ಕರ್ನಾಟಕ

karnataka

ETV Bharat / international

ಹರ್ದೀಪ್ ಸಿಂಗ್ ನಿಜ್ಜರ್ ಕೊಲೆ ಪ್ರಕರಣ: ಕೆನಡಾದಲ್ಲಿ ಭಾರತೀಯ ಮೂಲದ ಮೂವರ ಬಂಧನ - Nijjar Murder Case - NIJJAR MURDER CASE

ಹರ್ದೀಪ್ ಸಿಂಗ್ ನಿಜ್ಜರ್ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿದ ಕೆನಡಾ ಪೊಲೀಸರು ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ.

HARDEEP SINGH NIJJAR  CANADIAN POLICE  ACCUSED PHOTOS RELEASED
ಕೆನಡಾದಲ್ಲಿ ಭಾರತೀಯ ಮೂಲದ ಮೂವರು ಬಂಧನ (ANI)

By ETV Bharat Karnataka Team

Published : May 4, 2024, 2:11 PM IST

ಒಟ್ಟಾವಾ (ಕೆನಡಾ):ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಬಂಧಿತರಾಗಿರುವ ಮೂವರ ಛಾಯಾಚಿತ್ರಗಳನ್ನು ಕೆನಡಾ ಪೊಲೀಸರು ಶನಿವಾರ ಬಿಡುಗಡೆ ಮಾಡಿದ್ದಾರೆ. ಕೆನಡಾ ಪೊಲೀಸರ ಪ್ರಕಾರ, ಬಂಧಿತ ಮೂವರು ಆರೋಪಿಗಳು ಭಾರತೀಯ ಪ್ರಜೆಗಳು. ಅವರನ್ನು ಕರಣ್‌ಪ್ರೀತ್ ಸಿಂಗ್, ಕಮಲ್‌ಪ್ರೀತ್ ಸಿಂಗ್ ಮತ್ತು ಕರಣ್ ಬ್ರಾರ್ ಎಂದು ಗುರುತಿಸಲಾಗಿದ್ದು, ಅವರ ಛಾಯಾಚಿತ್ರಗಳನ್ನೂ ಬಿಡುಗಡೆ ಮಾಡಲಾಗಿದೆ. ಮಾಹಿತಿಯ ಪ್ರಕಾರ, ಮೂವರನ್ನೂ ಆಲ್ಬರ್ಟಾದ ಎಡ್ಮಂಟನ್ ನಗರದಲ್ಲಿ ಬಂಧಿಸಲಾಗಿದೆ.

ಈ ನಿಟ್ಟಿನಲ್ಲಿ ಸರ್ರೆಯ ಆರ್‌ಸಿಎಂಪಿ ಇಂಟಿಗ್ರೇಟೆಡ್ ಹೋಮಿಸೈಡ್ ಇನ್ವೆಸ್ಟಿಗೇಷನ್ ಟೀಮ್ (ಐಎಚ್‌ಐಟಿ) ಶುಕ್ರವಾರ ಬ್ರಿಟೀಷ್ ಕೊಲಂಬಿಯಾ, ಆಲ್ಬರ್ಟಾ ಆರ್‌ಸಿಎಂಪಿ ಮತ್ತು ಎಡ್ಮಂಟನ್ ಪೊಲೀಸ್ ಸೇವೆಯ ಸದಸ್ಯರ ನೆರವಿನೊಂದಿಗೆ ಆರೋಪಿಗಳನ್ನು ಮೇ 3 ರ ಬೆಳಗ್ಗೆ ಬಂಧಿಸಲಾಗಿದೆ ಎಂದು ಹೇಳಿದೆ. ಕಳೆದ ವರ್ಷ ಜೂನ್‌ನಲ್ಲಿ ವ್ಯಾಂಕೋವರ್‌ನ ಸರ್ರೆಯಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಕೊಲೆ ಮಾಡಿದ ಆರೋಪ ಅವರ ಮೇಲಿದೆ.

ಮೂವರು ಆರೋಪಿಗಳ ಛಾಯಾಚಿತ್ರಗಳ ಜೊತೆಗೆ, ಕೊಲೆಗೂ ಮುನ್ನ ಶಂಕಿತರು ಸರ್ರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಳಸಿದ್ದರು ಎಂದು ನಂಬಲಾದ ಕಾರಿನ ಛಾಯಾಚಿತ್ರಗಳನ್ನು ಸಹ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಆರ್‌ಸಿಎಂಪಿ ಸಹಾಯಕ ಕಮಿಷನರ್ ಡೇವಿಡ್ ಟೆಬೌಲ್ ನಿಜ್ಜರ್ ಹತ್ಯೆಯ ತನಿಖೆಯ ಸಕ್ರಿಯತೆಯನ್ನು ಒತ್ತಿ ಹೇಳಿದರು.

ನಿಜ್ಜರ್ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮೂವರು ಶಂಕಿತರನ್ನು ಬಂಧಿಸಲಾಗಿದೆ. ನಾವು ಸಾಕ್ಷ್ಯದ ಸ್ವರೂಪದ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಅಥವಾ ನಿಜ್ಜರ್ ಹತ್ಯೆಯ ಉದ್ದೇಶದ ಬಗ್ಗೆ ನಾವು ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆದರೂ, ಪ್ರಕರಣವು ಸಕ್ರಿಯ ತನಿಖೆಯಲ್ಲಿದೆ ಎಂದು ನಾನು ಹೇಳುತ್ತೇವೆ. 'Homicide Investigation Team ಪ್ರಕರಣದ ತನಿಖೆ ನಡೆಸುತ್ತಿದೆ. ಇದು ಕೆನಡಾದಾದ್ಯಂತ ಅನೇಕ ಏಜೆನ್ಸಿಗಳು ಮತ್ತು ಬೆಂಬಲ ಸೇವೆಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದೆ. ಇವುಗಳಲ್ಲಿ ಸರ್ರೆ RCMP, ಆಲ್ಬರ್ಟಾ RCMP ಮತ್ತು ಇತರ ಏಜೆನ್ಸಿಗಳು ಸೇರಿವೆ ಎಂದು ಟೆಬೌಲ್ ಹೇಳಿದ್ದಾರೆ.

ಜೂನ್ 18, 2023 ರಂದು, ಹರ್ದೀಪ್ ಸಿಂಗ್ ನಿಜ್ಜರ್ ಅವರು ಸರ್ರೆಯ ಗುರುನಾನಕ್ ಸಿಖ್ ಗುರುದ್ವಾರದಲ್ಲಿ ನಮನ ಸಲ್ಲಿಸಿದ ನಂತರ ಮನೆಗೆ ಹಿಂದಿರುಗುತ್ತಿದ್ದಾಗ ಕೊಲೆಗೀಡಾಗಿದ್ದರು ಎಂಬುದು ಗಮನಾರ್ಹ. ಈ ಘಟನೆಯ ನಂತರ, ಆಗಸ್ಟ್ ತಿಂಗಳಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅಲ್ಲಿನ ಸಂಸತ್ತಿನಲ್ಲಿ ಮಾತನಾಡುತ್ತಾ, ನಿಜ್ಜರ್ ಹತ್ಯೆಯ ಹಿಂದೆ ಭಾರತೀಯ ಏಜೆನ್ಸಿಗಳ ಕೈವಾಡವಿದೆ ಎಂದು ಆರೋಪಿಸಿದ್ದರು.

ನಿಜ್ಜಾರ್ ಹತ್ಯೆಯು ಕೆನಡಾ ಮತ್ತು ಭಾರತದ ನಡುವೆ ರಾಜತಾಂತ್ರಿಕ ಉದ್ವಿಗ್ನತೆಯನ್ನು ಸೃಷ್ಟಿಸಿತ್ತು. ನಂತರ ಟ್ರೂಡೊ ಹತ್ಯೆಯಲ್ಲಿ ಭಾರತವು ಭಾಗಿಯಾಗಿದೆ ಎಂದು ಆರೋಪಿಸಿದ್ದರು. ಭಾರತವು ಅವರ ಹೇಳಿಕೆಗಳನ್ನು ಅಸಂಬದ್ಧ ಎಂದು ಹೇಳಿ ತಿರಸ್ಕರಿಸಿತ್ತು.

ಓದಿ:ಯೂಟ್ಯೂಬ್​ ನೋಡಿ ಬೈಕ್​ ಕಳ್ಳತನ: ಆರೋಪಿ ಬಂಧನ - Bike theft

ABOUT THE AUTHOR

...view details