ಕರ್ನಾಟಕ

karnataka

ETV Bharat / entertainment

'ರವಿಕೆ ಪ್ರಸಂಗ' ಬಿಡುಗಡೆಗೆ ದಿನಗಣನೆ: ಗೀತಾ ಭಾರತಿ ಭಟ್ ಹೇಳಿದ್ದಿಷ್ಟು - ಸಂತೋಷ್ ಕೊಡಂಕೇರಿ

'ರವಿಕೆ ಪ್ರಸಂಗ' ಸಿನಿಮಾ ಇದೇ ಫೆ.16ಕ್ಕೆ ಬಿಡುಗಡೆಯಾಗಲಿದೆ.

ravike prasanga
'ರವಿಕೆ ಪ್ರಸಂಗ'

By ETV Bharat Karnataka Team

Published : Feb 9, 2024, 8:08 PM IST

'ರವಿಕೆ ಪ್ರಸಂಗ'ದ ಬಗ್ಗೆ ಚಿತ್ರತಂಡದ ಮಾತು

ಮಂಗಳೂರು(ದಕ್ಷಿಣ ಕನ್ನಡ): ಕಿರುತೆರೆಯಲ್ಲಿ ಖ್ಯಾತಿ ಗಳಿಸಿದ್ದ 'ಬ್ರಹ್ಮಗಂಟು' ಖ್ಯಾತಿಯ ಗೀತಾ ಭಾರತಿ ಭಟ್ ನಾಯಕಿಯಾಗಿ ನಟಿಸಿರುವ 'ರವಿಕೆ ಪ್ರಸಂಗ' ಸಿನಿಮಾ ಇದೇ ಫೆ. 16ಕ್ಕೆ ಬಿಡುಗಡೆಯಾಗಲಿದೆ. ದೃಷ್ಟಿ ಮೀಡಿಯಾ ಆ್ಯಂಡ್ ಪ್ರೊಡಕ್ಷನ್ ಮೂಲಕ ಹೊರಬರುತ್ತಿರುವ ಈ ಸಿನಿಮಾದಲ್ಲಿ ನಾಯಕ ನಟ ಇಲ್ಲ. ಚಿತ್ರದಲ್ಲಿರುವ ಕಥೆ ಮತ್ತು ರವಿಕೆಯೇ ಹೀರೋ ಎಂದು ಚಿತ್ರತಂಡ ತಿಳಿಸಿದೆ. ರವಿಕೆ ಕಾನ್ಸೆಪ್ಟ್​​ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ.

ಈ ಚಿತ್ರದ ಕಥೆ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಹಳ್ಳಿಯಲ್ಲಿ ನಡೆಯುತ್ತದೆ. ಈ ಹಳ್ಳಿಯಲ್ಲಿ ಚಿತ್ರದ ನಾಯಕಿ 'ಸಾನ್ವಿ' ತಮ್ಮ ಚಿಕ್ಕ ಕುಟುಂಬದ ಜೊತೆ ಇರುತ್ತಾರೆ. ನಾಯಕ ನಟಿ 28ರ ಹರೆಯದ ಯುವತಿಯಾಗಿದ್ದು, ಈಗಾಗಲೇ ಅವಳಿಗೆ ಸಾಕಷ್ಟು ಮದುವೆ ಸಂಬಂಧಗಳು ಬಂದಿದ್ದರೂ ಯಾವುದೇ ಸಂಬಂಧಗಳು ಅವಳಿಗೆ ಸರಿಯಾಗಿರುವುದಿಲ್ಲ. ಸಾನ್ವಿ ಮದುವೆಯಾಗಲು ಒಬ್ಬ ಹ್ಯಾಂಡ್ಸಮ್ ಯುವಕನನ್ನು ಹುಡುಕುತ್ತಿರುತ್ತಾಳೆ. ಮನೆಯವರು ಕೂಡ ಬೇಗ ಮದುವೆ ಮಾಡಬೇಕು ಎಂಬ ಯೋಚನೆಯಲ್ಲಿರುತ್ತಾರೆ. ಎಷ್ಟೋ ಸಂಬಂಧಗಳಿಂದ ತಿರಸ್ಕರಿಸಲ್ಪಟ್ಟ ಸಾನ್ವಿಗೆ ಈ ಬಾರಿ ಒಂದು ಫಾರಿನ್ ಪ್ರಪೋಸಲ್ ಬರುತ್ತದೆ. ಆ ವೇಳೆ ರವಿಕೆ ಹೊಲಿಯಲು ಕೊಡುವಲ್ಲಿಂದ ಸಿನಿಮಾ ಆರಂಭಗೊಂಡು ಕೋರ್ಟ್ ಮೆಟ್ಟಿಲು ಹತ್ತುತ್ತದೆ. ಈ ರೀತಿಯ ಕಥೆಯೊಂದಿಗೆ ಸಿನಿಮಾ ನಿರ್ಮಾಣವಾಗಿದೆ.

'ರವಿಕೆ ಪ್ರಸಂಗ'

ರವಿಕೆ ಪ್ರಸಂಗ ಸಿನಿಮಾದ ನಿರ್ದೇಶಕ ಸಂತೋಷ್ ಕೊಡಂಕೇರಿ ಮಾತನಾಡಿ, ಸಿನಿಮಾ ಕಥೆಯ ಮೂಲಕ ಕೇವಲ ಮನರಂಜನೆ ಹಾಗೂ ಸಂದೇಶ ನೀಡಿದರೆ ಸಾಲದು, ನೋಡಿದವರಿಗೆ ಆ ಚಿತ್ರ ತಮ್ಮದೇ, ತಮ್ಮ ಬದುಕಿನ ಭಾಗ ಎನ್ನುವ ಭಾವನೆ ಮೂಡಬೇಕು. ಸಾಮಾನ್ಯವಾಗಿ ರವಿಕೆ ಅಂದ ತಕ್ಷಣ ಅದರ ಬಗ್ಗೆ ಗಂಭೀರ ಚಿಂತನೆಗಿಂತ ಹತ್ತು ಹಲವು ಹಾಸ್ಯಾಸ್ಪದವಾದ ಭಾವನೆ ಬಹುತೇಕರಲ್ಲಿ ಸಹಜವಾಗಿ ಮೂಡುತ್ತದೆ. ಆದರೆ ಆ ರವಿಕೆಯಿಂದಲೇ, ಮನಸ್ಸಿನ ಭಾವನೆಯನ್ನು ಅನಾವರಣಗೊಳಿಸಿ, ಸಮಾಜದಲ್ಲಿ ಅದೆಷ್ಟೋ ಇಂತಹ ಸಂದಿಗ್ಧ ಸ್ಥಿತಿಯಲ್ಲಿರುವ ಹಾಗೂ ಇಂತಹ ಸ್ಥಿತಿಯನ್ನು ಅನುಭವಿಸಿರುವ ಮಹಿಳೆಯರ ಭಾವನೆಗೆ ಈ ಸಿನಿಮಾ ಮೂಲಕ ಬಣ್ಣ ತುಂಬಬೇಕು ಎನ್ನುವ ಹಂಬಲದಿಂದ ರವಿಕೆ ಪ್ರಸಂಗ ಸಿನಿಮಾ ಮಾಡಲಾಗಿದೆ. ಜನರು ಖಂಡಿತಾ ಸಿನಿಮಾ ಮೆಚ್ಚುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಶೀಘ್ರದಲ್ಲೇ 'ಯು.ಐ' ತೆರೆಗೆ: ಉಪ್ಪಿ ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ

ನಾಯಕ ನಟಿ ಗೀತಾ ಭಾರತಿ ಭಟ್ ಮಾತನಾಡಿ, ಸೀರೆ ಎಷ್ಟೇ ಮೌಲ್ಯದ್ದಾಗಿದ್ದರೂ ಅದಕ್ಕೆ ತಕ್ಕ ಬ್ಲೌಸ್ ಆಗಿಲ್ಲವೆಂದರೆ ಅದು ವ್ಯರ್ಥ. ಈ ಚಿತ್ರದಲ್ಲಿ ರವಿಕೆಯ ಸುತ್ತ ಕಥೆ ಹೆಣೆಯಲಾಗಿದೆ. ಬ್ಲೌಸ್ ವಿಚಾರವಾಗಿ ನಾಯಕಿ ಪೊಲೀಸ್ ಠಾಣೆ, ನ್ಯಾಯಾಲಯದ ಮೆಟ್ಟಿಲೇರುತ್ತಾಳೆ. ಬ್ಲೌಸ್ ವಿಚಾರ ಇಷ್ಟೊಂದು ಕೋಲಾಹಲ ಮಾಡಬಹುದಾ? ಎಂಬ ಎಳೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಸಿನಿಮಾ ಬಹಳ ಮನರಂಜನೆಯಾಗಿ ಮೂಡಿಬಂದಿದೆ ಎಂದು ತಿಳಿಸಿದರು.

ಇದನ್ನೂ ಓದಿ:ತೀರದಾಚೆಗೆ ಹಾರಿ ಹೋಗುವಾಸೆ: ಪ್ರೇಕ್ಷಕರ ಮನಸೆಳೆದ 'ಸಾರಾಂಶ' ಸಾಂಗ್​​

ಈ ಸಿನಿಮಾ ದಕ್ಷಿಣ ಕನ್ನಡದಲ್ಲಿ ಚಿತ್ರೀಕರಣವಾಗಿದ್ದು, ಮಂಗಳೂರು ಕನ್ನಡದ ಕಂಪು ಇರಲಿದೆ. ಚಿತ್ರದಲ್ಲಿ ಗೀತಾ ಭಾರತಿ ಭಟ್ ಜೊತೆ ಸುಮನ್ ರಂಗನಾಥ್, ರಾಕೇಶ್ ಮಯ್ಯ, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಕೃಷ್ಣಮೂರ್ತಿ ಕವತಾರ್, ಪ್ರವೀಣ್ ಅಥರ್ವ, ರಘು ಪಾಂಡೇಶ್ವರ್, ಹನುಮಂತೇ ಗೌಡ, ಖುಷಿ ಆಚಾರ್, ಹನುಮಂತ್ ರಾವ್ ಕೆ ನಟಿಸಿದ್ದಾರೆ. ಕಥೆ ಮತ್ತು ಸಂಭಾಷಣೆಯನ್ನು ಪಾವನಾ ಸಂತೋಷ್ ನಿರ್ವಹಿಸಿದ್ದರೆ, ಚಿತ್ರಕಥೆ ಮತ್ತು ನಿರ್ದೇಶನದ ಜವಾಬ್ದಾರಿ ಸಂತೋಷ್ ಕೊಡಂಕೇರಿ ಅವರದ್ದು. ಛಾಯಾಗ್ರಹಣವನ್ನು ಮುರಳಿಧರ್ ಎನ್ ನಿಭಾಯಿಸಿದ್ದಾರೆ. ಸಂಕಲನ ರಘು ಶಿವರಾಮ್, ಸಂಗೀತ ವಿನಯ್ ಶರ್ಮಾ, ಹಿನ್ನೆಲೆ ಸಂಗೀತವನ್ನು ರಮೇಶ್ ಕೃಷ್ಣ ನಿರ್ವಹಿಸಿದ್ದಾರೆ.

ABOUT THE AUTHOR

...view details