ಕರ್ನಾಟಕ

karnataka

ETV Bharat / bharat

ಹೆಚ್ಚಲಿದೆ ಸೂರ್ಯನ ಪ್ರಖರತೆ; ತಾಪಮಾನ 40 ಡಿಗ್ರಿ ತಲುಪುವ ಸಾಧ್ಯತೆ - HOTTER HOLI THIS YEAR - HOTTER HOLI THIS YEAR

ಹವಾಮಾನ ಬದಲಾವಣೆಯಿಂದಾಗಿ ಈ ಬಾರಿ ಬೇಸಿಗೆ ಬೇಗ ಆರಂಭವಾಗಿದೆ. ಇದರಿಂದ ಈ ಸಲ ದೇಶದ ಬಹುತೇಕ ನಗರಗಳಲ್ಲಿ 40 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಟಲಿದೆ.

hotter-holi-this-year-as-mercury-level-is-expected-to-soar
hotter-holi-this-year-as-mercury-level-is-expected-to-soar

By ETV Bharat Karnataka Team

Published : Mar 23, 2024, 12:31 PM IST

ಹೈದರಾಬಾದ್​: ಹೋಳಿ ಎಂದರೆ ಸಣ್ಣವರಿಂದ ದೊಡ್ಡವರವರೆಗೆ ಸಂಭ್ರಮ ಮನೆ ಮಾಡುತ್ತದೆ. ಆದರೆ, ಈ ಬಾರಿಯ ಬಣ್ಣದಬ್ಬದ ಆಚರಣೆಗೆ ಸೂರ್ಯನ ತಾಪವೂ ಸೇರಲಿದೆ. ಈ ವರ್ಷ ಸೂರ್ಯನ ತಾಪ ಹೆಚ್ಚಿದ್ದು, ಹೋಳಿ ಹಬ್ಬದ ದಿನ 40 ಡಿಗ್ರಿ ಸೆಲ್ಸಿಯಸ್​ವರೆಗೂ ಇರಲಿದ್ದು, ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಈ ಸಂಬಂಧ ಅಮೆರಿಕ ಮೂಲಕ ಕ್ಲೈಮೇಟ್​ ಸೆಂಟರ್​ ಅಧ್ಯಯನ ನಡೆಸಿದೆ.

1970ರಿಂದ ತಾಪಮಾನದ ದತ್ತಾಂಶವನ್ನು ವಿಶ್ಲೇಷಣೆ ಮಾಡಿದ್ದು, ಈ ಬಾರಿ ಎಂದೂ ಕಂಡರಿಯದ ರೀತಿಯಲ್ಲಿ ತಾಪಮಾನ ಹೆಚ್ಚಳವನ್ನು ಈ ದಿನ ಕಾಣಬಹುದಾಗಿದೆ. ಇದಕ್ಕೆ ಕಾರಣ ಹವಾಮಾನ ಬದಲಾವಣೆ ಆಗಿದೆ.

ಈ ಕೇಂದ್ರವು ಭಾರತದೆಲ್ಲೆಡೆಯ ತಾಪಮಾನದ ಮಾದರಿಯನ್ನು ಅನುಸರಿಸಿ ಅಧ್ಯಯನ ನಡೆಸಿದ್ದು, ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಮಾರ್ಚ್​ ಮತ್ತು ಏಪ್ರಿಲ್​ನಲ್ಲಿ ಬಿಸಿ ಹವಾಮಾನ ಹೆಚ್ಚಲಿದೆ. ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ 1970ರ ಬಳಿಕ ಇದೇ ಮೊದಲ ಬಾರಿ ಈ ಅವಧಿಯಲ್ಲಿ 2.8 ಡಿಗ್ರಿ ಸೆಲ್ಸಿಯನ್​​ ತಾಪಮಾನ ಹೆಚ್ಚಳ ಕಾಣಲಿದೆ. ಏಪ್ರಿಲ್​ನಲ್ಲಿ ದೇಶದ ಬಹುತೇಕ ಕಡೆ ಶಾಖದ ಹೆಚ್ಚಳ ಕಾಣಲಿದ್ದು, ಮಿಜೋರಾಂನಲ್ಲಿ ಕೂಡ 1.9 ಡಿಗ್ರಿ ಸೆಲ್ಸಿಯಸ್​ ಏರಿಕೆ ಆಗಲಿದೆ.

ಹೋಳಿಗೆ ಮುಂದೆ ಹೆಚ್ಚಲಿರುವ ಈ ತಾಪಮಾನದ ಹೆಚ್ಚಳದಿಂದ 9 ರಾಜ್ಯಗಳಲ್ಲಿ ವಿಪರೀತ ಬೇಸಿಗೆ ಅನುಭವ ಉಂಟಾಗಲಿದೆ. 1970ರಿಂದ ಭಾರತದಲ್ಲಿ ಮಹಾರಾಷ್ಟ್ರ, ಬಿಹಾರ ಮತ್ತು ಛತ್ತೀಸ್​ಗಡ್​​ ಹೊರತಾಗಿ ಉಳಿದೆಡೆ 40 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಟಿಲ್ಲ. ಆದರೆ, ಈ ವರ್ಷ ಈ ಮೂರು ರಾಜ್ಯಗಳ ಜೊತೆಗೆ ಮತ್ತೆ 9 ರಾಜ್ಯಗಳಲ್ಲಿ ಅಂದರೆ, ರಾಜಸ್ಥಾನ್​​, ಗುಜರಾತ್​, ತೆಲಂಗಾಣ, ಮಧ್ಯಪ್ರದೇಶ, ಒಡಿಶಾ ಮತ್ತು ಆಂಧ್ರದಲ್ಲಿ ಕೂಡ 40 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಟಲಿದೆ.

ಮಾರ್ಚ್​ ಮತ್ತು ಏಪ್ರಿಲ್​ನಲ್ಲಿನ ಶಾಖದ ದರದ ಲೆಕ್ಕಾಚಾರದ ಅನುಸಾರ ಮಹಾರಾಷ್ಟ್ರದಲ್ಲಿ ಶೇ 14ರಷ್ಟು ತಾಪಮಾನ ಹೆಚ್ಚಲಿದ್ದು, ಇಲ್ಲಿನ ಜನರು ಹೆಚ್ಚಿನ ಬೇಸಿಗೆಯ ಬೇಗೆ ಅನುಭವಿಸಲಿದ್ದಾರೆ. ಒಟ್ಟು 37 ನಗರದಲ್ಲಿ 40 ಡಿಗ್ರಿ ಸೆಲ್ಸಿಯಸ್​ ಅಥವಾ ಅಧಿಕ ತಾಪಮಾನದ ಬಿಸಿಯನ್ನು ಅನುಭವಿಸುವ ಸಾಧ್ಯತೆ ಶೇ 1ರಷ್ಟಿದೆ. ಇನ್ನು 11 ನಗರಗಳಲ್ಲಿ ಈ ಅನುಭವ ಪಡೆಯುವ ಸಾಧ್ಯತೆ ಶೇ 10ಕ್ಕಿಂತ ಹೆಚ್ಚಿದೆ.

ಮಧುರೈ ಹೊರತಾಗಿ ಭಾರತದಲ್ಲಿನ 15 ನಗರಗಳು 40 ಡಿಗ್ರಿ ಸೆಲ್ಸಿಯಸ್​ ತಾಪಮಾನವನ್ನು ಹೊಂದುವ ಸಾಧ್ಯತೆ ಇದೆ ಇದರಲ್ಲಿ ಬಿಲಾಸ್ಪುರ್​ ಅತಿ ಹೆಚ್ಚಿನ ಅಪಾಯ ಅಂದರೆ ಶೇ 31ರಷ್ಟು ಹೊಂದಿದೆ. ಇಂದೋರ್​ನಲ್ಲಿ ಕೂಡ ಈ ಅಪಾಯವು ಶೇ 8ರಷ್ಟು ಇದ್ದು, ಕಳೆದ ಬಾರಿಗಿಂತ 8.1ರಷ್ಟು ಪಟ್ಟು ಹೆಚ್ಚಿನ ಬಿಸಿ ಅನುಭವ ಇಲ್ಲಿನ ಜನರು ಪಡೆಯಲಿದ್ದಾರೆ. ಮಧುರೈ ಮತ್ತು ಭೋಪಾಲ್​ನಲ್ಲಿ ಈ ಬದಲಾವಣೆ ದೊಡ್ಡಮಟ್ಟದಲ್ಲಿಲ್ಲ. ಇಲ್ಲಿ ಬಿಸಿ ತಾಪಮಾನ ಕ್ರಮವಾಗಿ 7.1 ಮತ್ತು 5.5ರಷ್ಟು ಹೆಚ್ಚಿರುವ ಸಾಧ್ಯತೆ ಇದೆ.

ತಾಪಮಾನದಲ್ಲಿ ಅನಿಶ್ಚಿತ ರೂಪಾಂತರದಿಂದ ಈ ಬದಲಾವಣೆ ಕಾಣಬಹುದಾಗಿದೆ. ಈಗಾಗಲೇ ಚಳಿಗಾಲದಲ್ಲಿ ಬೇಸಿಗೆ ಅನುಭವ ಆಗುತ್ತಿದೆ. ಫೆಬ್ರವರಿಯಲ್ಲಿಯೇ ಶಾಖದ ಬಿಸಿ ಕಂಡಿದ್ದು, ಈ ಮಾರ್ಚ್​ನಲ್ಲಿ ಕೂಡ ಇದೇ ಪರಿಸ್ಥಿತಿ ಮುಂದುವರೆದಿದೆ. ಭಾರತದಲ್ಲಿ ತಾಪಮಾನವು ಮಾನವನಿಂದ ಆದ ಹವಾಮಾನ ಬದಲಾಣೆಯ ಪರಿಣಾಮ ಎಂಬುದು ಸ್ಪಷ್ಟವಾಗಿದೆ ಎಂದು ಕ್ಲೈಮೆಟ್​​ ಸೆಂಟ್ರಲ್​ನ ಡಾ. ಆ್ಯಂಡ್ರೊ ಪೆರ್ಶಿಂಗ್​ ತಿಳಿಸಿದ್ದಾರೆ.

ಬಿಸಿಲಿನ ತಾಪಮಾನ ಹೆಚ್ಚಳದ ಹಿಂದೆ ಹವಾಮಾನ ಬದಲಾವಣೆ ಕಾರಣ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ತಾಪಮಾನದ ಮಾದರಿಗಳಲ್ಲಿ ಬದಲಾವಣೆಯನ್ನು ನಾವು ಕಾಣುತ್ತಿದ್ದೇವೆ. ಮಾರ್ಚ್​ನಲ್ಲಿ ಶಾಖದ ಅಲೆ ಅಪರೂಪ ಆದರೆ, ಜಾಗತಿಕ ತಾಪಮಾನದಿಂದ ಹೆಚ್ಚಿನ ಉಷ್ಣತೆಯ ಏರಿಕೆ ಕಾಣಬಹುದಾಗಿದೆ. ಇದೇ ರೀತಿಯ ಹವಾಮಾನ ಪರಿಸ್ಥಿತಿಯು ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಹವಾಮಾನ ಬದಲಾವಣೆಯಿಂದ ಆರೋಗ್ಯ ಸಮಸ್ಯೆ ಹೆಚ್ಚಳ: ವೈದ್ಯರ ಎಚ್ಚರಿಕೆ

ABOUT THE AUTHOR

...view details