ಕರ್ನಾಟಕ

karnataka

By ETV Bharat Karnataka Team

Published : 5 hours ago

ETV Bharat / bharat

ವಿದ್ಯಾರ್ಥಿನಿಯರ ಖಾಸಗಿತನಕ್ಕೆ ಧಕ್ಕೆ: ಪಟಿಯಾಲ ಕಾನೂನು ವಿವಿ ಉಪಕುಲಪತಿ ವಿರುದ್ಧ ಪ್ರತಿಭಟನೆ, ಆರೋಪ ತಳ್ಳಿಹಾಕಿದ ವಿಸಿ - Students Protest

ಉಪಕುಲಪತಿಗಳು ವಿದ್ಯಾರ್ಥಿನಿಯರ ಖಾಸಗಿತನವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ರಾಜೀವ್ ಗಾಂಧಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರೆದಿದೆ. ಇಂದು ಐದನೇ ದಿನಕ್ಕೆ ಕಾಲಿಟ್ಟಿದ್ದು, ಉಪಕುಲಪತಿ ಜೈ ಶಂಕರ್ ಸಿಂಗ್ ಈ ಆರೋಪ ತಳ್ಳಿಹಾಕಿದ್ದಾರೆ.

STUDENTS PROTEST
ವಿವಿ ಉಪಕುವಿವಿ ಉಪಕುಲಪತಿ ಜೈ ಶಂಕರ್ ಸಿಂಗ್ ಸ್ಪಷ್ಟನೆ (ETV Bharat)

ಪಟಿಯಾಲ:ಇಲ್ಲಿನ ರಾಜೀವ್ ಗಾಂಧಿ ಕಾನೂನು ವಿಶ್ವವಿದ್ಯಾನಿಲಯದ ಉಪಕುಲಪತಿಗಳ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ತಾರಕಕ್ಕೇರಿದೆ. ಉಪಕುಲಪತಿಗಳು ಯಾವುದೇ ಸೂಚನೆ ನೀಡದೇ ವಿದ್ಯಾರ್ಥಿನಿಯರ ಕೊಠಡಿಗೆ ಹೋಗುವ ಮೂಲಕ ಅವರ ಖಾಸಗಿತನವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಈ ಪ್ರತಿಭಟನೆ ನಡೆಸಲಾಗುತ್ತಿದೆ.

ಪ್ರತಿಭಟನಾ ಬಿಸಿ ತಮಗೆ ತಲುಪುತ್ತಿದ್ದಂತೆ ವಿವಿ ಉಪಕುಲಪತಿ ಜೈ ಶಂಕರ್ ಸಿಂಗ್ ಇಂದು ಮಾಧ್ಯಮದ ಮುಂದೆ ಬಂದು ಆಗಮಿಸಿ ಸ್ಪಷ್ಟನೆ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಏನೇ ಸಮಸ್ಯೆಗಳಿದ್ದರೂ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಭರವಸೆ ಕೂಡ ನೀಡಿದ್ದಾರೆ.

ವಿವಿ ಉಪಕುಲಪತಿ ಜೈ ಶಂಕರ್ ಸಿಂಗ್ ಸ್ಪಷ್ಟನೆ (ETV Bharat)

ಆರೋಪದ ಬಗ್ಗೆ ವಿಸಿ ಹೇಳಿದ್ದೇನು?''ನಾವು ಯಾವುದೇ ತಪ್ಪು ದಾರಿ ತುಳಿದಿಲ್ಲ. ಈ ಬಾರಿ ಪ್ರವೇಶಕ್ಕೆ ವಿದ್ಯಾರ್ಥಿನಿಯ ಸಂಖ್ಯೆ ಹೆಚ್ಚಾಗಿದ್ದು, ಇದರಿಂದ ಒಂದೇ ಕೊಠಡಿಯಲ್ಲಿ ಒಬ್ಬ ವಿದ್ಯಾರ್ಥಿನಿ ವಾಸಿಸುವ ಹಾಸ್ಟೆಲ್‌ ಕೊಠಡಿಯಲ್ಲಿ ಇಬ್ಬರನ್ನು ಸೇರಿಸಲಾಗಿದೆ. ತಮ್ಮ ಪುಸ್ತಕ, ಬಟ್ಟೆ ಬರೆ ಹಾಗೂ ವಸ್ತುಗಳನ್ನಿಟ್ಟುಕೊಳ್ಳಲು ತೊಂದರೆಯಾಗುತ್ತಿದೆ ಎಂಬ ದೂರುಗಳು ಬಂದಿದ್ದವು. ಇದರಿಂದ ನಮಗೆ ಓದಲು ಸಮಸ್ಯೆಯಾಗುತ್ತಿದೆ ಎಂದು ಕೆಲವು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದರು. ಅಲ್ಲದೇ ಸಮಸ್ಯೆ ಬಗೆಹಿಸುವಂತೆ ತಮ್ಮಲ್ಲಿ ಮನವಿ ಕೂಡ ಮಾಡಿಕೊಂಡಿದ್ದರು. ಹೀಗಾಗಿ ನಾನು ಮಹಿಳಾ ಮುಖ್ಯ ವಾರ್ಡನ್ ಜೊತೆಗೆ ದೂರು ನೀಡಿದ ವಿದ್ಯಾರ್ಥಿನಿಯರ ಕೊಠಡಿಗೆ ಭೇಟಿ ನೀಡಿದ್ದೆ. ಆದರೆ, ನಾನು ಅವರ ಬಟ್ಟೆ ಬಗ್ಗೆ ಕಾಮೆಂಟ್ ಮಾಡಿಲ್ಲ. ಅಲ್ಲದೇ ಅವರ ಕೊಠಡಿ ಹೊರತು ಬೇರೆ ಯಾವ ಕೊಠಡಿಗೂ ಹೋಗಿಲ್ಲ. ಬಟ್ಟೆಯ ವಿಷಯಕ್ಕೆ ಬಂದರೆ 17 ರಿಂದ 20 ಅಥವಾ 22 ವರ್ಷದೊಳಗಿನ ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಯಾವುದೇ ರೀತಿಯ ಬಟ್ಟೆಗಳನ್ನು ಧರಿಸಬಹುದು. ಈ ವಿಷಯದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಈವರೆಗೂ ವಿದ್ಯಾರ್ಥಿಗಳ ವೈಯಕ್ತಿಕ ಜೀವನದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರ ಇಚ್ಛೆಯಂತೆ ಬದುಕಬಹುದು. ಈ ಚರ್ಚೆ ಇಷ್ಟಕ್ಕೆ ಬಗೆಹರಿಯಲಿ. ಏನೇ ಸಮಸ್ಯೆ ಇದ್ದರೂ ಪರಿಹರಿಸಲು ಪ್ರಯತ್ನಿಸುವೆ'' ಎಂದಿದ್ದಾರೆ.

ವಿವಿ ಉಪಕುಲಪತಿ ಜೈ ಶಂಕರ್ ಸಿಂಗ್ ಸ್ಪಷ್ಟನೆ (ETV Bharat)

ಕುಲಪತಿಗಳ ವಿರುದ್ಧ ಪ್ರಿಯಾಂಕಾ ವಾಗ್ದಾಳಿ:ಉಪಕುಲಪತಿಗಳ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ವಾಗ್ದಾಳಿ ನಡೆಸಿದ್ದು, ''ಅನುಮತಿ ಇಲ್ಲದೆ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಪ್ರವೇಶ ಮಾಡಿದ್ದಲ್ಲದೇ ಅವರ ಬಟ್ಟೆ ಬಗ್ಗೆ ಅನುಚಿತ ಕಾಮೆಂಟ್ ಮಾಡಿದ್ದಾರೆಂದು'' ಆರೋಪಿಸಿ ಎಕ್ಸ್‌ ಖಾತೆಯಲ್ಲಿ ಪೋಸ್ಟ್​ ಹಂಚಿಕೊಳ್ಳುವ ಮೂಲ ವಿಸಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.

ಮಹಿಳಾ ಅಧ್ಯಾಪಕರಾಗಲಿ ಅಥವಾ ಯಾವುದೇ ಪುರುಷರಾಗಲಿ ಅನುಮತಿ ಇಲ್ಲದೇ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯರ ಕೊಠಡಿಗಳಿಗೆ ಪ್ರವೇಶಿಸಬಾರದು. ಅನುಮತಿ ಇಲ್ಲದೇ ಪ್ರವೇಶ ಮಾಡುವ ಮೂಲಕ ವಿದ್ಯಾರ್ಥಿನಿಯರ ಖಾಸಗಿತನಕ್ಕೆ ಧಕ್ಕೆ ತರಲಾಗಿದೆ. ಈ ಕೃತ್ಯವು ವಿದ್ಯಾರ್ಥಿನಿಯರ ಸಮಗ್ರತೆ ಮತ್ತು ಖಾಸಗಿತನದ ಸಂಪೂರ್ಣ ನಿರ್ಲಕ್ಷ್ಯತನಕ್ಕೆ ಸಾಕ್ಷಿ ಎಂದು ಆರೋಪಿಸಿ ವಿವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿಸುತ್ತಿದ್ದು, ಪ್ರತಿಭಟನೆ ಇಂದು ಐದನೇ ದಿನಕ್ಕೆ ಕಾಲಿಟ್ಟಿದೆ.

ಇದನ್ನೂ ಓದಿ: 9ನೇ ತರಗತಿ ವಿದ್ಯಾರ್ಥಿನಿಯರ ಕೈಯಲ್ಲಿ ಪಿಸ್ತೂಲ್​: ಬೆಚ್ಚಿಬಿದ್ದ ಶಾಲಾ ವಿದ್ಯಾರ್ಥಿಗಳು; ತನಿಖೆಗೆ ಆದೇಶಿಸಿದ SP - STUDENTS REACH SCHOOL WITH PISTOL

ABOUT THE AUTHOR

...view details