ETV Bharat / health

ಯಕೃತ್​ ಸಮಸ್ಯೆ ಹೊಂದಿದ್ದರೆ ತುಪ್ಪ, ಕೊಬ್ಬರಿ ಎಣ್ಣೆ ಬಳಕೆ ಕಡಿಮೆ ಮಾಡಿ; ಏಕೆಂದರೆ? - fatty liver disease

author img

By IANS

Published : Jul 3, 2024, 4:50 PM IST

ಭಾರತದಲ್ಲಿ ಸಾವಿಗೆ ಕಾರಣವಾಗುತ್ತಿರುವ ಅಂಶಗಳಲ್ಲಿ ಯಕೃತ್​​ ಕಾಯಿಲೆ 10ನೇ ಸ್ಥಾನ ಪಡೆದುಕೊಂಡಿದೆ. ಹೀಗಾಗಿ ಈ ಬಗ್ಗೆ ಕಾಳಜಿ ವಹಿಸಬೇಕಾಗಿರುವುದು ಅಗತ್ಯ. ಬನ್ನಿ ಈ ಬಗ್ಗೆ ತಜ್ಞರು ಹೇಳುವುದೇನು ಅನ್ನೋದನ್ನು ಈ ಸುದ್ದಿಯಲ್ಲಿ ವಿವರವಾಗಿ ತಿಳಿದುಕೊಳ್ಳೋಣ.

fatty liver Patients limit the consumption of saturated fats like ghee and coconut oil
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)

ನವದೆಹಲಿ: ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಫ್ಯಾಟಿ ಲಿವರ್​ ಸಮಸ್ಯೆ ಹೆಚ್ಚಳ ಕಾಣುತ್ತಿದೆ. ಇಂತಹ ಯಕೃತ್​ ಸಮಸ್ಯೆ ಹೊಂದಿರುವವರು ಸಂಸ್ಕರಿತ ಕೊಬ್ಬು ಆಗಿರುವ ತುಪ್ಪ ಮತ್ತು ಕೊಬ್ಬರಿ ಎಣ್ಣೆ ಸೇವನೆಯನ್ನು ಮಿತಗೊಳಿಸುವುದು ಅಗತ್ಯ ಎಂದು ಹೆಪಟಾಲಾಜಿಸ್ಟ್​​ ಸಲಹೆ ನೀಡಿದ್ದಾರೆ

ಫ್ಯಾಟಿ ಲಿವರ್​ ಸಮಸ್ಯೆಯು ಸ್ಥೂಲಕಾಯ ಮತ್ತು ಮಧುಮೇಹದೊಂದಿಗೆ ಸಂಬಂಧ ಹೊಂದಿದೆ. ಅಧಿಕ ಮಟ್ಟದ ಕಾರ್ಬೋಹೈಡ್ರೇಟ್​ ಬಳಕೆಯು ಇನ್ಸುಲಿನ್​ ಮಟ್ಟವನ್ನು ಹೆಚ್ಚಿಸುತ್ತದೆ. ದೀರ್ಘಕಾಲ ಇನ್ಸುಲಿನ್​ ಮಟ್ಟವೂ ಇನ್ಸುಲಿನ್​ ಪ್ರತಿರೋಧಕಕ್ಕೆ ಕಾರಣವಾಗುತ್ತದೆ. ಇದು ಮೆಟಾಬಾಲಿಸಂ ಮತ್ತು ಅಧಿಕ ಗ್ಲುಕೋಸ್​ ಅನ್ನು ಫ್ಯಾಟಿ ಆಸಿಡ್​ ಆಗಿ ಮಾಡಿ, ಯಕೃತ್​ನಲ್ಲಿ ಸಂಗ್ರಹ ಮಾಡುತ್ತದೆ.

ಫ್ಯಾಟಿ ಲಿವರ್​ನಲ್ಲಿ ಎರಡು ವಿಧಗಳನ್ನು ಕಾಣಬಹುದಾಗಿದೆ. ಒಂದು ಆಲ್ಕೋಹಾಲಿಕ್​ ಫ್ಯಾಟಿ ಲಿವರ್​​ (ಎಫ್​ಎಲ್​ಡಿ) ಮತ್ತು ಆಲ್ಕೋಹಾಲೇತರ ಫ್ಯಾಟಿ ಲಿವರ್​ ಸಮಸ್ಯೆ (ಎನ್​ಎಎಫ್​ಎಲ್​ಡಿ/ ಎಂಎಎಸ್​ಎಲ್​ಡಿ) ಇವು ಯಕೃತ್​ ಊರಿಯುತ ಮತ್ತು ಹಾನಿಗೆ ಕಾರಣವಾಗಿ, ನಿಧಾನವಾಗಿ ಫೈಬ್ರೊಸಿಸ್​, ಸಿರೋಸಿಸ್​ ಅಥವಾ ಯಕೃತ್​ ಕ್ಯಾನ್ಸರ್​​ಗೆ ಕಾರಣವಾಗುತ್ತದೆ. ದೀರ್ಘಾವಧಿಯ ಯಕೃತ್​ ಕಾಯಿಲೆಯಲ್ಲಿನ ರೋಗಿಗಳು ಗಂಭೀರ ಪರಿಸ್ಥಿತಿ ಎದುರಿಸಬಹುದು.

ಭಾರತದ ವಿಚಾರದಲ್ಲಿ ನೀವು ಎನ್​ಎಎಫ್​ಎಲ್​ಡಿ ಸಮಸ್ಯೆ ಹೊಂದಿದ್ದರೆ, ಸಂಸ್ಕರಿತ ಕೊಬ್ಬಿನ ಮೂಲವನ್ನು ಆಹಾರದಲ್ಲಿ ಕಡಿತಗೊಳಿಸಿ ಎಂದು ಪ್ರಖ್ಯಾತ ಯಕೃತ್​ ವೈದ್ಯರಾದ ಡಾ ಅಬೆ ಫಿಲಿಪ್ಸ್​ ತಿಳಿಸಿದ್ದಾರೆ.

ತುಪ್ಪವನ್ನು ಅತ್ಯುತ್ತಮ ಆಹಾರ ಎಂದು ಪರಿಗಣಿಸಲಾಗಿದೆ. ಆದರೆ, ಇದು ತಪ್ಪು. ಇದು ಅಪಾಯ ಹೊಂದಿದೆ. ಅಲ್ಲದೇ, ಇದರಲ್ಲಿ ಶೇ 60ರಷ್ಟು ಅನಾರೋಗ್ಯಕರ ಕೊಬ್ಬು ಇದೆ. ಈ ಹಿನ್ನೆಲೆಯಲ್ಲಿ ಸಂಸ್ಕರಿಸಿದ ತುಪ್ಪ, ಬೆಣ್ಣೆ, ತೆಂಗಿನ ಎಣ್ಣೆ ಮತ್ತು ತಾಳೆ ಎಣ್ಣೆ ಹೊಂದಿರುವ ಆಹಾರಗಳನ್ನು ಸೀಮಿತಗೊಳಿಸುವುದು ಅಗತ್ಯ. ಸಂಸ್ಕರಿಸಿದ ಕೊಬ್ಬುಗಳು ಯಕೃತ್ತಿನ ಟ್ರೈಗ್ಲಿಸರೈಡ್‌ಗಳನ್ನು ಹೆಚ್ಚಿಸುತ್ತವೆ. ಇದು ಯಕೃತ್ತಿನ ಕೊಬ್ಬು, ಉರಿಯೂತ ಹೆಚ್ಚಿಸುತ್ತವೆ. ಇವುಗಳನ್ನು ಪರ್ಯಾಯ ಆಹಾರಯುತ ಬೀಜದ ಎಣ್ಣೆಗಳನ್ನು ಬಳಕೆ ಮಾಡುವುದರಿಂದ ಕೊಬ್ಬು ಕಡಿಮೆ ಮಾಡಬಹುದು.

ದೈನಂದಿನ ಅಡುಗೆಯಲ್ಲಿ ವೈವಿಧ್ಯಮಯ ಬೀಜದ ಎಣ್ಣೆ ಬಳಕೆ ಸಸ್ಯ ಆಧಾರಿತ ಪ್ರೋಟಿನ್​ ಮತ್ತು ತಾಜಾ ಹಣ್ಣನ್ನು ಸೇರಿಸಿ. ಮಾಂಸ, ಮೀನು, ಮೊಟ್ಟೆಗಳನ್ನು ಸಿಮೀತಗೊಳಿಸುವಂತೆ ಡಾ ಅಬ್ಬಿ ಶಿಫಾರಸು ಮಾಡಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ದತ್ತಾಂಶಗಳು ಹೇಳುವಂತೆ, ಭಾರತದಲ್ಲಿ ಸಾವಿಗೆ ಕಾರಣವಾಗುತ್ತಿರುವ ಅಂಶಗಳಲ್ಲಿ ಯಕೃತ್​​ ಕಾಯಿಲೆ 10ನೇ ಸ್ಥಾನ ಪಡೆದುಕೊಂಡಿದೆ. ಕಾಯಿಲೆ ಆರಂಭಿಕ ಪತ್ತೆ ಮುಖ್ಯವಾಗಿದೆ. ಅನೇಕ ಬಾರಿ ಈ ಕಾಯಿಲೆಗಳು ಬೆಳಕಿಗೆ ಬಾರದೇ ಅಂತಿಮ ಹಂತದಲ್ಲಿ ಗೋಚರಿಸುವುದು ಸಮಸ್ಯೆಯನ್ನು ಹೆಚ್ಚುವಂತೆ ಮಾಡುತ್ತದೆ. (ಐಎಎನ್​ಎಸ್​)

ಇದನ್ನೂ ಓದಿ: ಸದಾ ಜಂಕ್​ ಫುಡ್​ ಸೇವಿಸುತ್ತಿದ್ದ ಐಟಿ ಉದ್ಯೋಗಿ ಮಹಿಳೆಯ ಪಿತ್ತಕೋಶದಲ್ಲಿತ್ತು 1,500 ಕಲ್ಲು!

ನವದೆಹಲಿ: ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಫ್ಯಾಟಿ ಲಿವರ್​ ಸಮಸ್ಯೆ ಹೆಚ್ಚಳ ಕಾಣುತ್ತಿದೆ. ಇಂತಹ ಯಕೃತ್​ ಸಮಸ್ಯೆ ಹೊಂದಿರುವವರು ಸಂಸ್ಕರಿತ ಕೊಬ್ಬು ಆಗಿರುವ ತುಪ್ಪ ಮತ್ತು ಕೊಬ್ಬರಿ ಎಣ್ಣೆ ಸೇವನೆಯನ್ನು ಮಿತಗೊಳಿಸುವುದು ಅಗತ್ಯ ಎಂದು ಹೆಪಟಾಲಾಜಿಸ್ಟ್​​ ಸಲಹೆ ನೀಡಿದ್ದಾರೆ

ಫ್ಯಾಟಿ ಲಿವರ್​ ಸಮಸ್ಯೆಯು ಸ್ಥೂಲಕಾಯ ಮತ್ತು ಮಧುಮೇಹದೊಂದಿಗೆ ಸಂಬಂಧ ಹೊಂದಿದೆ. ಅಧಿಕ ಮಟ್ಟದ ಕಾರ್ಬೋಹೈಡ್ರೇಟ್​ ಬಳಕೆಯು ಇನ್ಸುಲಿನ್​ ಮಟ್ಟವನ್ನು ಹೆಚ್ಚಿಸುತ್ತದೆ. ದೀರ್ಘಕಾಲ ಇನ್ಸುಲಿನ್​ ಮಟ್ಟವೂ ಇನ್ಸುಲಿನ್​ ಪ್ರತಿರೋಧಕಕ್ಕೆ ಕಾರಣವಾಗುತ್ತದೆ. ಇದು ಮೆಟಾಬಾಲಿಸಂ ಮತ್ತು ಅಧಿಕ ಗ್ಲುಕೋಸ್​ ಅನ್ನು ಫ್ಯಾಟಿ ಆಸಿಡ್​ ಆಗಿ ಮಾಡಿ, ಯಕೃತ್​ನಲ್ಲಿ ಸಂಗ್ರಹ ಮಾಡುತ್ತದೆ.

ಫ್ಯಾಟಿ ಲಿವರ್​ನಲ್ಲಿ ಎರಡು ವಿಧಗಳನ್ನು ಕಾಣಬಹುದಾಗಿದೆ. ಒಂದು ಆಲ್ಕೋಹಾಲಿಕ್​ ಫ್ಯಾಟಿ ಲಿವರ್​​ (ಎಫ್​ಎಲ್​ಡಿ) ಮತ್ತು ಆಲ್ಕೋಹಾಲೇತರ ಫ್ಯಾಟಿ ಲಿವರ್​ ಸಮಸ್ಯೆ (ಎನ್​ಎಎಫ್​ಎಲ್​ಡಿ/ ಎಂಎಎಸ್​ಎಲ್​ಡಿ) ಇವು ಯಕೃತ್​ ಊರಿಯುತ ಮತ್ತು ಹಾನಿಗೆ ಕಾರಣವಾಗಿ, ನಿಧಾನವಾಗಿ ಫೈಬ್ರೊಸಿಸ್​, ಸಿರೋಸಿಸ್​ ಅಥವಾ ಯಕೃತ್​ ಕ್ಯಾನ್ಸರ್​​ಗೆ ಕಾರಣವಾಗುತ್ತದೆ. ದೀರ್ಘಾವಧಿಯ ಯಕೃತ್​ ಕಾಯಿಲೆಯಲ್ಲಿನ ರೋಗಿಗಳು ಗಂಭೀರ ಪರಿಸ್ಥಿತಿ ಎದುರಿಸಬಹುದು.

ಭಾರತದ ವಿಚಾರದಲ್ಲಿ ನೀವು ಎನ್​ಎಎಫ್​ಎಲ್​ಡಿ ಸಮಸ್ಯೆ ಹೊಂದಿದ್ದರೆ, ಸಂಸ್ಕರಿತ ಕೊಬ್ಬಿನ ಮೂಲವನ್ನು ಆಹಾರದಲ್ಲಿ ಕಡಿತಗೊಳಿಸಿ ಎಂದು ಪ್ರಖ್ಯಾತ ಯಕೃತ್​ ವೈದ್ಯರಾದ ಡಾ ಅಬೆ ಫಿಲಿಪ್ಸ್​ ತಿಳಿಸಿದ್ದಾರೆ.

ತುಪ್ಪವನ್ನು ಅತ್ಯುತ್ತಮ ಆಹಾರ ಎಂದು ಪರಿಗಣಿಸಲಾಗಿದೆ. ಆದರೆ, ಇದು ತಪ್ಪು. ಇದು ಅಪಾಯ ಹೊಂದಿದೆ. ಅಲ್ಲದೇ, ಇದರಲ್ಲಿ ಶೇ 60ರಷ್ಟು ಅನಾರೋಗ್ಯಕರ ಕೊಬ್ಬು ಇದೆ. ಈ ಹಿನ್ನೆಲೆಯಲ್ಲಿ ಸಂಸ್ಕರಿಸಿದ ತುಪ್ಪ, ಬೆಣ್ಣೆ, ತೆಂಗಿನ ಎಣ್ಣೆ ಮತ್ತು ತಾಳೆ ಎಣ್ಣೆ ಹೊಂದಿರುವ ಆಹಾರಗಳನ್ನು ಸೀಮಿತಗೊಳಿಸುವುದು ಅಗತ್ಯ. ಸಂಸ್ಕರಿಸಿದ ಕೊಬ್ಬುಗಳು ಯಕೃತ್ತಿನ ಟ್ರೈಗ್ಲಿಸರೈಡ್‌ಗಳನ್ನು ಹೆಚ್ಚಿಸುತ್ತವೆ. ಇದು ಯಕೃತ್ತಿನ ಕೊಬ್ಬು, ಉರಿಯೂತ ಹೆಚ್ಚಿಸುತ್ತವೆ. ಇವುಗಳನ್ನು ಪರ್ಯಾಯ ಆಹಾರಯುತ ಬೀಜದ ಎಣ್ಣೆಗಳನ್ನು ಬಳಕೆ ಮಾಡುವುದರಿಂದ ಕೊಬ್ಬು ಕಡಿಮೆ ಮಾಡಬಹುದು.

ದೈನಂದಿನ ಅಡುಗೆಯಲ್ಲಿ ವೈವಿಧ್ಯಮಯ ಬೀಜದ ಎಣ್ಣೆ ಬಳಕೆ ಸಸ್ಯ ಆಧಾರಿತ ಪ್ರೋಟಿನ್​ ಮತ್ತು ತಾಜಾ ಹಣ್ಣನ್ನು ಸೇರಿಸಿ. ಮಾಂಸ, ಮೀನು, ಮೊಟ್ಟೆಗಳನ್ನು ಸಿಮೀತಗೊಳಿಸುವಂತೆ ಡಾ ಅಬ್ಬಿ ಶಿಫಾರಸು ಮಾಡಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ದತ್ತಾಂಶಗಳು ಹೇಳುವಂತೆ, ಭಾರತದಲ್ಲಿ ಸಾವಿಗೆ ಕಾರಣವಾಗುತ್ತಿರುವ ಅಂಶಗಳಲ್ಲಿ ಯಕೃತ್​​ ಕಾಯಿಲೆ 10ನೇ ಸ್ಥಾನ ಪಡೆದುಕೊಂಡಿದೆ. ಕಾಯಿಲೆ ಆರಂಭಿಕ ಪತ್ತೆ ಮುಖ್ಯವಾಗಿದೆ. ಅನೇಕ ಬಾರಿ ಈ ಕಾಯಿಲೆಗಳು ಬೆಳಕಿಗೆ ಬಾರದೇ ಅಂತಿಮ ಹಂತದಲ್ಲಿ ಗೋಚರಿಸುವುದು ಸಮಸ್ಯೆಯನ್ನು ಹೆಚ್ಚುವಂತೆ ಮಾಡುತ್ತದೆ. (ಐಎಎನ್​ಎಸ್​)

ಇದನ್ನೂ ಓದಿ: ಸದಾ ಜಂಕ್​ ಫುಡ್​ ಸೇವಿಸುತ್ತಿದ್ದ ಐಟಿ ಉದ್ಯೋಗಿ ಮಹಿಳೆಯ ಪಿತ್ತಕೋಶದಲ್ಲಿತ್ತು 1,500 ಕಲ್ಲು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.