ಕರ್ನಾಟಕ

karnataka

ETV Bharat / bharat

'ದೆಹಲಿಗೆ ಬದಲಾವಣೆ ಅಗತ್ಯ, ಅದನ್ನು ಉಳಿಸಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು': ಡಿ.ಕೆ.ಶಿವಕುಮಾರ್​ - DCM DK SHIVAKUMAR

ದೆಹಲಿ ವಿಧಾನಸಭೆ ಚುನಾವಣೆ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಮಾತನಾಡಿದ್ದಾರೆ. ಬಿಜೆಪಿ ಹಾಗೂ ಎಎಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

d k shivakumar
ಡಿ.ಕೆ.ಶಿವಕುಮಾರ್​ (ANI)

By ETV Bharat Karnataka Team

Published : Feb 1, 2025, 5:45 PM IST

ನವದೆಹಲಿ:ಮುಂಬರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪಕ್ಷದ ಬಲವು ದೇಶದ ಬಲಕ್ಕೆ ಸಮಾನ ಎಂದು ಹೇಳಿದ್ದಾರೆ. ದೆಹಲಿಯ ಜನರು ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ಅಡಿಯಲ್ಲಿ ಆಡಳಿತ ಅನುಭವಿಸಿದ್ದಾರೆ. ಈ ಆಡಳಿತಗಳ ನಡುವಿನ ವ್ಯತ್ಯಾಸಗಳ ಬಗ್ಗೆ ಅವರಿಗೆ ತಿಳಿದಿದೆ ಎಂದಿದ್ದಾರೆ.

ದೆಹಲಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್‌ನ ಬಲವು ದೇಶದ ಬಲ ಎಂದು ಎಲ್ಲರಿಗೂ ತಿಳಿದಿದೆ. ಈ ಹಿಂದೆ ಶೀಲಾ ದೀಕ್ಷಿತ್ ತಮ್ಮ ಅಧಿಕಾರಾವಧಿಯಲ್ಲಿ ಮಾದರಿ ಆಡಳಿತ ನಡೆಸಿದ್ದರು. ಅವರು ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದರು, ದ್ವೇಷದ ರಾಜಕೀಯವನ್ನು ಎಂದಿಗೂ ಮಾಡಲಿಲ್ಲ. ದೆಹಲಿಗೆ ಬದಲಾವಣೆ ಬೇಕು, ದೆಹಲಿಯನ್ನು ಉಳಿಸಲು ಕಾಂಗ್ರೆಸ್ ಅವಶ್ಯಕತೆಯಿದೆ" ಎಂದು ಡಿಕೆಶಿ ತಿಳಿಸಿದರು.

"ಕೇಜ್ರಿವಾಲ್ ಅವರೇ ತಮ್ಮ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ. ಎಎಪಿ ಕೂಡ ಚುನಾವಣೆಯಲ್ಲಿ ಸೋಲಲಿದೆ. ನೀವು 10 ವರ್ಷಗಳ ಕಾಲ ಅಧಿಕಾರದಲ್ಲಿದ್ದೀರಿ. ಆದರೆ ನೀವು ಮಾತನಾಡಲು ಏನೂ ಇಲ್ಲ, ಇಂದಿಗೂ ನೀವು ಟೀಕಿಸುವುದರಲ್ಲೇ ನಿರತರಾಗಿದ್ದೀರಿ. ನೀವು ಏನು ಮಾಡಿದ್ದೀರೆಂಬುದನ್ನು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಚುನಾವಣೆಯಲ್ಲಿ ಸೋಲುತ್ತಾರೆಂದು ಎಎಪಿ ಅವರಿಗೆ ತಿಳಿದಿದ್ದು, ಹೀಗಾಗಿ ತೀವ್ರ ಅಸಮಾಧಾನದಲ್ಲಿದ್ದಾರೆ. ಇದು ಸೋಲಿನ ಭಯ. ಬಿಜೆಪಿ ಮತ್ತು ಕಾಂಗ್ರೆಸ್ ಎಂದಿಗೂ ಒಂದಾಗಲು ಸಾಧ್ಯವಿಲ್ಲ ಎಂದು ಈ ದೇಶದ ಮಗುವಿಗೂ ಕೂಡ ತಿಳಿದಿದೆ" ಎಂದು ಡಿ.ಕೆ.ಶಿವಕುಮಾರ್​ ಸ್ಪಷ್ಟಪಡಿಸಿದರು.

''ಅರವಿಂದ್ ಕೇಜ್ರಿವಾಲ್ ಅವರು ತಾವು ತುಂಬಾ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ. ಆದರೆ, ನೀವು ಏನು ಹೇಳಿದರೂ ಅದನ್ನು ದಾಖಲೆಯೊಂದಿಗೆ ಹೇಳುವಂತೆ ಎಂದು ನಾನು ಆಗ್ರಹಿಸಿದ್ದೇನೆ. ಬಿಜೆಪಿ ಮತ್ತು ಎಎಪಿ ಎರಡೂ ಪಕ್ಷಗಳೂ ಕೂಡ ಮತಕ್ಕಾಗಿ ಹಣ ಹಂಚುತ್ತಿವೆ. ಅವರು ರಾಜಕೀಯದಲ್ಲಿದ್ದಾರೋ ಅಥವಾ ಮಾರುಕಟ್ಟೆಯಲ್ಲಿದ್ದಾರೆಯೇ ಎಂದು ನಾನು ಅವರನ್ನು ಕೇಳಲು ಬಯಸುತ್ತೇನೆ'' ಎಂದು ಡಿಸಿಎಂ ಹೇಳಿದರು.

ಫೆಬ್ರವರಿ 5ರಂದು ದೆಹಲಿ ವಿಧಾನಸಭಾ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದ್ದು, ಫೆಬ್ರವರಿ 8 ರಂದು ಮತ ಎಣಿಕೆ ನಡೆಯಲಿದೆ.

ದೆಹಲಿಯಲ್ಲಿ ಸತತ 15 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್, ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಭಾರಿ ಹಿನ್ನಡೆ ಅನುಭವಿಸಿತ್ತು. ಅಲ್ಲದೆ, ಯಾವುದೇ ಸ್ಥಾನವನ್ನೂ ಗೆಲ್ಲುವಲ್ಲಿ ವಿಫಲವಾಗಿತ್ತು. 2020ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ 70 ಸ್ಥಾನಗಳಲ್ಲಿ 62 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಾಬಲ್ಯ ಸಾಧಿಸಿತ್ತಲ್ಲದೆ, ಬಿಜೆಪಿ ಕೇವಲ 8 ಸ್ಥಾನಗಳನ್ನು ಪಡೆದಿತ್ತು.

ಇದನ್ನೂ ಓದಿ:AAPಗೆ ಬಿಗ್​​ ಬಿಗ್​ ಶಾಕ್: ರಾಜೀನಾಮೆಗೆ ಕಾರಣ ನೀಡಿದ 7 ಆಪ್​ ಶಾಸಕರು!.. ಕೇಜ್ರಿವಾಲ್​ಗೆ ಪತ್ರ!!

ABOUT THE AUTHOR

...view details