ಕರ್ನಾಟಕ

karnataka

ETV Bharat / bharat

ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲು ಪ್ರಸಾದ್​ ಯಾದವ್​ ಮತ್ತವರ ಮಕ್ಕಳಿಗೆ ಜಾಮೀನು - Land for jobs case

ತಿಯೊಬ್ಬರಿಗೂ ಒಂದು ಲಕ್ಷ ಮೊತ್ತದ ಬಾಂಡ್​ ಆಧಾರ ಮೇಲೆ ಕೋರ್ಟ್​​ ಷರತ್ತುಬದ್ಧ ಜಾಮೀನು ನೀಡಿದೆ.

By PTI

Published : 4 hours ago

land-for-jobs-case-lalu-prasad-sons-granted-bail-by-delhi-court
ಲಾಲು ಪ್ರಸಾದ್​ ಯಾದವ್​, ತೇಜಸ್ವಿ ಯಾದವ್​ (ಎಎನ್​ಐ)

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣ ಪ್ರಕರಣದಲ್ಲಿ ಬಂಧಿತವಾಗಿದ್ದ ಆರ್​ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವರಾದ ಲಾಲು ಪ್ರಸಾದ್​ ಯಾದವ್​​ ಮತ್ತು ಅವರ ಮಕ್ಕಳಾದ ತೇಜಸ್ವಿ ಯಾದವ್​​ ಮತ್ತು ತೇಜ್​ ಪ್ರತಾಪ್​ ಯಾದವ್​ಗೆ ನವದೆಹಲಿ ನ್ಯಾಯಾಲಯ ಜಾಮೀನು ನೀಡಿದೆ.

ವಿಶೇಷ ನ್ಯಾಯಮೂರ್ತಿ ವಿಶಾಲ್​ ಗೊಂಗ್ನೆ ಪೀಠ, ಪ್ರತಿಯೊಬ್ಬರಿಗೂ ಒಂದು ಲಕ್ಷ ಮೊತ್ತದ ಬಾಂಡ್​ ಆಧಾರ ಮೇಲೆ ಷರತ್ತುಬದ್ಧ ಜಾಮೀನು ನೀಡಿದೆ.

ಕೋರ್ಟ್​ ಈ ಹಿಂದೆ ನೀಡಿದ ಸಮನ್ಸ್​ ಜಾರಿ ಮಾಡಿದ ಬಳಿಕ ಆರೋಪಿಗಳು ಕೋರ್ಟ್​ ಮುಂದೆ ಆರೋಪಿಗಳು ಹಾಜರಾಗಿದ್ದರು. ಆರೋಪಿಗಳ ವಿರುದ್ಧದ ಪೂರಕ ಆರೋಪ ಪಟ್ಟಿಯನ್ನು ಪರಿಗಣಿಸಿದ ಬಳಿಕ ನ್ಯಾಯಾಧೀಶರು ಸಮನ್ಸ್ ಜಾರಿ ಮಾಡಿದ್ದರು. ಆಗಸ್ಟ್​ 6ರಂದು ಜಾರಿ ನಿರ್ದೇಶನಾಲಯ ಕೋರ್ಟ್​ ಮುಂದೆ ಅಂತಿಮ ವರದಿ ಸಲ್ಲಿಸಿತು.

ಸಿಬಿಐ ಎಫ್​ಐಆರ್​ ಆಧಾರದ ಮೇಲೆ ಇಡಿ ಪ್ರಕರಣ ದಾಖಲಿಸಿತು. 2004 ರಿಂದ 2009ರಲ್ಲಿ ಲಾಲು ಪ್ರಸಾದ್​ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಪಶ್ಚಿಮ ಕೇಂದ್ರ ರೈಲ್ವೆ ವಲಯದಲ್ಲಿ ಮಧ್ಯಪ್ರದೇಶ ಜಬಲ್ಪುರ್​ನಲ್ಲಿ ಗ್ರೂಪ್​ ಡಿ ನೇಮಕಾತಿಯಲ್ಲಿ ಈ ಅವ್ಯವಹಾರ ನಡೆದಿತ್ತು. ಉದ್ಯೋಗ ಪಡೆದದವರು ನೇಮಕಾತಿಗೆ ಬದಲಾಗಿ ಆರ್​ಜೆಡಿ ಮುಖ್ಯಸ್ಥರು ಅಥವಾ ಅವರ ಸಹಚರರಿಗೆ ಉಡುಗೊರೆಯಾಗಿ ಭೂಮಿಯನ್ನು ವರ್ಗಾವಣೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಇದನ್ನೂ ಓದಿ: ಪುಟ್ಟ ಮಗುವಿನ ಮೇಲೆ ದಾಳಿ ಮಾಡಿದ ನರಭಕ್ಷಕ ತೋಳ ಕೊಂದು ಹಾಕಿದ ಗ್ರಾಮಸ್ಥರು

ABOUT THE AUTHOR

...view details