ETV Bharat / snippets

ದೇವರ ದರ್ಶನ ಪಡೆದು ಹೊರಬಂದ ಭಕ್ತ ಹೃದಯಾಘಾತದಿಂದ ಸಾವು!

author img

By ETV Bharat Karnataka Team

Published : Aug 30, 2024, 6:08 PM IST

DEVOTEE DIES OF HEART ATTACK
ಅಂಜನಾದ್ರಿ ಬೆಟ್ಟ (ETV Bharat)

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ ಏರಿದ ಬಳಿಕ ಭಕ್ತರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಭಾಗಚಂದ್ ಠಾಕ್ (63) ಮೃತ ಭಕ್ತ. ರಾಜಸ್ಥಾನ ಮೂಲದ ಭಾಗಚಂದ್ ಠಾಕ್ ಅವರು ಧಾರ್ಮಿಕ ಸ್ಥಳಗಳ ದರ್ಶನಕ್ಕೆಂದು ಆಂಜನೇಯನ ಜನ್ಮಸ್ಥಳ ಎಂದು ಪ್ರಸಿದ್ಧಿ ಪಡೆದಿರುವ ಅಂಜನಾದ್ರಿ ಪರ್ವತಕ್ಕೆ ಭೇಟಿ ನೀಡಿದ್ದರು. ಅದರಂತೆ ಮೊದಲು ಅಂಜನಾದ್ರಿ ಬೆಟ್ಟ ಏರಿದ್ದರು. ಆದರೆ, ಆಂಜನೇಯ ದರ್ಶನ ಪಡೆದು ಹೊರಗಡೆ ಬಂದಾಗ ಹೃದಯಾಘಾತ ಸಂಭವಿಸಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ ಏರಿದ ಬಳಿಕ ಭಕ್ತರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಭಾಗಚಂದ್ ಠಾಕ್ (63) ಮೃತ ಭಕ್ತ. ರಾಜಸ್ಥಾನ ಮೂಲದ ಭಾಗಚಂದ್ ಠಾಕ್ ಅವರು ಧಾರ್ಮಿಕ ಸ್ಥಳಗಳ ದರ್ಶನಕ್ಕೆಂದು ಆಂಜನೇಯನ ಜನ್ಮಸ್ಥಳ ಎಂದು ಪ್ರಸಿದ್ಧಿ ಪಡೆದಿರುವ ಅಂಜನಾದ್ರಿ ಪರ್ವತಕ್ಕೆ ಭೇಟಿ ನೀಡಿದ್ದರು. ಅದರಂತೆ ಮೊದಲು ಅಂಜನಾದ್ರಿ ಬೆಟ್ಟ ಏರಿದ್ದರು. ಆದರೆ, ಆಂಜನೇಯ ದರ್ಶನ ಪಡೆದು ಹೊರಗಡೆ ಬಂದಾಗ ಹೃದಯಾಘಾತ ಸಂಭವಿಸಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಪತ್ನಿ ನಿಧನದ ಸುದ್ದಿ ಕೇಳಿ ಪತಿಗೆ ಹೃದಯಾಘಾತ:‌ ಸಾವಿನಲ್ಲೂ ಜೊತೆಯಾದ ದಂಪತಿ - couple united in death

ETV Bharat Logo

Copyright © 2024 Ushodaya Enterprises Pvt. Ltd., All Rights Reserved.