ಕರ್ನಾಟಕ

karnataka

By PTI

Published : May 25, 2024, 12:57 PM IST

ETV Bharat / bharat

ಪೋರ್ಶೆ ಕಾರು ಅಪಘಾತಕ್ಕೆ ಸಿನಿಮಾ ಟಚ್​: ಚಾಲಕನನ್ನು ಬಂಧಿಸಿಟ್ಟಿದ್ದ ಆರೋಪಿಯ ತಾತ ಅರೆಸ್ಟ್​ - Pune car crash

ಪೋರ್ಶೆ ಕಾರು ಅಪಘಾತವನ್ನು ತಿರುಚಲು ಯತ್ನಿಸಿದ ಆರೋಪಿ ಬಾಲಕನ ಅಜ್ಜನನ್ನು ಪೊಲೀಸರು ಬಂಧಿಸಿದ್ದಾರೆ.

ಪೋರ್ಶೆ ಕಾರು ಅಪಘಾತಕ್ಕೆ ಸಪ್ತ ಸಾಗರದಾಚೆ ಸಿನಿಮಾ ಟಚ್​
ಪೋರ್ಶೆ ಕಾರು ಅಪಘಾತಕ್ಕೆ ಸಪ್ತ ಸಾಗರದಾಚೆ ಸಿನಿಮಾ ಟಚ್​ (ETV Bharat)

ಪುಣೆ (ಮಹಾರಾಷ್ಟ್ರ):ಪುಣೆಯಲ್ಲಿ ಇತ್ತೀಚೆಗೆ ನಡೆದ ಪೋರ್ಶೆ ಕಾರು ಅಪಘಾತ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಇಬ್ಬರ ಸಾವಿಗೆ ಕಾರಣವಾದ 17 ವರ್ಷದ ಅಪ್ರಾಪ್ತ ವಯಸ್ಕನ ತಾತನನ್ನು ಬಂಧಿಸಲಾಗಿದೆ. ಕುಟುಂಬದ ಕಾರು ಚಾಲಕನನ್ನು ಅಕ್ರಮವಾಗಿ ಕೂಡಿ ಹಾಕಿದ್ದ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ. ಜೊತೆಗೆ, ಈ ಪ್ರಕರಣ ಕನ್ನಡದ ಸಪ್ತಸಾಗರದಾಚೆ ಸಿನಿಮಾದಲ್ಲಿನ ಕತೆಗೂ ಸಾಮ್ಯತೆ ಇದೆ.

ಪ್ರಕರಣದ ಆರೋಪ ಹೊತ್ತುಕೊಳ್ಳಲು ಕುಟುಂಬದ ಕಾರು ಚಾಲಕನ ಮೇಲೆ ಒತ್ತಡ, ಬೆದರಿಕೆ ಹಾಕಿದ ಆರೋಪದ ಮೇಲೆ ಅಪ್ರಾಪ್ತನ ಅಜ್ಜ ವಿಶಾಲ್​ ಅಗರ್​​ವಾಲ್​ರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕಾರನ್ನು ತಮ್ಮ ಮೊಮ್ಮಗ ಓಡಿಸಿಲ್ಲ ಎಂದು ಪ್ರಕರಣವನ್ನು ತಿರುಚಲು ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಿನಿಮಾ ನೆನಪಿಸಿದ ಪ್ರಕರಣ:ಬಾಲಕ ಅಪಘಾತ ಮಾಡಿದ ಬಳಿಕ ಪ್ರಕರಣವನ್ನು ತಿರುಚಲು ಕುಟುಂಬಸ್ಥರು ಕಾರು ಚಾಲಕನ ಮೇಲೆ ಒತ್ತಡ ಹೇರಿದ್ದಾರೆ. ಈ ಪ್ರಕರಣವನ್ನು ತಾನೇ ಮಾಡಿದ್ದಾಗಿ ಒಪ್ಪಿಕೊಳ್ಳಲು ಆತನನ್ನು ಕೋರಲಾಗಿದೆ. ಪ್ರಕರಣದಲ್ಲಿ ಯಾವುದೇ ಶಿಕ್ಷೆಯಾಗದಂತೆ ನೋಡಿಕೊಂಡು, ಜೈಲಿಗೆ ಹೋದಲ್ಲಿ ಬಿಡಿಸಿಕೊಂಡು ಬರುವುದಾಗಿ ಭರವಸೆ ನೀಡಲಾಗಿತ್ತು. ಜೊತೆಗೆ ಹಣದ ಆಫರ್​ ನೀಡಿದ್ದರು. ಇದಕ್ಕೆ ತಾವು ಒಪ್ಪದ ಕಾರಣ ತನ್ನನ್ನು ಕೂಡಿ ಹಾಕಲಾಗಿತ್ತು ಎಂದು ಚಾಲಕ ಆರೋಪ ಮಾಡಿದ್ದಾನೆ.

ಕನ್ನಡದಲ್ಲಿ ಇತ್ತೀಚೆಗೆ ತೆರೆಕಂಡಿದ್ದ ಕನ್ನಡ ಸಿನಿಮಾವೊಂದರಲ್ಲೂ ಕೂಡ ಶ್ರೀಮಂತ ಕುಟುಂಬದ ವ್ಯಕ್ತಿಯೊಬ್ಬ ಅಪಘಾತ ಮಾಡಿದ ಬಳಿಕ ಅದನ್ನು, ನಾಯಕನ ಹಣೆಗೆ ಕಟ್ಟಿ ಆತನನ್ನು ಬಿಡಿಸಿಕೊಂಡು ಬರುವ ಭರವಸೆ ನೀಡಲಾಗಿರುತ್ತದೆ. ಅದೇ ಮಾದರಿಯ ಬೆಳವಣಿಗೆ ಪೋರ್ಶೆ ಪ್ರಕರಣದಲ್ಲೂ ನಡೆದಿದೆ.

ಪತ್ನಿಯಿಂದ ಮುಕ್ತನಾಗಿದ್ದ ಚಾಲಕ:ಪ್ರಕರಣದ ಆರೋಪವನ್ನು ಒಪ್ಪಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಕಾರು ಚಾಲಕನನ್ನು ಕುಟುಂಬಸ್ಥರು ಮನೆಯೊಂದರಲ್ಲಿ 2 ದಿನ ಕೂಡಿ ಹಾಕಿದ್ದರು. ವಿಷಯ ತಿಳಿದ ಬಳಿಕ ಆತನ ಪತ್ನಿ ಅಲ್ಲಿಗೆ ತೆರಳಿ ಚಾಲಕನನ್ನು ಬಿಡಿಸಿಕೊಂಡು ಬಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಈ ಬಗ್ಗೆ ಚಾಲಕ ದೂರು ನೀಡಿದ ಹಿನ್ನೆಲೆಯಲ್ಲಿ ಬಾಲಕನ ಅಜ್ಜ ವಿಶಾಲ್​ ಅಗರ್​ವಾಲ್​ರನ್ನು ಪೊಲೀಸರು ಬಂಧಿಸಿ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಏನಿದು ಘಟನೆ:ಮೇ 19 ರಂದು ಬೆಳಗಿನ ಜಾವ 3.15ರ ಸುಮಾರಿಗೆ ಪಾರ್ಟಿ ಮುಗಿಸಿದ ಸ್ನೇಹಿತರ ಗುಂಪು ಮೋಟಾರ್​ ಬೈಕ್​ ಮೂಲಕ ಮರಳುತ್ತಿದ್ದರು. ಈ ವೇಳೆ ಕಲ್ಯಾಣಿ ನಗರ ಜಂಕ್ಷನ್​ ಬಳಿ ಕಾರು ಚಲಾಯಿಸುತ್ತಿದ್ದ ಅಪ್ರಾಪ್ತನು ಮಧ್ಯಪ್ರದೇಶ ಮೂಲದ ಐಟಿ ಉದ್ಯೋಗಿಗಳಾದ ಅನಿಸ್ ಅವಧಿಯಾ ಮತ್ತು ಅಶ್ವಿನಿ ಕೋಸ್ಟಾ ಎಂಬುವರಿಗೆ ಡಿಕ್ಕಿ ಹೊಡೆದಿದ್ದ. ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದರು.

ಘಟನೆಯ ಬಳಿಕ ಆತನಿಗೆ ಅಪಘಾತದ ಕುರಿತು ಪ್ರಬಂಧ ಬರೆಯಿಸಿ, ಬಳಿಕ ಜಾಮೀನು ನೀಡಲಾಗಿತ್ತು. ಇದರ ವಿರುದ್ಧ ಆಕ್ರೋಶ ವ್ಯಕ್ತವಾದ ಕಾರಣ ಜಾಮೀನು ರದ್ದು ಮಾಡಲಾಗಿದ್ದು, ಸದ್ಯ ಆತನನ್ನು ಜೂನ್​ 5ರ ವರೆಗೆ ಮನೆಯಲ್ಲಿರಿಸಿ, ನಿಗಾ ವಹಿಸಲಾಗಿದೆ. ಜೊತೆಗೆ ಪ್ರಕರಣದಲ್ಲಿ ಬಾಲಕನ ತಂದೆ ಸೇರಿದಂತೆ ಆರು ಆರೋಪಿಗಳನ್ನು ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ:ಪೋರ್ಷೆ ಕಾರು ಅಪಘಾತ; ಅಪ್ರಾಪ್ತ ಮಗನ ಕೈಗೆ ವಾಹನ ಕೊಟ್ಟ ತಂದೆ ಪೊಲೀಸರ ವಶಕ್ಕೆ - Pune Porsche Accident

ABOUT THE AUTHOR

...view details