ಕರ್ನಾಟಕ

karnataka

By ETV Bharat Karnataka Team

Published : 5 hours ago

Updated : 5 hours ago

ETV Bharat / entertainment

'ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ': ಐಫಾ ಪ್ರಶಸ್ತಿ ಗೆದ್ದು, ಬಾಲಿವುಡ್ ಬಗೆಗಿನ​ ಟೀಕೆಗೆ ಸ್ಪಷನೆ ಕೊಟ್ಟ ರಿಷಬ್​ ಶೆಟ್ಟಿ - Rishab Shetty

ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ 2024ರಲ್ಲಿ, ಡಿವೈನ್​​ ಸ್ಟಾರ್​ ಖ್ಯಾತಿಯ ರಿಷಬ್​ ಶೆಟ್ಟಿ ''ಔಟ್​​ಸ್ಟ್ಯಾಂಡಿಗ್ ಎಕ್ಸಲೆನ್ಸ್ ಇನ್​​ ಕನ್ನಡ ಸಿನಿಮಾ'' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.​​ ಕಾರ್ಯಕ್ರಮದಲ್ಲಿ ತಮ್ಮ ಈ ಹಿಂದಿನ ಬಾಲಿವುಡ್ ಬಗೆಗಿನ​ ಹೇಳಿಕೆಗಳಿಗೆ ಸ್ಪಷ್ಟನೆ ನೀಡಿದರು.

Rishab Shetty
ನಟ ರಿಷಬ್​ ಶೆಟ್ಟಿ (Photo: ANI)

ಹೈದರಾಬಾದ್: ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಇತ್ತೀಚೆಗೆ ಬಾಲಿವುಡ್​ ಬಗ್ಗೆ ನೀಡಿದ್ದ ಹೇಳಿಕೆ ವ್ಯಾಪಕ ಚರ್ಚೆಗೆ ವೇದಿಕೆ ಮಾಡಿಕೊಟ್ಟಿತ್ತು. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ / ಜಾಗತಿಕ ಮಟ್ಟದಲ್ಲಿ ಭಾರತವನ್ನು ಬಾಲಿವುಡ್‌ ಹೇಗೆ ಚಿತ್ರಿಸುತ್ತಿದೆ ಎಂಬುದರ ಬಗ್ಗೆ ನೀಡಿದ್ದ ಹೇಳಿಕೆಗಳು ವಿವಾದದ ಕೇಂದ್ರ ಬಿಂದುವಾಗಿದ್ದವು. ಸಂದರ್ಶನವೊಂದರಲ್ಲಿ ಅವರು ನೀಡಿದ್ದ ಕಾಮೆಂಟ್‌ಗಳು ಬಹುತೇಕರ ಹುಬ್ಬೇರಿಸಿತ್ತು. ಅದರಲ್ಲೂ ಬಾಲಿವುಡ್​ ಬೆಂಬಲಿಗರಿಂದ ಟೀಕೆಗಳನ್ನು ಸ್ವೀಕರಿಸಿತ್ತು.

ಈ ಹಿಂದೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ರಿಷಬ್ ಶೆಟ್ಟಿ, "ಭಾರತೀಯ ಚಲನಚಿತ್ರಗಳು, ವಿಶೇಷವಾಗಿ ಬಾಲಿವುಡ್, ಭಾರತವನ್ನು ಕೆಟ್ಟದಾಗಿ ತೋರಿಸಿವೆ. ಈ ಕಲಾತ್ಮಕ ಚಲನಚಿತ್ರಗಳನ್ನು ಜಾಗತಿಕ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುತ್ತದೆ ಮತ್ತು ರೆಡ್​ ಕಾರ್ಪೆಟ್​ ಮಹತ್ವ ನೀಡಲಾಗುತ್ತದೆ. ನನ್ನ ರಾಷ್ಟ್ರ, ನನ್ನ ರಾಜ್ಯ, ನನ್ನ ಭಾಷೆ - ನನ್ನ ಹೆಮ್ಮೆ. ಜಾಗತಿಕವಾಗಿ ಇವನ್ನು ಪಾಸಿಟಿವ್​ ಆಗಿ ಏಕೆ ತೋರಿಸಬಾರದು? ನಾನದನ್ನು ಮಾಡಲು ಪ್ರಯತ್ನಿಸುತ್ತೇನೆ" ಎಂದು ಹೇಳಿದ್ದರು. ಡಿವೈನ್​ ಸ್ಟಾರ್​ನ ಈ ಹೇಳಿಕೆ ವ್ಯಾಪಕವಾಗಿ ವೈರಲ್ ಆಗಿ, ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತ್ತು.

ನಟ ರಿಷಬ್​ ಶೆಟ್ಟಿ (video source: ANI)

ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆ, ರಿಷಬ್ ಶೆಟ್ಟಿ ಐಫಾ (IIFA Utsavam 2024) ಈವೆಂಟ್​ನಲ್ಲಿ ಈ ಬಗ್ಗೆ ಮಾತನಾಡಿದರು. ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಹೇಳಿದರು. "ಮೇ ಕ್ಯಾ ಬೋಲಾ ತಾ, ವೋ ಥೋಡಾ ಇದರ್ ಉದರ್ ಹೋ ಗಯಾ" ಎಂದು ಸ್ಪಷ್ಟಪಡಿಸಿದರು. ಸೂಕ್ತ ಸ್ಥಳದಲ್ಲಿ ಸ್ಪಷ್ಟೀಕರಣ ಅಥವಾ ವಿವರಣೆ ಒದಗಿಸುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ:172 ಕೋಟಿ ಸಂಪಾದಿಸಿದ 'ದೇವರ': ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ನಾಲ್ಕನೇ ಸಿನಿಮಾ - Devara Collection

ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ 2024ರಲ್ಲಿ, ಡಿವೈನ್​​ ಸ್ಟಾರ್​ ಖ್ಯಾತಿಯ ರಿಷಬ್​ ಶೆಟ್ಟಿ ''ಔಟ್​​ಸ್ಟ್ಯಾಂಡಿಗ್ ಎಕ್ಸಲೆನ್ಸ್ ಇನ್​​ ಕನ್ನಡ ಸಿನಿಮಾ'' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.​​ 2022ರ ಬ್ಲಾಕ್​ಬಸ್ಟರ್ ಸಿನಿಮಾ ಕಾಂತಾರದಲ್ಲಿನ ಅಮೋಘ ಅಭಿನಯಕ್ಕಾಗಿ ರಿಷಬ್​​ ಶೆಟ್ಟಿ ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ಹೀಗೆ ಪ್ರತಿಷ್ಠಿತ ಪ್ರಶಸ್ತಿಗಳ ಗೌರವಕ್ಕೆ ಭಾಜನರಾಗಿರುವ ರಿಷಬ್​ ಅವರಿಗೀಗ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ ಕೂಡಾ ಲಭಿಸಿದೆ.

ಇದನ್ನೂ ಓದಿ:ರಾಕಿಭಾಯ್ ''ಟಾಕ್ಸಿಕ್'' ಚಿತ್ರದಲ್ಲಿ ಹಾಲಿವುಡ್, ಟಾಲಿವುಡ್ ನಟರು? - Yash Toxic Updates

ರಿಷಬ್ ಶೆಟ್ಟಿ ನಟನಾ ಪ್ರಯಾಣ 2012ರಲ್ಲಿ 'ತುಗ್ಲಕ್​' ಮೂಲಕ ಪ್ರಾರಂಭವಾಯಿತು. 2016ರ ರಿಕಿ ಮೂಲಕ ಜನಪ್ರಿಯರಾದರು. ಆದ್ರೆ 2022ರ ಸೆಪ್ಟೆಂಬರ್​ ಕೊನೆಗೆ ಬಂದ ಕಾಂತಾರ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡಿತು. ಈ ಚಿತ್ರದ ಮೂಲಕ ರಿಷಬ್​ ಶೆಟ್ಟಿ ಜನಪ್ರಿಯತೆ ನೂರು ಪಟ್ಟು ಹೆಚ್ಚಾಯಿತು. ಇದೀಗ ಕಾಂತಾರ ಚಾಪ್ಟರ್​ 1ಗಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಚಿತ್ರದಲ್ಲೂ ರಿಷಬ್​ ಶೆಟ್ಟಿ ನಿರ್ದೇಶಕ ಮತ್ತು ನಾಯಕ ನಟನಾಗಿ ಮುಂದುವರಿಯಲಿದ್ದಾರೆ. ಕದಂಬರ ಕಾಲದ ಪಂಜುರ್ಲಿ ದೈವದ ದಂತಕಥೆಯನ್ನು ತೆರೆಮೇಲೆ ತರುವ ಪ್ರಯುತ್ನ ನಡೆಯುತ್ತಿದೆ.

Last Updated : 5 hours ago

ABOUT THE AUTHOR

...view details