ಕರ್ನಾಟಕ

karnataka

By ETV Bharat Entertainment Team

Published : 4 hours ago

ETV Bharat / entertainment

ಗೋವಿಂದ ಕಾಲಿನಿಂದ ಹೊರತೆಗೆದ 'ಬುಲೆಟ್​​' ವೈರಲ್: ರಕ್ತಸಿಕ್ತ ಗುಂಡಿನ ಫೋಟೋ ಕಂಡ ಅಭಿಮಾನಿಗಳು ಶಾಕ್​ - Govinda

ಬಾಲಿವುಡ್​ ಹಿರಿಯ ನಟ ಮತ್ತು ಶಿವಸೇನಾ ನಾಯಕ ಗೋವಿಂದ ಕಾಲಿನಿಂದ ಹೊರತೆಗೆಯಲಾದದ್ದು ಎಂದು ಹೇಳಲಾದ ಗುಂಡಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.

Actor-politician Govinda
ನಟ-ರಾಜಕಾರಣಿ ಗೋವಿಂದ (Photo: ANI)

ತಮ್ಮದೇ ರಿವಾಲ್ವಾರ್​ನಿಂದ ಮಿಸ್​​ ಫೈರ್ ಆಗಿ, ಗುಂಡು ಕಾಲಿಗೆ ತಗುಲಿ ಬಾಲಿವುಡ್​ ಹಿರಿಯ ನಟ ಮತ್ತು ಶಿವಸೇನಾ ನಾಯಕ ಗೋವಿಂದ ಅವರು ಮಂಗಳವಾರ ಬೆಳಗ್ಗೆ ಗಾಯಗೊಂಡಿದ್ದರು. ಗುಂಡೇಟಿನಿಂದ ಗಾಯಗೊಂಡ ಅವರೀಗ ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್​​ ಆಗಿದೆ. ಇದು ನಟನ ಕಾಲಿಗೆ ತಗುಲಿದ ಬುಲೆಟ್​​ ಎಂದು ಹೇಳಲಾಗುತ್ತಿದೆ.

ನಟನ ಕಾಲಿನಿಂದ ಹೊರತೆಗೆಯಲಾದದ್ದು ಎಂದು ಹೇಳಲಾದ ಗುಂಡಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಫೋಟೋವನ್ನು ಯಾರು ವೈರಲ್​​ ಮಾಡಿದ್ದಾರೆ ಎಂಬುದಿನ್ನೂ ಸ್ಪಷ್ಟವಾಗಿಲ್ಲ. ಆದರೆ, ಪೋಸ್ಟ್‌ಗಳು ಗೋವಿಂದ ಅವರ ಅಭಿಮಾನಿಗಳ ನಡುವೆ ಚರ್ಚೆ ಹುಟ್ಟುಹಾಕಿದೆ. ಫ್ಯಾನ್ಸ್ ಈ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ.

"ಗುಂಡು ಕಾಲಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಆದ್ರೆ ಯಾವುದೇ ದೊಡ್ಡ ತೊಡಕುಗಳಾಗದಂತೆ ನಾವದನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದೇವೆ" ಎಂದು ಡಾ.ಅಗರ್ವಾಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ಆಗಮಿಸಿದ ಗೋವಿಂದ ಅವರ ಕಾಲಿಗೆ 8-10 ಸ್ಟಿಚ್ಡ್​​​​ ಹಾಕಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇದೀಗ ಅವರ ಸ್ಥಿತಿ ಸ್ಥಿರವಾಗಿದೆ. ನಟ ಚೇತರಿಸಿಕೊಳ್ಳುತ್ತಿದ್ದು, ರಿಕವರಿ ರೂಮ್​​​​ಗೆ ಶಿಫ್ಟ್​​ ಮಾಡಲಾಗಿದೆ.

ಗೋವಿಂದ ಅವರ ಮ್ಯಾನೇಜರ್ ಶಶಿ ಸಿನ್ಹಾ ಅವರು ಈ ಘಟನೆ ಒಂದು ಆ್ಯಕ್ಸಿಡೆಂಟ್​​ ಎಂದು ಹೇಳಿದ್ದರೆ, ಅವರ ಸಹೋದರ ಕೀರ್ತಿ ಕುಮಾರ್ ಮಾತನಾಡಿ "ಇದೊಂದು ಸ್ಟ್ರೇಂಜ್​​ ಆ್ಯಕ್ಸಿಡೆಂಟ್​, ಆದ್ರೆ ಅವರು ಸಮಯಕ್ಕೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆ ಪಡೆದಿರುವುದು ನಮಗೆ ಸಮಾಧಾನ ತಂದಿದೆ" ಎಂದು ಹೇಳಿದ್ದಾರೆ.

ಗೋವಿಂದ ಅವರು ಆಡಿಯೋ ಮೆಸೇಜ್​​ ಮೂಲಕ ತಮ್ಮ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. "ನನ್ನ ಅಭಿಮಾನಿಗಳು ಮತ್ತು ದೇವರ ಆಶೀರ್ವಾದದಿಂದ ನಾನೀಗ ಬೆಟರ್​​​" ಎಂದು ಹೇಳಿದ್ದಾರೆ. ಕಳೆದ ದಿನ ಬೆಳಗ್ಗೆ ಈ ವಿಷಯ ತಿಳಿದು ಬಂದಿತ್ತು. ನಟನ ಅಪಾರ ಸಂಖ್ಯೆಯ ಅಭಿಮಾನಿಗಳು ತಮ್ಮ ಕಳವಳ ವ್ಯಕ್ತಪಡಿಸಿದ್ದರು. ಜೊತೆಗೆ, ಶೀಘ್ರ ಚೇತರಿಕೆಗೆ ಹಾರೈಸಿದ್ದರು.

ಇದನ್ನೂ ಓದಿ:ದಳಪತಿ ವಿಜಯ್​​ ಸಿನಿಮಾದಲ್ಲಿ ಕರಾವಳಿ ಬೆಡಗಿ ಪೂಜಾ ಹೆಗ್ಡೆ: ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಯಿಂದ ಹೆಸರು ಘೋಷಣೆ - Pooja Hegde Joins Thalapathy 69

ಮುಂಬೈ ಪೊಲೀಸರು ಗೋವಿಂದ ಅವರ ರಿವಾಲ್ವರ್ ಅನ್ನು ವಶಪಡಿಸಿಕೊಂಡಿದ್ದಾರೆ. ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ. ನಟನ ನಿವಾಸದಲ್ಲಿ ಪಂಚನಾಮ ನಡೆಸಲಾಗಿದ್ದು, ಅಪರಾಧ ವಿಭಾಗದ ಅಧಿಕಾರಿಗಳು ವಿಚಾರಣೆಯ ಭಾಗವಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ:ರಜನಿಕಾಂತ್​​ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ: ಸೂಪರ್​ ಸ್ಟಾರ್​​​ ಪತ್ನಿಗೆ ಕರೆ ಮಾಡಿದ ಪಿಎಂ - PM Enquiries Rajinikanth Health

ನಿನ್ನೆ ಕೋಲ್ಕತ್ತಾಗೆ ಪ್ರಯಾಣಿಸಬೇಕಿದ್ದ ಹಿನ್ನೆಲೆ, ತಮ್ಮ ರಿವಾಲ್​ವಾರನ್ನು ಸ್ವಚ್ಛಗೊಳಿಸುತ್ತಿದ್ದ ಸಂದರ್ಭ ಕೈಯಿಂದ ಆಕಸ್ಮಿಕವಾಗಿ ರಿವಾಲ್ವಾರ್ ಜಾರಿದ ಪರಿಣಾಮ ಗುಂಡು ಹಾರಿತ್ತು. ಬುಲೆಟ್​ ನಟನ ಕಾಲಿಗೆ ತಗುಲಿದ್ದರಿಂದ ಗಾಯಗೊಂಡಿದ್ದರು. ತಕ್ಷಣವೇ ನಟನನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ABOUT THE AUTHOR

...view details