ಕರ್ನಾಟಕ

karnataka

By ETV Bharat Karnataka Team

Published : Feb 19, 2024, 8:14 AM IST

ETV Bharat / bharat

ಅಮೇಥಿಯಲ್ಲಿ ಇಂದು ಭಾರತ್ ಜೋಡೋ ನ್ಯಾಯ ಯಾತ್ರೆ: ರಾಹುಲ್​ಗೆ ಅಖಿಲೇಶ್ ಯಾದವ್ ಸಾಥ್​

ಕೇಂದ್ರ ಸರ್ಕಾರದ ವಿರುದ್ಧ ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದರು. ಪ್ರಯಾಗ್​ರಾಜ್​ನಲ್ಲಿ ಅವರು ಮೋದಿ ವಿರುದ್ಧ ಮತ್ತೊಮ್ಮೆ ಗುಟುರು ಹಾಕಿದ್ದಾರೆ. ಇಂದು ಭಾರತ್ ಜೋಡೋ ಯಾತ್ರೆ ಅಮೇಥಿಯಲ್ಲಿ ಸಂಚರಿಸಲಿದೆ. ಉತ್ತರಪ್ರದೇಶ ಮಾಜಿ ಸಿಎಂ ಅಖಿಲೇಶ್​ ಯಾದವ್​ ರಾಹುಲ್​ಗೆ ಸಾಥ್​ ನೀಡಲಿದ್ದಾರೆ.

Etv BharatCongress's Bharat Jodo Nyaya Yatra today in Amethi and Pratapgarh, Akhilesh Yadav was present with Rahul Gandhi addressed public meeting
Etv Bharatಅಮೇಥಿಯಲ್ಲಿ ಇಂದು ಭಾರತ್ ಜೋಡೋ ನ್ಯಾಯ ಯಾತ್ರೆ: ರಾಹುಲ್​ಗೆ ಅಖಿಲೇಶ್ ಯಾದವ್ ಸಾಥ್​

ಅಮೇಥಿ/ಪ್ರತಾಪಗಢ( ಉತ್ತರಪ್ರದೇಶ): ಕಾಂಗ್ರೆಸ್‌ನ ಭಾರತ್ ಜೋಡೋ ನ್ಯಾಯ್ ಯಾತ್ರೆ ಉತ್ತರಪ್ರದೇಶದಲ್ಲಿ ಸಂಚರಿಸುತ್ತಿದೆ. ಇಂದು ಬೆಳಗ್ಗೆ 9 ಗಂಟೆಗೆ ಪ್ರಯಾಗ್‌ರಾಜ್ ಮೂಲಕ ಪ್ರತಾಪ್‌ಗಢ ಜಿಲ್ಲೆಯನ್ನು ಪ್ರವೇಶಿಸಲಿದೆ. ಇನ್ನು ಎಸ್​​ಪಿ ನಾಯಕ ಅಖಿಲೇಶ್​ ಯಾದವ್​​​ ಇಂದು ರಾಹುಲ್​​​ಗೆ ಸಾಥ್​ ನೀಡಲಿದ್ದಾರೆ. ರಾಹುಲ್​ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ನ್ಯಾಯ ಯಾತ್ರೆ ಉತ್ತರ ಪ್ರದೇಶ ಕಾಂಗ್ರೆಸ್ಸಿಗರಲ್ಲಿ ಭಾರಿ ಹುಮ್ಮಸ್ಸು ತಂದಿದೆ. ನಗರದ ವಿವಿಧೆಡೆ ರಾಹುಲ್ ಗಾಂಧಿ ಅವರ ಹೋರ್ಡಿಂಗ್ಸ್​ಗಳನ್ನು ಹಾಕಲಾಗಿದ್ದು, ಸ್ವಾಗತಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಧ್ಯಾಹ್ನ ಯಾತ್ರೆ ಲಾಲ್‌ಗಂಜ್ ಮೂಲಕ ತಮ್ಮ ಕ್ಷೇತ್ರವಾಗಿದ್ದ ಅಮೇಥಿಗೆ ರಾಹುಲ್​ ಗಾಂಧಿ ಆಗಮಿಸಲಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡ ನಾಲ್ಕು ದಿನಗಳ ಅಮೇಥಿಗೆ ಭೇಟಿ ನೀಡಲಿದ್ದಾರೆ. ಅಮೇಥಿ ನಂತರ ರಾಹುಲ್​ ಗಾಂಧಿಯವರ ನ್ಯಾಯ ಯಾತ್ರೆ ರಾಯ್ ಬರೇಲಿಗೆ ಸಾಗಲಿದೆ.

ಪ್ರಯಾಗರಾಜ್‌ನಲ್ಲಿ ರಾಹುಲ್​ ಮಿಂಚು: ನ್ಯಾಯ ಯಾತ್ರೆ ಭಾನುವಾರ ಪ್ರಯಾಗ್‌ರಾಜ್‌ಗೆ ತಲುಪಿತ್ತು. ಸ್ವರಾಜ್ ಭವನದಿಂದ ಆರಂಭವಾದ ಯಾತ್ರೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಬೆಂಬಲಿಗರು ಜಮಾಯಿಸಿದ್ದರು. ಸಂಸದ ರಾಹುಲ್ ಗಾಂಧಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ದೇಶದಲ್ಲಿ ಶೇ.73ರಷ್ಟು ಜನರಿಗೆ ಹಕ್ಕುಗಳೇ ಸಿಗುತ್ತಿಲ್ಲ. ಮೋದಿ ಸರ್ಕಾರ ಬಡವರ ಹಣವನ್ನು ಕಿತ್ತು ಶ್ರೀಮಂತರಿಗೆ ನೀಡುತ್ತಿದೆ ಎಂದು ಹರಿಹಾಯ್ದರು.

ಕಳೆದ ಶುಕ್ರವಾರ ಭಾರತ್ ಜೋಡೋ ನ್ಯಾಯ್ ಯಾತ್ರೆಯು ಚಂದೌಲಿ ಜಿಲ್ಲೆಯ ಮೂಲಕ ಉತ್ತರಪ್ರದೇಶವನ್ನು ಪ್ರವೇಶಿಸಿತ್ತು. ಚಂದೌಲಿ ಮೂಲಕ ವಾರಾಣಸಿ, ಪ್ರಯಾಗ್​ರಾಜ್​, ಇಂದು ಪ್ರತಾಪಗಢ ಜಿಲ್ಲೆಗೂ ತಲುಪಿದೆ. ಅಮೇಥಿ ನಂತರ ರಾಯ್ ಬರೇಲಿಗೆ ಯಾತ್ರೆ ಸಾಗಲಿದೆ. ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ರಾಹುಲ್​​​ ಗಾಂಧಿಗೆ ಸಾಥ್​ ನೀಡಲಿದ್ದಾರೆ. ಇನ್ನೊಂದು ಕಡೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೋಮವಾರ ಅಮೇಥಿ ಪ್ರವಾಸ ಕೈಗೊಂಡಿದ್ದಾರೆ.

ಅಮೇಥಿಯಲ್ಲಿ ಇಂದು ಭಾರತ್ ಜೋಡೋ ನ್ಯಾಯ ಯಾತ್ರೆ: ರಾಹುಲ್​ಗೆ ಅಖಿಲೇಶ್ ಯಾದವ್ ಸಾಥ್​

ಯಾತ್ರೆಗೆ ಅಖಿಲೇಶ್ ಸಾಥ್:ಮಾಜಿ ಸಿಎಂ ಹಾಗೂ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿದ್ದಾರೆ. ಅಮೇಥಿ ಪ್ರವಾಸದಲ್ಲಿ ಅಖಿಲೇಶ್ ಯಾದವ್ ಭಾಗವಹಿಸುವುದು ಕಾಂಗ್ರೆಸ್​ ಯಾತ್ರೆಗೆ ಮತ್ತಷ್ಟು ಬಲ ತಂದಿದೆ. ಎಸ್ಪಿ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರಿಗೆ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಈ ಹಿಂದೆಯೇ ಕಾಂಗ್ರೆಸ್ ಆಹ್ವಾನ ನೀಡಿತ್ತು. ಈ ಆಹ್ವಾನ ಸ್ಪೀಕರಿಸಿರುವ ಅಖಿಲೇಶ್ ಯಾದವ್​, ರಾಹುಲ್​ ಗಾಂಧಿ ಅವರ ಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿದ್ದು, ಉತ್ತರಪ್ರದೇಶದಲ್ಲಿ ಬಿಜೆಪಿ ಸೋಲಿಸುವ ಪಣ ತೊಟ್ಟಿದ್ದಾರೆ.

ಶುಭಾಶಯ ಕೋರಿದ ಅಖಿಲೇಶ್ ಯಾದವ್: ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಕಾಂಗ್ರೆಸ್ ನ ಭಾರತ್ ಜೋಡೋ ನ್ಯಾಯ್ ಯಾತ್ರೆ ಉತ್ತರಪ್ರದೇಶದಲ್ಲಿ ಯಶಸ್ವಿಯಾಗಿ ಸಾಗಲಿ ಎಂದು ಹಾರೈಸಿದ್ದಾರೆ. ಖುದ್ದು ರಾಯ್ ಬರೇಲಿ ಅಥವಾ ಅಮೇಥಿಯಲ್ಲಿ ಸಾಗುವ ಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗು ಅಖಿಲೇಶ್ ಯಾದವ್ ಹೇಳಿದ್ದಾರೆ.

ಎಲ್ಲೆಲ್ಲಿ ಸಾಗಲಿದೆ ಯಾತ್ರೆ: ಫೆಬ್ರವರಿ 19 ರಂದು ಭಾರತ್ ಜೋಡೋ ನ್ಯಾಯ ಯಾತ್ರೆಯು ಪ್ರತಾಪ್‌ಗಢದ ರಾಂಪುರ ಅಸೆಂಬ್ಲಿಯ ಅಥೇಹಾದಿಂದ ಹೊರಟು ಅಮೇಥಿ ಪ್ರವೇಶಿಸಲಿದೆ ಎಂದು ಕಾಂಗ್ರೆಸ್ ವಕ್ತಾರ ಅನಿಲ್ ಸಿಂಗ್ ಹೇಳಿದ್ದಾರೆ. ಅಮೇಥಿ ವಿಧಾನಸಭೆಯ ಕಕ್ವಾ ಗೌರಿಗಂಜ್, ಗಾಂಧಿ ನಗರ, ಜೈಸ್, ಫುರ್ಸತ್‌ಗಂಜ್ ಮೂಲಕ ಮಹಾರಾಜಪುರ ಮೂಲಕ ರಾಯ್‌ಬರೇಲಿಗೆ ಹೊರಡಲಿದೆ.

ಇದನ್ನು ಓದಿ:ಉತ್ತರ ಪ್ರದೇಶ: ವ್ಯಕ್ತಿಯ ಹೊಟ್ಟೆಯಲ್ಲಿ ಸಿಲಿಂಡರ್‌ ಆಕೃತಿಯ ಕಬ್ಬಿಣ ಪತ್ತೆ!

ABOUT THE AUTHOR

...view details