ಕರ್ನಾಟಕ

karnataka

ETV Bharat / bharat

ಸೈಬರ್ ವಂಚನೆಯಿಂದ 2.8 ಕೋಟಿ ಲೂಟಿ: ಪೊಲೀಸರ ಸಹಾಯದಿಂದ 53 ಲಕ್ಷ ರೂ. ಮರಳಿ ಪಡೆದ ವ್ಯಕ್ತಿ

ಸೈಬರ್ ವಂಚನೆಯಿಂದಾಗಿ ಹೈದರಾಬಾದ್​ನ ವ್ಯಕ್ತಿಯೊಬ್ಬರು 2.8 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.

ತೆಲಂಗಾಣ ಸೈಬರ್ ಪೊಲೀಸರು ಹೊರಡಿಸಿರುವ ಜಾಗೃತಿ ಕರಪತ್ರ
ತೆಲಂಗಾಣ ಸೈಬರ್ ಪೊಲೀಸರು ಹೊರಡಿಸಿರುವ ಜಾಗೃತಿ ಕರಪತ್ರ (IANS)

By ETV Bharat Karnataka Team

Published : 5 hours ago

ಹೈದರಾಬಾದ್:ಸೈಬರ್ ವಂಚಕರಿಂದ 2.88 ಕೋಟಿ ರೂಪಾಯಿ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರು ಹೈದರಾಬಾದ್ ಪೊಲೀಸರ ಸಹಾಯದಿಂದ 53 ಲಕ್ಷ ರೂಪಾಯಿ ಮರಳಿ ಪಡೆದುಕೊಂಡಿದ್ದಾರೆ. ಸೈಬರ್ ವಂಚನೆಯಿಂದ ಹಣ ಕಳೆದುಕೊಂಡಿದ್ದ ವ್ಯಕ್ತಿಯು ನ್ಯಾಯಾಲಯದ ಆದೇಶದ ಮೇರೆಗೆ ಈ ಮೊತ್ತವನ್ನು ಪಡೆದುಕೊಂಡಿದ್ದಾರೆ.

ಪ್ರಕರಣದ ವಿವರ: ಹೈದರಾಬಾದ್​ನ 84 ವರ್ಷದ ವೃದ್ಧರೊಬ್ಬರು ನೀಡಿದ ದೂರಿನ ಮೇರೆಗೆ ನಗರ ಸೈಬರ್ ಕ್ರೈಂ ಪೊಲೀಸರು ತನಿಖೆ ಕೈಗೊಂಡಿದ್ದರು. ಹೈದರಾಬಾದ್ ಪೊಲೀಸ್ ಆಯುಕ್ತ ಸಿ.ವಿ.ಆನಂದ್ ಅವರ ಪ್ರಕಾರ, ವಂಚಕರು ಸಿಬಿಐ ಅಧಿಕಾರಿಗಳಂತೆ ನಟಿಸಿ ವೃದ್ಧನಿಗೆ ವಾಟ್ಸ್​ಆ್ಯಪ್ ವೀಡಿಯೊ ಕರೆ ಮಾಡಿದ್ದರು. ನೀವು 68 ಕೋಟಿ ರೂಪಾಯಿಗಳು ಹಣಕಾಸು ವಂಚನೆಯಲ್ಲಿ ಭಾಗಿಯಾಗಿರುವುದರಿಂದ ನಿಮ್ಮನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ವಂಚಕರು ವ್ಯಕ್ತಿಗೆ ಭಯ ಹುಟ್ಟಿಸಿದ್ದರು.

ಇದರಿಂದ ಭಯಭೀತರಾದ ವೃದ್ಧ ವ್ಯಕ್ತಿ ವಂಚಕರ ಸೂಚನೆಯ ಮೇರೆಗೆ ಅವರು ಹೇಳಿದ ಬ್ಯಾಂಕ್ ಖಾತೆಗಳಿಗೆ 2.88 ಕೋಟಿ ರೂ.ಗಳನ್ನು ವರ್ಗಾಯಿಸಿದ್ದರು.

ಸೈಬರ್ ಕ್ರೈಂ ಪೊಲೀಸರು ಐಟಿ ಕಾಯ್ದೆಯ ಸೆಕ್ಷನ್ 66 (ಸಿ), 66 (ಡಿ) ಮತ್ತು ಬಿಎನ್ಎಸ್‌ ಸೆಕ್ಷನ್ 308 (2), 318 (4), 319 (2), 336 (3), 338, 340 (2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಪೊಲೀಸ್ ಅಧಿಕಾರಿಗಳು ಬ್ಯಾಂಕ್ ಅಧಿಕಾರಿಗಳಿಗೆ ನೋಟಿಸ್ ನೀಡಿ ವಂಚನೆಯಾದ ಹಣವನ್ನು ಫ್ರೀಜ್ ಮಾಡಿಸಿದ್ದರು. ನಂತರ ಆ ಖಾತೆಗಳಲ್ಲಿನ ಹಣವನ್ನು ನ್ಯಾಯಾಲಯದ ಅನುಮತಿ ಪಡೆದು ಸಂತ್ರಸ್ತರ ಖಾತೆಗೆ ವರ್ಗಾಯಿಸಲಾಯಿತು.

ಸಿಬ್ಬಂದಿಯ ಪ್ರಾಮಾಣಿಕ ಪ್ರಯತ್ನದಿಂದಾಗಿ ಹಣವನ್ನು ಮರಳಿ ಪಡೆಯಲು ಸಾಧ್ಯವಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು. ಸೂರತ್‌ನ ಆಕ್ಸಿಸ್ ಬ್ಯಾಂಕ್ ಗೆ 53 ಲಕ್ಷ ರೂ., ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೇರಳಕ್ಕೆ 50 ಲಕ್ಷ ರೂ. ರಿಫಂಡ್​ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.

ಬ್ಯಾಂಕ್ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಅನುಸರಣೆ ಮಾಡಿದ ನಂತರ, ದೂರುದಾರರ ಖಾತೆಗೆ ಇಂದು 53 ಲಕ್ಷ ರೂ.ಗಳನ್ನು ವರ್ಗಾಯಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ನಿಮ್ಮನ್ನು ಬಂಧಿಸಲಾಗುವುದು ಎಂಬ ಬೆದರಿಕೆ ಕರೆಗಳಿಗೆ ಹೆದರಬೇಡಿ ಎಂದು ಅವರು ಜನರಿಗೆ ಎಚ್ಚರಿಕೆ ನೀಡಿದರು.

ಸಾರ್ವಜನಿಕರಿಗೆ ಪೊಲೀಸರ ಮನವಿ: ಪೊಲೀಸರು ಅಂತಹ ಕರೆಗಳನ್ನು ಮಾಡುವುದಿಲ್ಲ ಮತ್ತು ಅಂತಹ ಕರೆಗಳನ್ನು ಮಾಡುವವರು ವಂಚಕರು ಮಾತ್ರ ಎಂಬುದನ್ನು ಜನರು ನೆನಪಿನಲ್ಲಿಡಬೇಕು. ಅಂತಹ ವಂಚಕರಿಗೆ ಎಂದಿಗೂ ಹಣವನ್ನು ಕಳುಹಿಸಬೇಡಿ. ಅಂತಹ ಕರೆಗಳನ್ನು ನಿರ್ಬಂಧಿಸಿ ಮತ್ತು ಸಹಾಯವಾಣಿ ಸಂಖ್ಯೆ 1930 ಅಥವಾ ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ cybercrime.gov.in ಮೂಲಕ ತಕ್ಷಣ ಆನ್ ಲೈನ್ ದೂರು ದಾಖಲಿಸಿ ಎಂದು ಅವರು ಜನತೆಗೆ ಮನವಿ ಮಾಡಿದರು.

ಇದನ್ನೂ ಓದಿ: ಬೆಂಗಳೂರು ಕಟ್ಟಡ ದುರಂತ ಪ್ರಕರಣ: ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ

ABOUT THE AUTHOR

...view details