ಕಾನ್ಪುರ್ (ಉತ್ತರ ಪ್ರದೇಶ) : ಮಹಾಕುಂಭ ಮೇಳ ಮತ್ತು ಭಾರತೀಯ ಸಂಸ್ಕೃತಿಯ ಪ್ರಾಮುಖ್ಯತೆ ಸಾರುವ ಉದ್ದೇಶದಿಂದ ತಮಿಳುನಾಡು ಮೂಲದ ಬುಲೆಟ್ ರಾಣಿ ಎಂದೇ ಖ್ಯಾತಿ ಪಡೆದಿರುವ ಮಹಿಳೆ ಪ್ರಯಾಗ್ರಾಜ್ವರೆಗೆ ಬುಲೆಟ್ನಲ್ಲಿ ಪ್ರಯಾಣ ಬೆಳೆಸಿದ್ದು, ಭಾನುವಾರ ಅವರು ತಮ್ಮ ರಾಯಲ್ ಎನ್ಫೀಲ್ಡ್ ಬೈಕ್ನಲ್ಲಿ ಕಾನ್ಪುರಕ್ಕೆ ಬಂದು ತಲುಪಿದರು. ಅಲ್ಲಿ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು.
ಈ ಕುರಿತು ಮಾತನಾಡಿರುವ ಬುಲೆಟ್ ರಾಣಿ ಅಲಿಯಾಸ್ ರಾಜಿಲಕ್ಷ್ಮೀ, ಜನವರಿ 9ರಂದು ಭದೋಹಿಯಿಂದ ಪ್ರಯಾಣವನ್ನು ಆರಂಭಿಸಿದೆ. 22 ದಿನದ ಈ ಪ್ರಯಾಣ ತ್ರಿವೇಣಿ ಸಂಗಮದಲ್ಲಿ ಮುಕ್ತಾಯವಾಗಲಿದೆ. ಈ ಪ್ರಯಾಣ 36 ಜಿಲ್ಲೆಗಳಲ್ಲಿ ಸಾಗಿದ್ದು, 2,000 ಕಿ.ಮೀ ದೂರ ಎಂದಿದ್ದಾರೆ.
ಈ ಐತಿಹಾಸಿಕ ಹಬ್ಬದಲ್ಲಿ ಭಾಗಿಯಾಗಲು ಅತಿ ಹೆಚ್ಚಿನ ಜನರು ಪ್ರಯಾಗ್ರಾಜ್ಗೆ ಆಗಮಿಸಬೇಕು. ಗಂಗಾ, ಯಮುನಾ ಮತ್ತು ಸರಸ್ವತಿಯ ಪವಿತ್ರ ತ್ರಿವೇಣಿ ಸಂಗಮದಲ್ಲಿ ಮುಳುಗೇಳಿ ಶುದ್ಧರಾಗಬೇಕು ಎಂದು ಇಡೀ ದೇಶದ ಜನರಿಗೆ ನಾನು ತಿಳಿಸುತ್ತೇನೆ ಎಂದರು.
ರಾಜಿಲಕ್ಷ್ಮೀ ತಮಿಳುನಾಡಿನ ಮಧುರೈ ಮೂಲದವರಾಗಿದ್ದು, ಭದೋಹಿಯ ಸುಂದರ್ಬನ್ನಲ್ಲಿ ವಾಸವಾಗಿದ್ದಾರೆ. ಇವರು ತನ್ನನ್ನು ಸನ್ಯಾಸಿ ಎಂದು ಕರೆದುಕೊಂಡಿದ್ದು, ಭದೋಹಿಯಲ್ಲಿನ ರಾಮ್ ಜಾನಕಿ ಮಂದಿರ ಆಶ್ರಮದಲ್ಲಿ 180 ಅಡಿ ತಾಮ್ರದ ಶಿವಲಿಂಗ ಸ್ಥಾಪಿಸಿದ್ದಾರೆ.
ಬುಲೆಟ್ ರಾಣಿ ಮಹಾ ಕುಂಭಕ್ಕೆ ಬೈಕ್ನಲ್ಲಿ ಸಾಗಿದ್ದು, ಈ ವೇಳೆ ಅವರು ಜ್ಯೋತಿರ್ಲಿಂಗ ಮತ್ತು ಸನಾತನ ಧರ್ಮದ ಪ್ರಾಮುಖ್ಯತೆ ಕುರಿತು ಪ್ರಚುರ ಪಡಿಸುತ್ತಾರೆ. ವಾರಣಾಸಿ, ಗಾಜಿಪುರ, ಅಯೋಧ್ಯೆ, ಲಕ್ನೋ, ಮೊರದಾಬಾದ್, ದೆಹಲಿ, ಮಥುರಾ, ಇಟಾವಾ ಮತ್ತು ಚಿತ್ರಕೂಟ್ ಮೂಲಕ ಇವರು ಪ್ರಯಾಗ್ರಾಜ್ ತಲುಪಿದ್ದಾರೆ.