ಕರ್ನಾಟಕ

karnataka

ETV Bharat / health

ಉತ್ತರಭಾರತದಲ್ಲಿ ದಟ್ಟ ಮಂಜಿನ ವಾತಾವರಣ; ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಳ - ಚಳಿ ತಾಪಮಾನದಿಂದ ವ್ಯಾಯಾಮ

ತೀವ್ರ ಚಳಿಯ ತಾಪಮಾನದಿಂದ ಆಹಾರ ಶೈಲಿ ಬದಲಾವಣೆಗಳು ಹಾಗೂ ರಕ್ತನಾಳ ಸಂಕುಚಿತವೂ ಹೃದಯಾಘಾತ ಮತ್ತು ಪಾರ್ಶ್ವವಾಯುನ ಅಪಾಯವನ್ನು ಹೆಚ್ಚಿಸುತ್ತದೆ.

Etv Bharat
Etv Bharat

By ANI

Published : Jan 27, 2024, 1:23 PM IST

ಹೈದರಾಬಾದ್​:ಉತ್ತರ ಭಾರತದಲ್ಲಿ ತೀವ್ರವಾಗಿರುವ ಚಳಿಗಾಲ ಮತ್ತು ದಟ್ಟ ಮಂಜಿನ ತಾಪಮಾನವು ಜನಸಾಮಾನ್ಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತಿದೆ. ಭಾರಿ ಚಳಿಯಿಂದಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯು ಪ್ರಕರಣಗಳು ಏರಿಕೆ ಕಾಣುತ್ತಿದ್ದು, ಕಳೆದ 15 ದಿನಗಳಿಂದ ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ಈ ಸಂಬಂಧಿ ಸಮಸ್ಯೆಯಿಂದ ದಾಖಲಾಗುತ್ತಿರುವ ಪ್ರಕರಣಗಳು ದುಪ್ಪಟ್ಟಾಗಿವೆ.

ತಜ್ಞರು ಕೂಡ ಅಧಿಕ ರಕ್ತದೊತ್ತಡ, ಆರೋಗ್ಯ ಪರಿಸ್ಥಿತಿ ಕುರಿತು ಜನರು ಹೆಚ್ಚಿನ ಜಾಗೃತಿ ವಹಿಸುವಂತೆ ಕರೆ ನೀಡಿದ್ದಾರೆ. ವಯಸ್ಕರಲ್ಲಿ ಅದರಲ್ಲೂ ಹೃದಯ ರಕ್ತನಾಳ ಸಮಸ್ಯೆ ಹೊಂದಿರುವವರಲ್ಲಿ ಚಳಿ ಹವಾಮಾನ ಹೆಚ್ಚಿನ ಪರಿಣಾಮ ಬೀರುವ ಹಿನ್ನೆಲೆ ಆರೋಗ್ಯದ ಮೇಲೆ ಹೆಚ್ಚಿನ ಗಮನ ಹರಿಸುವಂತೆ ಸಲಹೆ ನೀಡಲಾಗಿದೆ.

ಕಿಂಗ್​ ಜಾರ್ಜ್​ ಮೆಡಿಕಲ್​ ವಿಶ್ವವಿದ್ಯಾಲಯದಲ್ಲಿ ಕಳೆದ 15 ದಿನದಿಂದ ದಿನಕ್ಕೆ 12-14 ಪಾರ್ಶ್ವವಾಯು ಮತ್ತು 20-25 ಹೃದಯಾಘಾತ ಪ್ರಕರಣಗಳು ವರದಿಯಾಗುತ್ತಿವೆ. ಸಾಮಾನ್ಯ ದಿನಕ್ಕೆ ಹೋಲಿಕೆ ಮಾಡಿದಾಗ ಈ ದಾಖಲಾತಿಗಳು ಶೇ 100ರಷ್ಟು ಹೆಚ್ಚಾಗಿವೆ.

ಸಾಮಾನ್ಯ ದಿನದಲ್ಲಿ 6-7 ಪಾರ್ಶ್ವವಾಯು ಪ್ರಕರಣಗಳು ದಾಖಲಾದರೆ, ಚಳಿ ಸಮಯದಲ್ಲಿ 12-14 ಪ್ರಕರಣಗಳ ಏರಿಕೆ ಕಂಡಿದೆ ಎಂದು ಕೆಜಿಎಂಯುನ ನರರೋಗತಜ್ಞ ಪ್ರೊ. ರವಿ ಉನಿಯಳ್​ ತಿಳಿಸಿದ್ದಾರೆ.

ರಾಮ್​ ಮನೋಹರ್​ ಲೋಹಿಯಾ ಇನ್ಸುಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​ನಲ್ಲಿ ಕೂಡ ಕಳೆದೊಂದು ವಾರದಿಂದ ಹೃದಯಾಘಾತದಲ್ಲಿ ಶೇ. 8 ರಿಂದ 9 ಮತ್ತು ಪಾರ್ಶ್ವವಾಯು ಪ್ರಕರಣದಲ್ಲಿ ಶೇ. 10 ರಷ್ಟು ಏರಿಕೆ ಕಂಡಿದೆ.

ಚಳಿ ಹವಾಮಾನವೂ ರಕ್ತನಾಳವನ್ನು ಸಂಕುಚಿತಗೊಳಿಸುತ್ತದೆ. ಇದು ಹೃದಯಾಘಾತದಂತಹ ಪ್ರಕರಣದ ಅಪಾಯವನ್ನು ಹೆಚ್ಚಿಸುತ್ತದೆ. ಚಳಿಯು ರಕ್ತದ ಹೆಪ್ಪುಗಟ್ಟುವಿಕೆ ಕೊತೆಗೆ ಪ್ಲೇಟ್ಲೆಟ್ಸ್​​ ಮೇಲೆ ಪರಿಣಾಮ ಬೀರುತ್ತದೆ.

ರಕ್ತದ ಹೆಪ್ಪುಗಟ್ಟುವಿಕೆ ಅಂದರೆ ಕ್ಲಾಟ್​ನಿಂದಾಗಿ ಮೆದುಳಿಗೆ ರಕ್ತ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಕೆಲವೊಮ್ಮೆ ಅಧಿಕ ರಕ್ತದೊತ್ತಡದಿಂದ ನರಗಳು ಹ್ಯಾಮರೇಜ್​ ಆಗಬಹುದು. ಈ ಎರಡು ಪರಿಸ್ಥಿತಿಗಳು ಮಾರಣಾಂತಿಕವಾಗಿದೆ ಎಂದು ಅವರು ತಿಳಿಸಿದರು.

ಹೃದಯರಕ್ತನಾಳ ಸಮಸ್ಯೆ ಹೊಂದಿರುವವರಲ್ಲಿ ಇದು ಹೆಚ್ಚಿನ ಅಪಾಯವನ್ನು ಹೊಂದಿದೆ. ರಕ್ತನಾಳದ ಸಂಕೋಚನೆಯು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಈ ಹಿನ್ನೆಲೆ ಜೀವನಶೈಲಿಯ ಬದಲಾವಣೆ ಮತ್ತು ನಿಯಮಿತ ವ್ಯಾಯಾಮ ಹಾಗೂ ತೂಕ ನಿರ್ವಹಣೆ ಮಾಡುವುದು ಅವಶ್ಯ ಎಂದು ಶಿಫಾರಸು ಮಾಡಿದ್ದಾರೆ.

ತಕ್ಷಣದ ತಾಪಮಾನದ ಬದಲಾವಣೆಗಳನ್ನು ತಪ್ಪಿಸುವುದಕ್ಕೆ ಬೆಚ್ಚಗಿರುವ ಬಟ್ಟೆ ಧರಿಸುವುದು, ನಿಯಮಿತ ವೈದ್ಯಕೀಯ ತಪಾಸಣೆಗೆ ಒಳಗಾಗುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ತಾಪಮಾನಕ್ಕೆ ಹೊಂದಿಕೆಯಾಗುವಂತೆ ವೈದ್ಯಕೀಯ ಆರೈಕೆ ಮತ್ತು ಜೀವನಶೈಲಿ ಅಳವಡಿಕೆ ನಡೆಸುವುದು ನಿರ್ಣಾಯವಾಗುತ್ತದೆ. ಇದು ಹೃದಯರಕ್ತನಾಳದಂತಹ ಅಪಾಯವನ್ನು ತಡೆಗಟ್ಟುವಲ್ಲಿ ಸಹಾಯವಾಗುತ್ತದೆ ಎಂದಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಹವಾಮಾನ ಬದಲಾವಣೆಯು ಅತಿಸಾರ ಕಾಯಿಲೆ ಹರಡುವಿಕೆಯ ಅಪಾಯ ಹೆಚ್ಚಿಸಬಹುದು: ಅಧ್ಯಯನ

ABOUT THE AUTHOR

...view details