ಹುಬ್ಬಳ್ಳಿ :ಚಹಾ ಕೊಡುವುದಕ್ಕೆ ತಡ ಮಾಡಿದ್ದರಿಂದ ಅಪರಾಧ ಹಿನ್ನೆಲೆಯುಳ್ಳ ಯುವಕನನೊಬ್ಬ ಅಯೋಧ್ಯ ಹೋಟೆಲ್ ಮ್ಯಾನೇಜರ್ನನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಟೀ ನೀಡುವ ವಿಚಾರಕ್ಕೆ ಹೋಟೆಲ್ ಮ್ಯಾನೇಜರ್ನನ್ನೇ ಥಳಿಸಿದ ಕೊಲೆ ಆರೋಪಿ.. ನಗರದ ಹಳೇ ಬಸ್ ನಿಲ್ದಾಣದ ಮುಂದಿರುವ ಅಯೋಧ್ಯಾ ಹೊಟೇಲ್ನಲ್ಲಿ ಈ ಘಟನೆ ನಡೆದಿದ್ದು, ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಲ್ಲಪ್ಪ ಶಿರಕೋಳ ತನ್ನ ಸಹಚರನೊಂದಿಗೆ ಹೋಟೆಲ್ನಲ್ಲಿ ಚಹಾಗೆ ಆರ್ಡರ್ ಮಾಡಿದ್ದನು.
ಹೋಟೆಲ್ನಲ್ಲಿ ಗ್ರಾಹಕರು ಹೆಚ್ಚಾಗಿದ್ದ ಕಾರಣ ಕಲ್ಲಪ್ಪನಿಗೆ ಚಹಾ ನೀಡಲು ತಡವಾಗಿದೆ. ಇದನ್ನೇ ನೆಪ ಮಾಡಿಕೊಂಡ ಕಲ್ಲಪ್ಪ ತನ್ನ ಸಹಚರರೊಂದಿಗೆ ಸೇರಿ ಹೋಟೆಲ್ ಮ್ಯಾಜನರ್ಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಇಡೀ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಟೀ ನೀಡುವ ವಿಚಾರಕ್ಕೆ ಹೋಟೆಲ್ ಮ್ಯಾನೇಜರ್ನನ್ನೇ ಥಳಿಸಿದ ಕೊಲೆ ಆರೋಪಿ ಕಲ್ಲಪ್ಪ ಶಿರಕೋಳ ಕಲ್ಲಪ್ಪ ಶಿರಕೋಳ ಗುಂಡಾ ವರ್ತನೆ ಇದೇ ಮೊದಲಲ್ಲ. ಈಗಾಗಲೇ ಮರ್ಡರ್ ಕೇಸ್ವೊಂದರಲ್ಲಿ ಅಪರಾಧಿಯಾಗಿರುವ ಈತ ಸದ್ಯ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾನೆ. ಈಗ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ ಕಲ್ಲಪ್ಪ ಮತ್ತೆ ಸುದ್ದಿಯಾಗಿದ್ದಾನೆ.
ಈ ಸಂಬಂಧ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.