ಕರ್ನಾಟಕ

karnataka

ETV Bharat / bharat

ಉತ್ತರ ಭಾರತದಲ್ಲಿ ತೀವ್ರವಾದ ಚಳಿ; ದೆಹಲಿಯಲ್ಲಿ ದಟ್ಟ ಮಂಜಿಗೆ ಇಂದು ಹಲವು ವಿಮಾನಗಳ ವ್ಯತ್ಯಯ - DENSE FOG HITS DELHI AIRPORT

ದಟ್ಟ ಮಂಜಿನಿಂದ ಕಾರ್ಯಾಚರಣೆ ಸವಾಲಾಗಿರುವ ಹಿನ್ನೆಲೆ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೋ ತಾತ್ಕಾಲಿಕವಾಗಿ ಹಾರಾಟವನ್ನು ಸ್ಥಗಿತಗೊಳಿಸಿತು.

15-flights-diverted-many-delayed-as-dense-fog-hits-operations-at-delhi-airport
ದೆಹಲಿ ದಟ್ಟ ಮಂಜು (IANS)

By PTI

Published : Jan 4, 2025, 10:32 AM IST

ನವದೆಹಲಿ: ಉತ್ತರ ಭಾರತದಲ್ಲಿ ಚಳಿಯ ತೀವ್ರತೆ ಹೆಚ್ಚಿದೆ. ರಾಷ್ಟ್ರ ರಾಜಧಾನಿಯಲ್ಲಿ ಇಂದು ಕೂಡ ದಟ್ಟ ಮಂಜಿನ ವಾತಾವರಣದಿಂದ ವೀಕ್ಷಣಾ ಸಾಮರ್ಥ್ಯ ಕುಸಿದು ಹಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಯಿತು.

ಪ್ರತಿಕೂಲ ಹವಾಮಾನದಿಂದಾಗಿ ಅನೇಕ ವಿಮಾನಗಳು ವಿಳಂಬವಾಗಿದ್ದು, ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ದಟ್ಟ ಮಂಜಿನ ಹಿನ್ನೆಲೆ ಕಾರ್ಯಾಚರಣೆ ಸವಾಲಾಗಿದ್ದರಿಂದ ದೇಶದ ಅತಿದೊಡ್ಡ ವಿಮಾನ ಸಂಸ್ಥೆಯಾಗಿರುವ ಇಂಡಿಗೋ ತಾತ್ಕಾಲಿಕವಾಗಿ ಹಾರಾಟವನ್ನು ಸ್ಥಗಿತಗೊಳಿಸಿತು.

ಶುಕ್ರವಾರ ಮಧ್ಯರಾತ್ರಿ 12.15ರಿಂದ 1.30ರವರೆಗೆ ಸುಮಾರು 15 ವಿಮಾನಗಳ ಮಾರ್ಗವನ್ನು ಬದಲಾಯಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೀಕ್ಷಣಾ ಸಾಮರ್ಥ್ಯದಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ಮತ್ತು ಲ್ಯಾಂಡಿಂಗ್​ನಲ್ಲಿ ಸಮಸ್ಯೆಯಾಗಿದ್ದು, ಪ್ರಯಾಣಿಕರು ಸಂಬಂಧಿಸಿದ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸುವಂತೆ ಸೂಚಿಸಲಾಯಿತು. ಅಲ್ಲದೇ ಈ ಅನಾನೂಕುಲಕ್ಕೆ ವಿಷಾದಿಸುವುದಾಗಿ ಇಂದು ಬೆಳಗ್ಗೆ 6.56ಕ್ಕೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ಸಂಸ್ಥೆ ಪೋಸ್ಟ್​ ಮಾಡಿದೆ.

ದೆಹಲಿ ಮಾತ್ರವಲ್ಲದೇ ಉತ್ತರ ಭಾರತದೆಲ್ಲೆಡೆ ಶೀತದ ಅಲೆ ಮತ್ತು ದಟ್ಟ ಮಂಜಿನ ಹೊದಿಕೆ ಕಂಡು ಬಂದಿದೆ. ಅನೇಕ ಕಡೆ ಸುಮಾರು ಶೂನ್ಯ ವೀಕ್ಷಣಾ ಅನುಭವ ಆಗಿದ್ದು, ಇದು ಸಾರಿಗೆ ಸೇವೆ ಸಂಚಾರಕ್ಕೆ ಸವಾಲಾಗಿದೆ. ಎನ್​ಸಿಆರ್​ ನೋಯ್ಡಾ, ಗ್ರೇಟರ್​ ನೋಯ್ಡಾ, ಉತ್ತರಪ್ರದೇಶದ ಗಾಜಿಯಾಬಾದ್​​ ಮತ್ತು ಗುರುಗ್ರಾಮ್​ ಮತ್ತು ಫರಿದಾಬಾದ್​​ ಹಾಗೂ ಹರಿಯಾಣದಲ್ಲಿ ಕಡಿಮೆ ಗೋಚರತೆಯ ಅನುಭವ ಆಗಿದೆ.

ಭಾರಿ ಪ್ರಮಾಣದಲ್ಲಿ ಮಂಜು ಕವಿದಿದ್ದರಿಂದ ವಾಹನ ಸವಾರರು ರಸ್ತೆಯಲ್ಲಿ ತೆವಳುತ್ತಾ ಸಾಗಿದ್ದು, ಈ ವಾತಾವರಣದಲ್ಲಿ ಪ್ರಯಾಣ ಪ್ರಾಸದಾಯಕವಾಗಿದೆ. ದಟ್ಟ ಮಂಜಿನ ಹೊದಿಕೆಯಿಂದಾಗಿ ಅನೇಕ ರೈಲುಗಳ ಸೇವೆ ಕೂಡ ವಿಳಂಬವಾಗಿದೆ. ದೆಹಲಿ, ನೋಯ್ಡಾ, ಗುರುಗ್ರಾಮ್​, ಕರ್ನಲ್​ ಮತ್ತು ಅಮೃತ್​ಸರದಲ್ಲಿ ರಸ್ತೆ ಸಾರಿಗೆ ಪ್ರಯಾಣದಲ್ಲಿ ಜನರು ತೊಂದರೆ ಅನುಭವಿಸುವಂತಾಗಿದೆ.

ದಟ್ಟ ಮಂಜಿನ ಹಿನ್ನೆಲೆ ಅಪಾಯವಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಐಎಂಡಿ ದೆಹಲಿ ನಿವಾಸಿಗಳಿಗೆ ಆರೇಂಜ್​ ಆಲರ್ಟ್​ ಘೋಷಿಸಿದೆ.

ತೀವ್ರ ಚಳಿಯಿಂದಾಗಿ ನೋಯ್ಡಾದಲ್ಲಿ 8ನೇ ತರಗತಿವರೆಗೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಿಮಾಚಲ ಪ್ರದೇಶದಲ್ಲಿ ಹಿಮಪಾತವಾಗುತ್ತಿದ್ದು, ಚಂಬಾ, ಕಂಗ್ರಾ ಮತ್ತು ಕಿನ್ನೂರ್​ನಲ್ಲಿ ಯೆಲ್ಲೋ ಆಲರ್ಟ್​ ಅನ್ನು ಐಎಂಡಿ ಘೋಷಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕೂಡ ಹಿಮಪಾತ ಮುಂದುವರೆದಿದ್ದು, ನಿವಾಸಿಗಳು ಅನಗತ್ಯ ಪ್ರಯಾಣ ಬೆಳೆಸದಂತೆ ಸುರಕ್ಷತಾ ಮಾರ್ಗಸೂಚಿ ಅನುಸರಿಸುವಂತೆ ತಿಳಿಸಿದೆ. (ಪಿಟಿಐ/ ಐಎಎನ್​ಎಸ್​)

ಇದನ್ನೂ ಓದಿ:ದೆಹಲಿಗೆ ದಟ್ಟ ಮಂಜಿನ ಹೊದಿಕೆ: 100ಕ್ಕೂ ಹೆಚ್ಚು ವಿಮಾನ, ರೈಲು ಹಾರಾಟದಲ್ಲಿ ವ್ಯತ್ಯಯ

ABOUT THE AUTHOR

...view details