ಕರ್ನಾಟಕ

karnataka

ತಂದೆ ನೀಡಿದ್ದ ಬಿಡದಿ ಬಳಿಯ ನೆಚ್ಚಿನ ಜಮೀನಿನಲ್ಲೇ ಪುನೀತ್ ಅಂತ್ಯಕ್ರಿಯೆ..!?

By

Published : Oct 29, 2021, 3:53 PM IST

Updated : Oct 29, 2021, 5:10 PM IST

ಬಿಡದಿ ಹೋಬಳಿಯ ಶೇಷಗಿರಿಹಳ್ಳಿ ಬಳಿ ಪುನೀತ್ ರಾಜ್​ಕುಮಾರ್ ಅವರ ಅಚ್ಚು ಮೆಚ್ಚಿನ ಜಮೀನು ಇದೆ. ಬಿಡದಿ ಹೋಬಳಿಯ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದೆ ಶೇಷಗಿರಿಹಳ್ಳಿಯ ಸರ್ವೇ ನಂ 72 ಹಾಗೂ 73 ಕ್ಕೆ ಸೇರಿದ ಸುಮಾರು 14 ರಿಂದ 15 ಎಕರೆ ಜಮೀನಿದೆ.

ಪುನೀತ್ ರಾಜ್​ಕುಮಾರ್
ಪುನೀತ್ ರಾಜ್​ಕುಮಾರ್

ರಾಮನಗರ : ದಿವಂಗತಪುನೀತ್ ರಾಜ್​ಕುಮಾರ್ ಅವರ ಅಂತ್ಯ ಸಂಸ್ಕಾರ ರಾಮನಗರ ಜಿಲ್ಲೆ ಬಿಡದಿಯಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಶೇಷಗಿರಿಹಳ್ಳಿ ಬಳಿ ಪುನೀತ್ ರಾಜ್​ಕುಮಾರ್ ಅವರ ಅಚ್ಚು ಮೆಚ್ಚಿನ ಜಮೀನಿಗೆ ರಾಮನಗರ ಎಸ್ಪಿ ಗಿರೀಶ್ ಭೇಟಿ ನೀಡಿ ಪರಿಶೀಲನೆ

ಪುನಿತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನಲ್ಲಿ ಮಾಡಬೇಕೋ, ಅಥವಾ ರಾಮನಗರದಲ್ಲಿ‌ ಮಾಡಬೇಕೋ ಎಂಬುದರ ಬಗ್ಗೆ ಕುಟುಂಬಸ್ಥರ ಜೊತೆ ತೀವ್ರ ಚರ್ಚೆಯಾಗುತ್ತಿದೆ. ಈ ನಡುವೆ ಬಿಡದಿಯಲ್ಲಿ ಪುನೀತ್ ರಾಜ್​ಕುಮಾರ್ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ರಾಮನಗರ ಎಸ್ಪಿ ಗಿರೀಶ್ ಪುನೀತ್ ರಾಜ್​ಕುಮಾರ್ ಅವರಿಗೆ ಸೇರಿದ ಬಿಡದಿ ಬಳಿ ಶೇಷಗಿರಿಹಳ್ಳಿ ಬಳಿಯ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶೇಷಗಿರಿಹಳ್ಳಿ ಬಳಿ ಪುನೀತ್ ರಾಜ್​ಕುಮಾರ್ ಅವರ ಅಚ್ಚು ಮೆಚ್ಚಿನ ಜಮೀನಿಗೆ ರಾಮನಗರ ಎಸ್ಪಿ ಗಿರೀಶ್ ಭೇಟಿ ನೀಡಿ ಪರಿಶೀಲನೆ

ಬಿಡದಿ ಹೋಬಳಿಯ ಶೇಷಗಿರಿಹಳ್ಳಿ ಬಳಿ ಪುನೀತ್ ರಾಜ್​ಕುಮಾರ್ ಅವರ ಅಚ್ಚು ಮೆಚ್ಚಿನ ಜಮೀನು ಇದೆ. ಬಿಡದಿ ಹೋಬಳಿಯ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಶೇಷಗಿರಿಹಳ್ಳಿಯ ಸರ್ವೇ ನಂ 72 ಹಾಗೂ 73 ರಲ್ಲಿ ಸುಮಾರು 14 ರಿಂದ 15 ಎಕರೆ ಜಮೀನಿದೆ.

ದಿವಂಗತ ಡಾ.ರಾಜ್ ಕುಮಾರ್ ಬೆಂಗಳೂರು ಮೈಸೂರಿಗೆ ಶೂಟಿಂಗ್ ತೆರಳುವ ಸಂದರ್ಭದಲ್ಲಿ ಬಿಡದಿಯಲ್ಲಿ ಇಡ್ಲಿ ತಿಂದೇ ಮುಂದೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಡಾ.ರಾಜ್ ಇಲ್ಲೊಂದು ಜಮೀನು ಖರೀದಿಸುವ ಯೋಜನೆ ಮಾಡಿ, ಅವತ್ತೇ 15 ಎಕರೆ ಜಾಗವನ್ನ ಶೇಷಗಿರಿಹಳ್ಳಿಯಲ್ಲಿ ತೆಗೆದುಕೊಂಡಿದ್ದರು. ನಂತರ ಈ ಜಮೀನಿನ ಸಂಪೂರ್ಣ ಉಸ್ತುವಾರಿಯನ್ನ ತಮ್ಮ ಕೊನೆಯ ಮಗ ಪುನೀತ್ ರಾಜ್​ಕುಮಾರ್ ಅವರಿಗೆ ವಹಿಸಿಕೊಟ್ಟಿದ್ದರು ಎನ್ನಲಾಗಿದೆ.

ಈ ಜಮೀನು ಪುನೀತ್ ರಾಜ್​ಕುಮಾರ್ ಅವರ ಅಚ್ಚು ಮೆಚ್ಚಿನ ಸ್ಥಳ. ಇಲ್ಲಿಯೇ ಇವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ರಾಮನಗರ ಎಸ್ಪಿ ಗಿರೀಶ್ ಹಾಗೂ ಬಿಡದಿ ಠಾಣೆಯ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಒಂದು ವೇಳೆ ಇಲ್ಲಿಯೇ ಅಂತ್ಯ ಸಂಸ್ಕಾರ ನಡೆದರೆ, ಯಾವ ರೀತಿ ಬಂದೂ ಬಸ್ತ್ ಕಲ್ಪಿಸಬೇಕು ಎಂದು ಬಗ್ಗೆ ಉನ್ನತ ಪೊಲೀಸ್​​ ಅಧಿಕಾರಿಗಳೊಂದಿಗೆ ಚರ್ಚೆ ಕೂಡ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Last Updated : Oct 29, 2021, 5:10 PM IST

ABOUT THE AUTHOR

...view details