ಕರ್ನಾಟಕ

karnataka

ETV Bharat / bharat

ಮೃತ ರೋಗಿಯ ಕಿಡ್ನಿ ಶಸ್ತ್ರ ಚಿಕಿತ್ಸೆ ಯಶಸ್ವಿ, ಇಬ್ಬರಿಗೆ ಜೀವದಾನ; ಈಶಾನ್ಯ ಭಾರತದಲ್ಲೇ ಮೊದಲ ಪ್ರಕರಣ - Cadaveric Kidney Transplant success

ಮೆದುಳು ನಿಷ್ಕ್ರಿಯಗೊಂಡ ರೋಗಿಯ ಮೂತ್ರಪಿಂಡ ದಾನದಿಂದ ಇಬ್ಬರಿಗೆ ಜೀವದಾನ ಸಿಕ್ಕಿದೆ. ಅಷ್ಟೇ ಅಲ್ಲ, ಈಶಾನ್ಯ ಭಾರತದಲ್ಲಿ ಮೊದಲ ಮೂತ್ರಪಿಂಡ ಕಸಿ ಯಶಸ್ವಿಯಾಗಿ ಮಾಡಲಾಯಿತು. ಈ ಬಗ್ಗೆ ಅಸ್ಸೋಂ ಸಿಎಂ ಸಂತಸ ವ್ಯಕ್ತಪಡಿಸಿದ್ದಾರೆ.

By PTI

Published : Jun 22, 2024, 6:25 PM IST

STATE RUN HOSPITAL  BRAIN DEAD DONOR  GMCH PREVIOUSLY  IVF INDUCED PREGNANCIES
ಮೃತ ರೋಗಿಯ ಕಿಡ್ನಿ ಶಸ್ತ್ರ ಚಿಕಿತ್ಸೆ ಯಶಸ್ವಿ (ETV Bharat)

ಗುವಾಹಟಿ (ಅಸ್ಸೋಂ):ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (GMCH) ಮೊದಲ ಬಾರಿಗೆ ಶವದ ಮೂತ್ರಪಿಂಡ ಕಸಿಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ಬ್ರೆನ್​ ಡೆಡ್​ ರೋಗಿಯ ಕುಟುಂಬ ಸದಸ್ಯರು ಎರಡು ಮೂತ್ರಪಿಂಡಗಳನ್ನು ದಾನ ಮಾಡಿದ್ದರು. ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತಜ್ಞ ವೈದ್ಯರ ತಂಡವು ದಾನ ಮಾಡಿದ ಮೂತ್ರಪಿಂಡವನ್ನು ಇತರ ಇಬ್ಬರು ರೋಗಿಗಳಿಗೆ ಯಶಸ್ವಿಯಾಗಿ ಕಸಿ ಮಾಡಿದೆ. ಅಸ್ಸೋಂ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಅವರು ಶನಿವಾರ ಈ ಮಾಹಿತಿ ನೀಡಿದ್ದಾರೆ.

ಕೃತಜ್ಞತೆ ಸಲ್ಲಿಸಿದ ಸಿಎಂ ಶರ್ಮಾ: ಮೆದುಳು ನಿಷ್ಕ್ರಿಯಗೊಂಡ ರೋಗಿಯ ಕುಟುಂಬ ಸದಸ್ಯರಿಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ. GMCH ನ ತಜ್ಞ ವೈದ್ಯರ ತಂಡವು ಇಲ್ಲಿ ಮೂತ್ರಪಿಂಡ ಕಸಿಯನ್ನು ಯಶಸ್ವಿಯಾಗಿ ನಡೆಸಿದೆ. ಇದು ಗುವಾಹಟಿ ಮತ್ತು ಈಶಾನ್ಯ ಭಾರತದಲ್ಲಿ ಮೊದಲ ಮೂತ್ರಪಿಂಡ ಕಸಿಯಾಗಿದೆ. ಮೂತ್ರಪಿಂಡಗಳನ್ನು ಇತರ ಇಬ್ಬರು ರೋಗಿಗಳಿಗೆ ಕಸಿ ಮಾಡಲಾಗಿದೆ. ಮೆದುಳು ನಿಷ್ಕ್ರಿಯಗೊಂಡ ರೋಗಿಗಳಿಂದ ಕಿಡ್ನಿ ದಾನ ಮಾಡುವ ಸಂಸ್ಕೃತಿಯನ್ನು ನಾವು ಪ್ರಾರಂಭಿಸಿದರೆ, ಅದು ಅನೇಕ ಜನರ ಜೀವವನ್ನು ಉಳಿಸುತ್ತದೆ ಎಂದು ಮುಖ್ಯಮಂತ್ರಿ ಶರ್ಮಾ ಹೇಳಿದ್ದಾರೆ.

ಜಿಎಂಸಿಎಚ್‌ನಲ್ಲಿ ಇತ್ತೀಚಿನ ಮತ್ತೊಂದು ಯಶಸ್ಸು ಐವಿಎಫ್-ಪ್ರೇರಿತ ಗರ್ಭಧಾರಣೆಯಾಗಿದೆ. 36 ಭ್ರೂಣಗಳನ್ನು ಯಶಸ್ವಿಯಾಗಿ ಗರ್ಭಾಶಯಕ್ಕೆ ವರ್ಗಾಯಿಸಲಾಗಿದೆ. ಎಂಟು ಗರ್ಭಧಾರಣೆಗಳು ವರದಿಯಾಗಿವೆ ಮತ್ತು ಸಿಸೇರಿಯನ್ ಮೂಲಕ ಒಂದು ಮಗು ಜನಿಸಿದೆ ಎಂದು ಸಿಎಂ ಹೇಳಿದರು. ಇತ್ತೀಚಿನ ದಿನಗಳಲ್ಲಿ ಅಸ್ಥಿಮಜ್ಜೆಯ (Bone Marrow) ಕಸಿ ಮಾಡುವ ಮತ್ತೊಂದು ನಿರ್ಣಾಯಕ ವಿಧಾನವನ್ನು GMCH ನಲ್ಲಿ ಮಾಡಲಾಗುತ್ತಿದೆ. ಈಗಾಗಲೇ 28 ಪ್ರಕರಣಗಳನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ ಮತ್ತು ಇನ್ನೂ ಮೂರು ರೋಗಿಗಳು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಿಎಂ ಮಾಹಿತಿ ನೀಡಿದರು.

ಜಿಎಂಸಿಎಚ್ ಈಗ ನಿಜವಾದ ಅರ್ಥದಲ್ಲಿ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಯಾಗುತ್ತಿದೆ. ಮಹೇಂದ್ರ ಮೋಹನ್ ಚೌಧರಿ ಆಸ್ಪತ್ರೆಯಲ್ಲಿ (ಎಂಎಂಸಿಎಚ್) (ಗುವಾಹಟಿಯಲ್ಲಿಯೂ ಸಹ) ಕೆಲಸ ಪೂರ್ಣಗೊಂಡ ನಂತರ, ನಗರವು ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಹೊಂದಿರುತ್ತದೆ. ಈ ಸಂಸ್ಥೆಗಳಲ್ಲಿ ಆಯುಷ್ಮಾನ್ ಭಾರತ್‌ನಂತಹ ಆರೋಗ್ಯ ವಿಮಾ ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡು ಸರ್ಕಾರಿ ಆಸ್ಪತ್ರೆಗಳನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಸಿಎಂ ತಿಳಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಮತ್ತು ಅಂತಹ ಸರ್ಕಾರಿ ಆರೋಗ್ಯ ವಿಮಾ ಯೋಜನೆಗಳ ಬಳಕೆಯನ್ನು ನಿಯಂತ್ರಿಸಲಾಗುವುದು ಮತ್ತು ಸೂಪರ್-ಸ್ಪೆಷಾಲಿಟಿ ಸೇವೆಗಳನ್ನು ಒದಗಿಸುವ ಆಸ್ಪತ್ರೆಗಳಿಗೆ ಸೀಮಿತಗೊಳಿಸಲಾಗುವುದು ಎಂದು ಸಿಎಂ ವಿವರಿಸಿದರು.

ಓದಿ:ಬೆಂಗಳೂರಿನಲ್ಲಿ ಪತ್ತೆಯಾಯ್ತು ಮಗುವಿಗೆ ಮಾರಣಾಂತಿಕ ಕಾಯಿಲೆ; ₹16 ಕೋಟಿ ಇಂಜೆಕ್ಷನ್​ಗಾಗಿ ದಾನಿಗಳ ಮೊರೆ ಹೋದ ಪೋಷಕರು - 16 Crore Injection

ABOUT THE AUTHOR

...view details