ಹಾವೇರಿ :ಭಾರಿ ಗಾಳಿಗೆ 150 ಕ್ಕೂ ಅಧಿಕ ಅಡಿಕೆ ಮರಗಳು ಧರೆಗುರುಳಿದ ಘಟನೆ ರಟ್ಟಿಹಳ್ಳಿ ತಾಲೂಕಿನ ಚಿಕ್ಕಮೊರಬ ಗ್ರಾಮದಲ್ಲಿ ನಡೆದಿದೆ.
ಭಾರೀ ಗಾಳಿಗೆ ಧರೆಗುರುಳಿದ 150ಕ್ಕೂ ಹೆಚ್ಚು ಅಡಿಕೆ ಮರಗಳು
ಗ್ರಾಮದ ಶಿವನಗೌಡ ಮಲಗಿನಹಳ್ಳಿ ಮತ್ತು ಬಸನಗೌಡ ಮಲಗಿನಹಳ್ಳಿ ಎಂಬ ರೈತರಿಗೆ ಸೇರಿದ ಅಡಿಕೆ ತೋಟಗಳಲ್ಲಿ ಈ ಹಾನಿ ಸಂಭವಿಸಿದೆ. ರೈತರಿಬ್ಬರ ತೋಟದಲ್ಲಿ ಬೆಳೆದಿದ್ದ ಅಡಿಕೆ ಮರಗಳು ಧರೆಗುರುಳಿದ್ದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಗಿಡ ನೆಟ್ಟು ಕಷ್ಟಪಟ್ಟು ಬೆಳೆಸಿದ್ದ ಅಡಿಕೆ ಮರಗಳು ಇನ್ನೇನು ಫಸಲು ನೀಡಲಾರಂಭಿಸುತ್ತಿದ್ದಂತೆ ಈ ರೀತಿಯಾಗಿರುವದು ರೈತರಿಗೆ ಇನ್ನಿಲ್ಲದ ಅಘಾತತಂದಿದೆ. ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಈ ಕಡೆ ಭೇಟಿ ನೀಡಿ ತಮಗಾದ ಹಾನಿಗೆ ಪರಿಹಾರ ನೀಡುವಂತೆ ರೈತರು ಮನವಿ ಮಾಡಿದ್ದಾರೆ.