ಪುತ್ತೂರು: ರಿಕ್ಷಾ ಚಾಲಕ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಪ್ಯ ಕೊಲ್ಯ ಎಂಬಲ್ಲಿ ಇಂದು ನಡೆಯಿತು. ಪುರುಷರಕಟ್ಟೆಯ ಪಾಪೆತ್ತಡ್ಕ ನಿವಾಸಿ ಮಹಮ್ಮದ್ (48) ಆತ್ಮಹತ್ಯೆ ಮಾಡಿಕೊಂಡವರು.
ಸಂಪ್ಯದ ಕೊಲ್ಯ ಎಂಬಲ್ಲಿರುವ ಗಣಪತಿ ವಿಗ್ರಹ ವಿಸರ್ಜನೆಯ ಕೆರೆಗೆ ಮಹಮ್ಮದ್ ಹಾರಲು ಯತ್ನಿಸಿದ್ದು, ಸ್ಥಳೀಯರು ಜೋರಾಗಿ ಕೂಗಿದ್ದಾರೆ. ಆದರೂ ಅವರು ಕೆರೆಗೆ ಹಾರಿದ್ದಾರೆ. ತಕ್ಷಣ ರಕ್ಷಿಸುವ ಪ್ರಯತ್ನ ನಡೆಯಿತಾದರೂ ಅಷ್ಟರೊಳಗೆ ಸಂಪೂರ್ಣ ಮುಳುಗಿದ್ದರು.
ಪೊಲೀಸರು ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪುತ್ತೂರಿನ ಸಂಪ್ಯ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮನೆ ಬಿಟ್ಟು ಹೋದ ತಂದೆಗಾಗಿ ಕಾಯುತ್ತಿದೆ ಮಗಳ ಶವ: ಅಂತ್ಯ ಸಂಸ್ಕಾರಕ್ಕೆ ಬರುವಂತೆ ಮನವಿ - DEAD BODY WAITING FOR FATHER