ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್​ ಹಿಂದುಗಳನ್ನು ಇಬ್ಭಾಗಿಸುವ, ಜಾತಿಗಳ ಮಧ್ಯೆ ದ್ವೇಷ ಹರಡುವ ಪಕ್ಷ: ಮೋದಿ

ಮಹಾರಾಷ್ಟ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ಮೋದಿ ಇಂದು ಚಾಲನೆ ನೀಡಿದರು. ಇದೇ ವೇಳೆ, ಪ್ರತಿಪಕ್ಷ ಕಾಂಗ್ರೆಸ್​ ವಿರುದ್ಧ ಟೀಕಾಪ್ರಹಾರ ನಡೆಸಿದರು.

By ANI

Published : 4 hours ago

PM Modi
ಪ್ರಧಾನಿ ಮೋದಿ (ETV Bharat)

ಮುಂಬೈ(ಮಹಾರಾಷ್ಟ್ರ):ಕಾಂಗ್ರೆಸ್ ಒಂದು ಬೇಜವಾಬ್ದಾರಿ ಪಕ್ಷ. ಹಿಂದೂಗಳನ್ನು ವಿಭಜಿಸಲು ಮತ್ತು ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿಕಟ್ಟಿ ದ್ವೇಷ ಹರಡುವ ಕಾರ್ಖಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಕಟುವಾಗಿ ಟೀಕಿಸಿದ್ದಾರೆ.

ಮಹಾರಾಷ್ಟ್ರದಲ್ಲಿಂದು ಸುಮಾರು 7,600 ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.

ಕಾಂಗ್ರೆಸ್​​ ತನ್ನ ರಾಜಕೀಯ ಲಾಭಕ್ಕಾಗಿ ಹಿಂದು ಸಮಾಜವನ್ನು ಒಡೆಯುತ್ತಿದೆ. ಜಾತಿ-ಜಾತಿಗಳ ಮಧ್ಯೆ ದ್ವೇಷ ಹರಡುತ್ತಿದೆ. ಸಮಾಜ ಹೆಚ್ಚು ಇಬ್ಭಾಗವಾದಷ್ಟು ತನಗೆ ಲಾಭ ಎಂದುಕೊಂಡಿದೆ. ದೇಶದಲ್ಲಿ ಎಲ್ಲೇ ಚುನಾವಣೆ ನಡೆದರೂ, ಕಾಂಗ್ರೆಸ್​ ಇದೇ ನೀತಿಯನ್ನು ಅನುಸರಿಸುತ್ತದೆ ಎಂದು ಆರೋಪಿಸಿದರು.

ದಲಿತರ ಮೀಸಲಾತಿ ಕಸಿಯುವ ಯತ್ನ:ದಲಿತರು, ರೈತರು, ಯುವಕರು ಸೇರಿದಂತೆ ಎಲ್ಲ ವರ್ಗವನ್ನು ದಾರಿತಪ್ಪಿಸಲು ಕಾಂಗ್ರೆಸ್ ಪ್ರಯತ್ನಿಸಿದೆ. ಆದರೆ, ಈ ಎಲ್ಲ ಯತ್ನಗಳೂ ವಿಫಲವಾಗಿವೆ. ಕಾಂಗ್ರೆಸ್‌ನ ನಗರ ನಕ್ಸಲರ ಗುಂಪಿನ ಪಿತೂರಿಗಳನ್ನು ಜನರು ಗ್ರಹಿಸಿದ್ದಾರೆ. ದಲಿತ ಸಮುದಾಯದ ಮೀಸಲಾತಿಯನ್ನು ಕಸಿದುಕೊಳ್ಳುವ ಮೂಲಕ ತನ್ನ 'ಓಲೈಕೆ ಮತಬ್ಯಾಂಕ್'ಗೆ ನೀಡಲು ಬಯಸುತ್ತಿದೆ ಎಂದರು.

ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದ ಚುನಾವಣಾ ಫಲಿತಾಂಶಗಳು ಪ್ರಕಟವಾಗಿವೆ. ಹರಿಯಾಣದ ಬಿಜೆಪಿ ಗೆಲುವು ದೇಶದ ಮನಸ್ಥಿತಿ ಏನೆಂದು ಸ್ಪಷ್ಟಪಡಿಸಿದೆ. ನಮ್ಮ ಪಕ್ಷ ಸತತ ಮೂರನೇ ಬಾರಿಗೆ ಆಯ್ಕೆಯಾಗಿರುವುದು ಐತಿಹಾಸಿಕವಾಗಿದೆ. ಈ ಮೂಲಕ ಬಿಜೆಪಿ ಜಾರಿಗೆ ತಂದಿರುವ ಕಲ್ಯಾಣ ಯೋಜನೆಗಳಿಂದ ಹರಿಯಾಣದ ರೈತರು, ಜನರು ಸಂತಸವಾಗಿದ್ದಾರೆ ಎಂದು ತಿಳಿಸುತ್ತದೆ ಎಂದು ಹೇಳಿದರು.

ಮಹಾರಾಷ್ಟ್ರವನ್ನೂ ಗೆಲ್ಲಬೇಕು:ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದಂತೆ, ಮಹಾರಾಷ್ಟ್ರದಲ್ಲಿ ಕೂಡ ನಾವು ದೊಡ್ಡ ಗೆಲುವು ಪಡೆಯಬೇಕು ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದ ಮೋದಿ, ಪ್ರತಿಪಕ್ಷವಾದ ಮಹಾ ವಿಕಾಸ್ ಅಘಾಡಿ (MVA) ಅಧಿಕಾರಕ್ಕಾಗಿ ರಾಜ್ಯವನ್ನು ದುರ್ಬಲಗೊಳಿಸಲು ಬಯಸಿದೆ. ಆದರೆ, ಆಡಳಿತಾರೂಢ ಮಹಾಯುತಿ ಮೈತ್ರಿ ರಾಜ್ಯವನ್ನು ಬಲಪಡಿಸುತ್ತಿದೆ ಎಂದರು.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಮುಂದಿನ ತಿಂಗಳು ಚುನಾವಣೆ ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ:7,600 ಕೋಟಿಯ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಇಂದು ಪ್ರಧಾನಿ ಚಾಲನೆ

ABOUT THE AUTHOR

...view details