವೇದನಾಶೀಲರಾಗಿದ್ದು ನೀವು ಅವರಿಗೆ ನೆರವಾಗಲು ಹೊರಡುತ್ತೀರಿ. ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಲು ಬಯಸುವವರಿಗೆ, ವಿವಾಹದ ಪ್ರಸ್ತಾವನೆ ಸಂಜೆಯ ವೇಳೆಗೆ ಬರುತ್ತದೆ.

ಧನು: ಈ ದಿನ ಯಾವುದೇ ಗಮನಾರ್ಹವಾದುದು ಇರುವುದಿಲ್ಲ, ಆದರೆ ಇದು ಖಂಡಿತ ಒಳ್ಳೆಯ ನಾಳೆಯ ಭರವಸೆ ನೀಡುತ್ತದೆ. ಪಾರ್ಟ್ ಟೈಮ್ ಕೋರ್ಸ್ ತೆಗೆದುಕೊಳ್ಳಿ ಮತ್ತು ನಿಮ್ಮ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ. ಇದು ನಿಮಗೆ ಕೊಂಚ ಸ್ಥಳ ನೀಡುತ್ತದೆ. ನಿಮ್ಮ ಬಯಕೆಗಳನ್ನು ಜೀವಂತವಾಗಿರಿಸಿಕೊಳ್ಳುವುದು ಸೂಕ್ತ.

ಮಕರ: ಪ್ರೀತಿ ಇಂದು ನಿಮ್ಮ ಮನಸ್ಸಿನಲ್ಲಿದೆ. ಸ್ಮರಣೆಗಳಲ್ಲಿ ಮುಳುಗಿ ನೀವು ನಿಮ್ಮ ಮಿತ್ರರು ಹಾಗೂ ಕುಟುಂಬ ಸದಸ್ಯರೊಂದಿಗೆ ಕಳೆದ ಸುವರ್ಣ ಕ್ಷಣಗಳನ್ನು ನೆನಪಿಸಿಕೊಳ್ಳುತ್ತೀರಿ. ನೀವು ನಿಮ್ಮ ಹಳೆಯ ಮಿತ್ರರಿಗೆ ಕರೆ ಮಾಡಿ ಆ ಸ್ಮರಣೆಗಳನ್ನು ಹಂಚಿಕೊಳ್ಳುತ್ತೀರಿ. ವೃತ್ತಿಯಲ್ಲಿ ನೀವು ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸುತ್ತೀರಿ. ಒಟ್ಟಾರೆ, ಇಂದು ನಿಮಗೆ ಒಳ್ಳೆಯ ದಿನವಾಗಿದೆ.

ಕುಂಭ: ನೀವು ಬಿಲ್ ಗಳನ್ನು ಪಾವತಿಸಲು ಬಯಸುವುದಿಲ್ಲ! ಸರಿ ನೀವು ಏನನ್ನು ಕೊಂಡಿದ್ದೀರಿ ಎಂದು ನೆನಪಿನಲ್ಲಿರಿಸಿಕೊಂಡಿಲ್ಲ ಮತ್ತು ಹುಚ್ಚು ಕ್ರೆಡಿಟ್ ಕಾರ್ಡ್ ಗಳನ್ನು ದೂಷಿಸುತ್ತೀರಿ. ಆದಾಗ್ಯೂ, ನೀವು ಕೊಂಚ ಹೆಚ್ಚು ಸುಸಂಘಟಿತರಾಗಲು ಮನ ಒಲಿಸುತ್ತದೆ. ಇತರರಿಂದ ಐಡಿಯಾ ತೆಗೆದುಕೊಳ್ಳುವುದರಲ್ಲಿ ಯಾವುದೇ ಹಾನಿಯಿಲ್ಲ.

ಮೀನ: ನಿಮಗೆ ಇಂದು ಅನಗತ್ಯ ಚಿಂತೆಯಿಲ್ಲ. ನೀವು ಬಹಳ ತಾಳ್ಮೆಯ ಮತ್ತು ಉದಾರತೆ ಹೊಂದಿದವರಾಗಿದ್ದೀರಿ ಮತ್ತು ಇದರಿಂದ ಜನರನ್ನು ಸುಲಭವಾಗಿ ಕ್ಷಮಿಸುತ್ತೀರಿ. ಇದು ಬಹಳ ಒಳ್ಳೆಯದು ಆದರೆ ಜನರು ನಿಮ್ಮನ್ನು ಅನುಕೂಲಕರವಾಗಿ ತೆಗೆದುಕೊಳ್ಳುವುದನ್ನು ತಪ್ಪಿಸಿ.

ABOUT THE AUTHOR

...view details