ಕರ್ನಾಟಕ

karnataka

ಭಾರತ-ಆಫ್ರಿಕಾ ಟಿ-20: ಚಿನ್ನಸ್ವಾಮಿ ಸ್ಟೇಡಿಯಂಗೆ ಬರುವ ಪ್ರಯಾಣಿಕರಿಗೆ ಹೆಚ್ಚುವರಿ ಬಸ್‌ ವ್ಯವಸ್ಥೆ

By

Published : Sep 20, 2019, 9:05 PM IST

ಭಾರತ- ದಕ್ಷಿಣ ಆಪ್ರಿಕಾ ನಡುವಿನ 3ನೇ ಟಿ-20 ಪಂದ್ಯಾವಳಿಯು ಇದೇ ಭಾನುವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕ್ರಿಕೆಟ್ ವೀಕ್ಷಣೆಗೆ ಆಗಮಿಸುವ ಕ್ರಿಕೆಟ್‌ ಪ್ರೇಮಿಗಳ ಅನುಕೂಲಕ್ಕಾಗಿ ಬಿಎಂಟಿಸಿ ಹೆಚ್ಚಿನ ಬಸ್‌ ವ್ಯವಸ್ಥೆ ಕಲ್ಪಿಸಿದೆ.

ಟಿ-20 ಕ್ರಿಕೆಟ್ ವೀಕ್ಷಣೆಗೆ ಬರುವ ಪ್ರಯಾಣಿಕರಿಗೆ ಬಿಎಂಟಿಸಿಯಿಂದ ಹೆಚ್ಚುವರಿ ಬಸ್​ ವ್ಯವಸ್ಥೆ

ಬೆಂಗಳೂರು:ಇದೇ ಭಾನುವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವಭಾರತ-ದ.ಆಫ್ರಿಕಾಟಿ-20 ಪಂದ್ಯಾವಳಿ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಬಿಎಂಟಿಸಿ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಿದೆ.

ಟಿ-20 ಕ್ರಿಕೆಟ್ ವೀಕ್ಷಣೆಗೆ ಬರುವ ಪ್ರಯಾಣಿಕರಿಗೆ ಬಿಎಂಟಿಸಿಯಿಂದ ಹೆಚ್ಚುವರಿ ಬಸ್​ ವ್ಯವಸ್ಥೆ

ಪಂದ್ಯಾ ಸಂಜೆ 07.00 ಗಂಟೆಗೆ ಶುರುವಾಗಲಿದ್ದು, ಪ್ರಯಾಣಿಕರು ಚಿನ್ನಸ್ವಾಮಿ ಕ್ರೀಡಾಂಗಣದ ಹತ್ತಿರ ಇರುವ ನಿಲುಗಡೆಯಲ್ಲಿ ಇಳಿಯುವುದು ಹಾಗೂ ಕ್ರಿಕೆಟ್ ಪಂದ್ಯ ಮುಗಿದ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸುಮಾರು ರಾತ್ರಿ 11:30 ಗಂಟೆಗೆ ಮನೆಗೆ ತೆರಳಲು, ಕ್ರೀಡಾಂಗಣದಿಂದಲೇ ಚೀಟಿ ವಿತರಿಸಿ ಹೆಚ್ಚುವರಿ ಬಸ್ಸುಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ.

ಬಸ್​ ರೂಟ್‌ ವ್ಯವಸ್ಥೆ ಹೀಗಿದೆ:

* ಶಿವಾಜಿನಗರದಿಂದ- ಕಾಡುಗೋಡಿ ಬಸ್ ನಿಲ್ದಾಣ ( ಮಾರ್ಗ: ಟ್ರಿನಿಟಿ, ದೊಮ್ಮಲೂರು, ಹೆಚ್ ಎ ಎಲ್, ಮಾರತಹಳ್ಳಿ),
* ಮೆಯೋ ಹಾಲ್​ನಿಂದ ಸರ್ಜಾಪುರ (ಮಾರ್ಗ: ವಿವೇಕ್ ನಗರ, ಕೋರಮಂಗಲ, ಅಗರ),
* ಬ್ರಿಗೇಡ್ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ ( ಮಾರ್ಗ: ಆಡುಗೋಡಿ ಮಡಿವಾಳ,ಬೊಮ್ಮನಹಳ್ಳಿ),
* ಬ್ರಿಗೇಡ್ ರಸ್ತೆಯಿಂದ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ವರೆಗೆ ( ಮಾರ್ಗ: ಆಡುಗೋಡಿ, ಜಯದೇವ ಆಸ್ಪತ್ರೆ ,ಹುಳಿಮಾವು ಗೇಟ್),
* ಶಾಂತಿನಗರ ಬಸ್ ನಿಲ್ದಾಣದಿಂದ ಕೆಂಗೇರಿ ಕೆಹೆಚ್ಬಿ ಕ್ವಾಟ್ರಸ್ವರೆಗೆ ( ಮಾರ್ಗ: ಮೈಸೂರು ರಸ್ತೆ, ನಾಯಂಡಳ್ಳಿ, ಕೆಂಗೇರಿ),
* ಕೆಂಪೇಗೌಡ ಬಸ್ ನಿಲ್ದಾಣದಿಂದ ಜನಪ್ರಿಯ ಟೌನ್ ಶಿಪ್ವರೆಗೆ ( ಮಾರ್ಗ: ಮಾಗಡಿ ರಸ್ತೆ, ಸುಂಕದಕಟ್ಟೆ ಗೊಲ್ಲರಹಟ್ಟಿ ),
* ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ನೆಲಮಂಗಲದವರೆಗೆ ( ಮಾರ್ಗ:ಶಿವಾಜಿನಗರ, ಮೇಕ್ರಿ ಸರ್ಕಲ್ ,ಯಶವಂತಪುರ),
* ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಯಲಹಂಕ 5 ನೇ ಹಂತವರೆಗೆ ( ಮಾರ್ಗ: ಶಿವಾಜಿನಗರ, ಮೇಕ್ರಿ ಸರ್ಕಲ್, ಹೆಬ್ಬಾಳ)
* ಕೆ ಆರ್ ಮಾರ್ಕೆಟ್​ನಿಂದ ಆರ್ ಕೆ ಹೆಗಡೆ ನಗರದವರೆಗೆ ( ಮಾರ್ಗ: ಶಿವಾಜಿನಗರ ಟ್ಯಾನರಿ ರೋಡ್ ನಾಗವಾರ),
* ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಬಾಗಲೂರುವರೆಗೆ(ಮಾರ್ಗ: ಶಿವಾಜಿನಗರ, ಲಿಂಗರಾಜಪುರ, ಹೆಣ್ಣೂರು ಕ್ರಾಸ್)

ABOUT THE AUTHOR

...view details