ಕರ್ನಾಟಕ

karnataka

ETV Bharat / international

ಬಾಂಗ್ಲಾದೇಶದ ಜೆಶೋರೇಶ್ವರಿ ದೇಗುಲಕ್ಕೆ ಪ್ರಧಾನಿ ಮೋದಿ ಕಾಣಿಕೆಯಾಗಿ ನೀಡಿದ್ದ ಕಿರೀಟ ಕಳ್ಳತನ

ಜೆಶೋರೇಶ್ವರಿ ದೇಗುಲವೂ ದೇವಿಯ 51 ಶಕ್ತಿ ಪೀಠದಲ್ಲಿ ಒಂದಾಗಿದ್ದು, ಕಾಳಿ ಮಾತೆಗೆ ಸಮರ್ಪಿತವಾಗಿದೆ. ಇಂತಹ ದೇವಸ್ಥಾನಕ್ಕೆ ಪ್ರಧಾನಿ ನೀಡಿದ್ದ ಕಿರೀಟವನ್ನೇ ಕಳ್ಳರು ಎಗರಿಸಿದ್ದಾರೆ.

By ANI

Published : 5 hours ago

Updated : 5 hours ago

bangladesh-crown-of-goddess-kali-stolen-from-jeshoreshwari-temple-in-satkhira-gifted-by-pm-modi
ಜೆಶೋರೇಶ್ವರಿ ದೇವಸ್ಥಾನ (ಈಟಿವಿ ಭಾರತ್​​)

ಢಾಕಾ, ಬಾಂಗ್ಲಾದೇಶ: 2021ರಲ್ಲಿ ನೆರೆಯ ಬಾಂಗ್ಲಾದೇಶದಲ್ಲಿನ ಸತ್ಖೀರದ ಶ್ಯಾಮನಗರದಲ್ಲಿರುವ ಜೆಶೋರೇಶ್ವರಿ ದೇವಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದರು. ಈ ವೇಳೆ ದೇವಿಗೆ ಕಾಣಿಕೆಯಾಗಿ ನೀಡಿದ್ದ ಕಿರೀಟವೇ ಇದೀಗ ಕಳ್ಳತನವಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಎಂದಿನಂತೆ ಪೂರ್ಜಾ ಕಾರ್ಯ ನಡೆಸಿ, ಅರ್ಚಕರು ತೆರಳಿದ್ದಾರೆ. ಇದಾದ ಬಳಿಕ ದುಷ್ಕರ್ಮಿಗಳು ಮಧ್ಯಾಹ್ನ 2.00 ರಿಂದ 2.30ರ ನಡುವೆ ಈ ಕಿರೀಟ ಕಳ್ಳತನ ಮಾಡಿದ್ದಾರೆ. ದೇಗುಲದ ಸ್ವಚ್ಛತಾ ಸಿಬ್ಬಂದಿ ದೇವಿಯ ಕಿರೀಟ ಕಾಣೆಯಾಗಿರುವುದನ್ನು ಮೊದಲು ಪತ್ತೆ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಈ ಕುರಿತು ಮಾತನಾಡಿರುವ ಇನ್ಸ್​ಪೆಕ್ಟರ್​​ ತೈಜುಲ್​ ಇಸ್ಲಾಮ್​, ದೇಗುಲದ ಸಿಸಿಟಿವಿ ಫೂಟೇಜ್​ ತರಸಿಕೊಂಡು ಕಳ್ಳರ ಪತ್ತೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಕಳುವಾಗಿರುವ ಕೀರಿಟವನ್ನು ಬೆಳ್ಳಿ ಮತ್ತು ಬಂಗಾರದಿಂದ ಮಾಡಲಾಗಿದ್ದು, ಎರಡು ದೇಶಗಳ ನಡುವಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ಪ್ರತೀಕವಾಗಿ ಇದನ್ನು ಸಮರ್ಪಣೆ ಮಾಡಲಾಗಿತ್ತು.

ಜೆಶೋರೇಶ್ವರಿ ಎಂದರೆ ಯಾರು?:ಹಿಂದೂ ಪುರಾಣದ ಪ್ರಕಾರ, ಜೆಶೋರೇಶ್ವರಿ ದೇಗುಲವೂ ದೇವಿಯ 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಜೆಶೋರೇಶ್ವರಿ ಎಂದರೆ ಜೆಶೋರ್​ ದೇವತೆ ಎಂಬುದಾಗಿದೆ. 2021ರಲ್ಲಿ ಬಾಂಗ್ಲಾದೇಶ ಪ್ರವಾಸ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್​​ 27ರಂದು ಈ ದೇಗುಲಕ್ಕೆ ಭೇಟಿ ನೀಡಿದ್ದರು.

ಆ ದಿನ ದೇವಿಯ ತಲೆಗೆ ಪ್ರಧಾನಿ ನರೇಂದ್ರ ಮೋದಿ ಕಿರೀಟವನ್ನು ತೋಡಿಸಿದ್ದರು. ಕೋವಿಡ್​ 19 ಸಾಂಕ್ರಾಮಿಕದ ಬಳಿಕ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ, ಮೊದಲ ವಿದೇಶಿ ಭೇಟಿಯೂ ಇದಾಗಿತ್ತು. ಅಷ್ಟೇ ಅಲ್ಲ ಈ ದೇವಿಗೆ ಕಿರೀಟ ಅರ್ಪಣೆ ಮಾಡಿದ್ದ ವಿಡಿಯೋವನ್ನು ಪ್ರಧಾನಿ ಶೇರ್​ ಕೂಡಾ ಮಾಡಿಕೊಂಡಿದ್ದರು.

12 ನೇ ಶತಮಾನದಲ್ಲಿ ನಿರ್ಮಾಣವಾದ ದೇಗುಲ:ಈ ದೇಗುಲವನ್ನು 12 ನೇ ಶತಮಾನದ ಉತ್ತರಾರ್ಧದಲ್ಲಿ ಅನಾರಿ ಎಂಬ ಬ್ರಾಹ್ಮಣರೊಬ್ಬರು ನಿರ್ಮಾಣ ಮಾಡಿದ್ದರು. ಇವರೇ ಜಶೋರೇಶ್ವರಿ ಪೀಠಕ್ಕೆ 100 ಬಾಗಿಲುಗಳ ದೇವಾಲಯವನ್ನು ಸೃಷ್ಟಿಸಿದರು. ಬಳಿಕ ಅದನ್ನು 13 ನೇ ಶತಮಾನದಲ್ಲಿ ಲಕ್ಷ್ಮಣ್ ಸೇನ್ ನವೀಕರಿಸಿದ್ದರು. 16ನೇ ಶತಮಾನದಲ್ಲಿ ಈ ದೇವಾಲಯವನ್ನು ಪುನರ್​ ನಿರ್ಮಾಣ ಮಾಡಲಾಗಿತ್ತು.

ಹಿಂದೂ ಪುರಾಣಗಳ ಪ್ರಕಾರ, 51 ಪೀಠಗಳಲ್ಲಿ, ಈಶ್ವರಿಪುರದಲ್ಲಿರುವ ದೇವಾಲಯವು ಸತಿ ದೇವಿಯ ಅಂಗೈಗಳು ಬಿದ್ದ ಸ್ಥಳವಾಗಿದೆ. ಇಲ್ಲಿ ದೇವಿಯು ಜಶೋರೇಶ್ವರಿ ದೇವಿ ರೂಪದಲ್ಲಿ ನೆಲೆಸಿದ್ದು, ಶಿವನು ಚಂಡನಾಗಿ ಕಾಣಿಸಿಕೊಂಡಿದ್ದಾನೆ ಎಂದು ಐತಿಹ್ಯವಿದೆ.

ಇದನ್ನೂ ಓದಿ: ರತನ್​ ಟಾಟಾಗೆ ಮೋದಿ ಮಾಡಿದ್ದ WEL COME ಎಂಬ ಸಂದೇಶ, ಕರ್ನಾಟಕಕ್ಕೆ ತಪ್ಪಿಸಿತ್ತು ಅವಕಾಶ: ಏನಿದು ಕಥೆ?

Last Updated : 5 hours ago

ABOUT THE AUTHOR

...view details