ETV Bharat / snippets

ಪಂಪಾ ಸರೋವರದಲ್ಲಿ ದಾಳಿ ಮಾಡಿ ನಾಯಿ ಹೊತ್ತೊಯ್ದ ಚಿರತೆ

author img

By ETV Bharat Karnataka Team

Published : Sep 11, 2024, 5:30 PM IST

leopard killed dog
ನಾಯಿ ಹೊತ್ತೊಯ್ದ ಚಿರತೆ (ETV Bharat)

ಗಂಗಾವತಿ: ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಪಂಪಾ ಸರೋವರದಲ್ಲಿ ಚಿರತೆ ಪ್ರತ್ಯಕ್ಷವಾದ ಘಟನೆ ಬುಧವಾರ ಬೆಳಗಿನಜಾವ ನಡೆದಿದೆ. ಚಿರತೆಯು ವಿಜಯಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಮಲಗಿದ್ದ ನಾಯಿ ಮೇಲೆ ದಾಳಿ ಮಾಡಿ, ಹೊತ್ತೊಯ್ದಿದೆ.

ದೇವಸ್ಥಾನದ ಸಮೀಪದ ಬೆಟ್ಟದಿಂದ ಇಳಿದು ಬಂದ ಚಿರತೆಯು ದೇವಸ್ಥಾನದ ಆವರಣಕ್ಕೆ ನುಗ್ಗಿ, ಅಲ್ಲಿ ಮಲಗಿದ್ದ ನಾಯಿ ಮೇಲೆ ದಾಳಿ ಮಾಡಿ ಎಳೆದೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಕೆಲವರು ದೇಗುಲದ ಆವರಣದಲ್ಲಿಯೇ ಮಲಗುತ್ತಾರೆ. ಇದೀಗ, ಚಿರತೆ ದಾಳಿಯಿಂದ ಆತಂಕ ಎದುರಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಗಂಗಾವತಿ: ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಪಂಪಾ ಸರೋವರದಲ್ಲಿ ಚಿರತೆ ಪ್ರತ್ಯಕ್ಷವಾದ ಘಟನೆ ಬುಧವಾರ ಬೆಳಗಿನಜಾವ ನಡೆದಿದೆ. ಚಿರತೆಯು ವಿಜಯಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಮಲಗಿದ್ದ ನಾಯಿ ಮೇಲೆ ದಾಳಿ ಮಾಡಿ, ಹೊತ್ತೊಯ್ದಿದೆ.

ದೇವಸ್ಥಾನದ ಸಮೀಪದ ಬೆಟ್ಟದಿಂದ ಇಳಿದು ಬಂದ ಚಿರತೆಯು ದೇವಸ್ಥಾನದ ಆವರಣಕ್ಕೆ ನುಗ್ಗಿ, ಅಲ್ಲಿ ಮಲಗಿದ್ದ ನಾಯಿ ಮೇಲೆ ದಾಳಿ ಮಾಡಿ ಎಳೆದೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಕೆಲವರು ದೇಗುಲದ ಆವರಣದಲ್ಲಿಯೇ ಮಲಗುತ್ತಾರೆ. ಇದೀಗ, ಚಿರತೆ ದಾಳಿಯಿಂದ ಆತಂಕ ಎದುರಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ತುಮಕೂರು: ತಂತಿ ಬೇಲಿಗೆ ಸಿಲುಕಿದ್ದ ಕರಡಿಯ ರಕ್ಷಣೆ: ಸಾರ್ವಜನಿಕರ ನಿದ್ದೆಗೆಡಿಸಿದ್ದ ಚಿರತೆ ಸೆರೆ - Rescue of bear

ETV Bharat Logo

Copyright © 2024 Ushodaya Enterprises Pvt. Ltd., All Rights Reserved.