ಕರ್ನಾಟಕ

karnataka

ETV Bharat / bharat

'RSS' ವಿಜಯದಶಮಿ: ಕೆಲ ಕೆಟ್ಟ ಪಿತೂರಿಗಳು ದೇಶದ ಸಂಕಲ್ಪವನ್ನು ಪರೀಕ್ಷಿಸುತ್ತಿವೆ : ಮೋಹನ್​​​ ಭಾಗವತ್

ನಾಗ್ಪುರದ ಆರ್​ಎಸ್​ಎಸ್​ ಸಂಘದ ಪ್ರಧಾನ ಕಚೇರಿಯಲ್ಲಿ ವಿಜಯದಶಮಿ ಹಬ್ಬ ಆಚರಿಸಲಾಯಿತು. ಪ್ರಮುಖವಾಗಿ ಇಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪನಾ ದಿನವಾಗಿದ್ದು, RSS ಮುಖ್ಯಸ್ಥ ಮೋಹನ್​​​ ಭಾಗವತ್ ಅವರು ರ‍್ಯಾಲಿಯನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ.

By ETV Bharat Karnataka Team

Published : 4 hours ago

Updated : 1 hours ago

RSS ಮುಖ್ಯಸ್ಥ ಮೋಹನ್​​​ ಭಾಗವತ್
RSS ಮುಖ್ಯಸ್ಥ ಮೋಹನ್​​​ ಭಾಗವತ್ (ETV Bharat)

ನಾಗ್ಪುರ, ಮಹಾರಾಷ್ಟ್ರ:"ಕಳೆದ ಕೆಲವು ವರ್ಷಗಳಲ್ಲಿ ವರ್ಧಿತ ವಿಶ್ವಾಸಾರ್ಹತೆಯೊಂದಿಗೆ ಭಾರತವು ವಿಶ್ವದಲ್ಲಿ ಬಲಿಷ್ಠವಾಗಿದೆ ಮತ್ತು ಹೆಚ್ಚು ಗೌರವಾನ್ವಿತವಾಗಿದೆ. ಆದರೆ, ಕೆಲ ಕೆಟ್ಟ ಪಿತೂರಿಗಳು ದೇಶದ ಸಂಕಲ್ಪವನ್ನು ಪರೀಕ್ಷಿಸುತ್ತಿವೆ" ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಆರ್​ಎಸ್​ಎಸ್​ ಕಚೇರಿಯಲ್ಲಿ ನಡೆದ ವಾರ್ಷಿಕ ವಿಜಯದಶಮಿ ರ‍್ಯಾಲಿಯನ್ನು ಉದ್ದೇಶಿಸಿ ಹೇಳಿದ್ದಾರೆ.

"ಬಾಂಗ್ಲಾದೇಶದಲ್ಲಿ ಭಾರತಕ್ಕೆ ಬೆದರಿಕೆ ಇದೆ, ತನ್ನ ರಕ್ಷಣೆಗಾಗಿ ಪಾಕಿಸ್ತಾನದೊಂದಿಗೆ ಕೈಜೋಡಿಸಬೇಕು ಎಂಬ ನಿರ್ದಿಷ್ಟ ನಿರೂಪಣೆಯನ್ನು ಹರಡಲಾಗುತ್ತಿದೆ. ಸನ್ನಿವೇಶವು ಅನುಕೂಲಕರವಾಗಿರಲಿ ಅಥವಾ ಇಲ್ಲದಿರಲಿ. ಶುಭ ಮತ್ತು ಸದಾಚಾರದ ವಿಜಯಕ್ಕೆ ವೈಯಕ್ತಿಕ ಮತ್ತು ರಾಷ್ಟ್ರೀಯ ಪಾತ್ರದ ದೃಢತೆಯು ಶಕ್ತಿಯ ಅಡಿಪಾಯವಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ವರ್ಧಿತ ವಿಶ್ವಾಸಾರ್ಹತೆಯೊಂದಿಗೆ ಭಾರತವು ಜಗತ್ತಿನಲ್ಲಿಯೇ ಪ್ರಬಲವಾಗಿದೆ ಹಾಗೂ ಹೆಚ್ಚು ಗೌರವಾನ್ವಿತವಾಗಿದೆ. ಒಂದು ದೇಶವು ಅದರ ಜನರ ರಾಷ್ಟ್ರೀಯ ಗುಣದಿಂದಾಗಿ ಶ್ರೇಷ್ಠವಾಗುತ್ತದೆ. ಆರ್‌ಎಸ್‌ಎಸ್ ಶತಮಾನೋತ್ಸವ ವರ್ಷಕ್ಕೆ ಕಾಲಿಡುತ್ತಿರುವ ಈ ವರ್ಷ ಮಹತ್ವದ್ದಾಗಿದೆ" ಎಂದರು.

ಭರವಸೆಯೊಂದಿಗೆ ಸವಾಲುಗಳೂ ಇವೆ:"ಭಾರತದಲ್ಲಿ ಭರವಸೆಗಳು ಮತ್ತು ಆಕಾಂಕ್ಷೆಗಳ ಜೊತೆಜೊತೆಗೆ ಸವಾಲುಗಳು ಮತ್ತು ಸಮಸ್ಯೆಗಳೂ ಇದೆ. ಅಹಲ್ಯಾ ಬಾಯಿ ಹೋಳ್ಕರ, ದಯಾನಂದ ಸರಸ್ವತಿ, ಬಿರ್ಸಾ ಮುಂಡಾ ಇವರಂತಹ ಸಾಮಾಜಿಕ ಕಲ್ಯಾಣ, ಧರ್ಮ, ಸಂಸ್ಕೃತಿ ಮತ್ತು ಸಮಾಜಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅನೇಕ ವ್ಯಕ್ತಿಗಳಿಂದ ನಾವು ಸ್ಫೂರ್ತಿ ಪಡೆಯಬೇಕು" ಎಂದು ತಿಳಿ ಹೇಳಿದರು.

ಮಧ್ಯಪ್ರಾಚ್ಯದ ಬೆಳವಣಿಗೆಗಳ ಬಗ್ಗೆ ಕಳವಳ:"ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಹಮಾಸ್ - ಇಸ್ರೇಲ್ ಯುದ್ಧವು ಸಂಘರ್ಷವು ಎಲ್ಲಿಯವರೆಗೆ ಹರಡುತ್ತದೆ ಎಂಬ ಆತಂಕಕ್ಕೆ ಕಾರಣವಾಗಿದೆ ಎಂದ ಭಾಗವತ್ ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆ ಶಾಂತಿಯುತವಾಗಿ ನಡೆದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಜೆಗಳು, ಸರ್ಕಾರ ಮತ್ತು ಆಡಳಿತದಿಂದಾಗಿ, ವಿಶ್ವ ವೇದಿಕೆಯಲ್ಲಿ ಭಾರತದ ಇಮೇಜ್, ಅಧಿಕಾರ, ಖ್ಯಾತಿ ಮತ್ತು ಸ್ಥಾನವು ಬೆಳೆಯುತ್ತಿದೆ. ಆದರೆ, ದೇಶವನ್ನು ಅಸ್ಥಿರಗೊಳಿಸಲು ಮತ್ತು ಕದಡಲು ಕೆಟ್ಟ ಪಿತೂರಿಗಳು ಕಾಣಿಸಿಕೊಂಡಿವೆ" ಎಂದು ಆರೋಪಿಸಿದರು.

ಹಿಂದೂಗಳು ಒಗ್ಗಟ್ಟಾಗಿರುವಂತೆ ಕರೆ:"ಬಾಂಗ್ಲಾದೇಶದಲ್ಲಿನ ದಬ್ಬಾಳಿಕೆ ಹಿಂದೂಗಳೂ ಸೇರಿದಂತೆ ಅಲ್ಪಸಂಖ್ಯಾತರ ತಲೆಯ ಮೇಲಿನ ಅಪಾಯದ ಕತ್ತಿ ತೂಗುತ್ತಿದೆ. ಹಿಂದೂಗಳು ಈಗ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ. ಅಸಂಘಟಿತ ಮತ್ತು ದುರ್ಬಲರಾಗಿರುವುದು ದುಷ್ಟರಿಂದ ದೌರ್ಜನ್ಯವನ್ನು ಆಹ್ವಾನಿಸಿದಂತೆ. ಹಿಂದೂಗಳು ಒಗ್ಗಟ್ಟಾಗಿರಬೇಕು" ಎಂದು ಕರೆ ನೀಡಿದರು.

"ಡೀಪ್ ಸ್ಟೇಟ್', ವೋಕಿಸಂ' ಮತ್ತು ಮಾರ್ಕ್ಸಿಸ್ಟ್ ಶಬ್ದಗಳು ಇತ್ತೀಚೆಗಿನ ದಿನಗಳಲ್ಲಿ ಚರ್ಚೆಯಲ್ಲಿವೆ. ಈ ಪದವನ್ನು ಬಳಸುವ ಅವರು ವಾಸ್ತವವಾಗಿ ಎಲ್ಲಾ ಸಾಂಸ್ಕೃತಿಕ ಸಂಪ್ರದಾಯಗಳ ಘೋಷಿತ ಶತ್ರುಗಳಾಗಿದ್ದಾರೆ. ಬಹು-ಪಕ್ಷದ ಪ್ರಜಾಪ್ರಭುತ್ವದಲ್ಲಿ, ಪರಸ್ಪರ ಸಾಮರಸ್ಯ, ಹೆಮ್ಮೆ ಮತ್ತು ರಾಷ್ಟ್ರದ ಸಮಗ್ರತೆಗಿಂತ ಕ್ಷುಲ್ಲಕ ಸ್ವಾರ್ಥಿ ಹಿತಾಸಕ್ತಿಗಳು ಹೆಚ್ಚು ಮುಖ್ಯವಾಗಿವೆ. ಪಕ್ಷಗಳ ನಡುವಿನ ಪೈಪೋಟಿಯಲ್ಲಿ ಈ ಪ್ರಮುಖ ಅಂಶಗಳನ್ನು ಗೌಣವಾಗಿ ಪರಿಗಣಿಸಲಾಗುತ್ತದೆ. ಸಮಾಜದಲ್ಲಿ ಒಡಕು ಮೂಡಿಸುವ ಪ್ರಯತ್ನಗಳು ರಾಷ್ಟ್ರೀಯ ಹಿತಾಸಕ್ತಿಗಿಂತ ದೊಡ್ಡದಾಗಿವೆ. ಒಂದು ಪಕ್ಷದ ಬೆಂಬಲಕ್ಕೆ ನಿಲ್ಲುವುದು ಮತ್ತು ಪರ್ಯಾಯ ರಾಜಕಾರಣದ ಹೆಸರಿನಲ್ಲಿ ತಮ್ಮ ವಿನಾಶಕಾರಿ ಅಜೆಂಡಾವನ್ನು ಮುಂದಿಡುವುದು ಅವರ ಕಾರ್ಯತಂತ್ರವಾಗಿದೆ" ಎಂದು ಟಾಂಗ್​ ನೀಡಿದರು.

ವೈದ್ಯೆಯ ಅತ್ಯಾಚಾರ ಪ್ರಕರಣ :ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ - ಕೊಲೆಯನ್ನು ನಾಚಿಕೆಗೇಡಿನ ಸಂಗತಿ ಎಂದ ಭಾಗವತ್, "ಅಪರಾಧಿಗಳನ್ನು ರಕ್ಷಿಸಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಿದರು. ದೇಶದಲ್ಲಿ ಅಪರಾಧ, ರಾಜಕೀಯ ಮತ್ತು ವಿಷ ಸಂಸ್ಕೃತಿಯ ನಂಟು ಸಮಾಜವನ್ನು ಹಾಳು ಮಾಡುತ್ತಿದೆ" ಎಂದು ವಾಸ್ತವತೆಯನ್ನು ಬಿಚ್ಚಿಟ್ಟರು.

ವಿಜಯದಶಮಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್​ಎಸ್​ಎಸ್​) ಮುಖ್ಯಸ್ಥ ಮೋಹನ್​​​ ಭಾಗವತ್​​​ ಅವರು "ಶಾಸ್ತ್ರ ಪೂಜೆ" ನೆರವೇರಿಸಿದರು. ಬಳಿಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ನಾಗ್ಪುರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೇಂದ್ರ ಕಚೇರಿ ತನಕ ಮೆರವಣಿಗೆ ನಡೆಸಿದರು.

ಇದನ್ನೂ ಓದಿ;ವಿಜಯದಶಮಿಯ ಶುಭಾಶಯಗಳು: ನಿಮ್ಮ ಪ್ರೀತಿಪಾತ್ರರಿಗೆ ಹೀಗೆ ಹಾರೈಸಿ, ಅಮ್ಮನ ಆಶೀರ್ವಾದ ಪಡೆಯಿರಿ

Last Updated : 1 hours ago

ABOUT THE AUTHOR

...view details